![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Mar 24, 2024, 9:52 AM IST
ಹೊಸದಿಲ್ಲಿ: ಕಾಂಗ್ರೆಸ್ ಬಹಳಷ್ಟು ಬ್ಯಾಂಕ್ ಖಾತೆಗಳನ್ನು ಹೊಂದಿದ್ದು, ಸಕಾಲಕ್ಕೆ ತೆರಿಗೆ ಪಾವತಿಸದ್ದಕ್ಕೆ ಮೂರ್ನಾಲ್ಕು ಖಾತೆಗಳನ್ನು ಐ.ಟಿ ಇಲಾಖೆ ಜಪ್ತಿ ಮಾಡಿದೆಯಷ್ಟೇ ಹೊರತು ಅವುಗಳನ್ನು ಸ್ಥಗಿತ ಮಾಡಿಲ್ಲ. ಆದರೆ ಕಾಂಗ್ರೆಸ್ ಪಕ್ಷವು ಚುನಾವಣೆಯಲ್ಲಿ ಸೋಲುವ ಭಯದಿಂದ ಈ ವಿಷಯದ ಕುರಿತು ತಪ್ಪು ಮಾಹಿತಿ ನೀಡುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.
ಈ ಖಾತೆಗಳನ್ನು ಸ್ಥಗಿತಗೊಳಿಸಿಲ್ಲ. ಅವು ಕಾರ್ಯಾಚರಣೆಯಲ್ಲಿವೆ. ನೀವು(ಕಾಂಗ್ರೆಸ್) ಹಣವನ್ನು ಠೇವಣಿ ಮಾಡಬಹುದು ಮತ್ತು 125 ಕೋಟಿ ರೂ.ವರೆಗೂ ಹಿಂಪಡೆಯಬಹುದು. ಆದರೆ ಸಕಾಲಕ್ಕೆ ತೆರಿಗೆ ಪಾವತಿ ಮಾಡದ್ದಕ್ಕೆ ಕೆಲವು ಖಾತೆಗಳನ್ನು ಐ.ಟಿ. ಇಲಾಖೆಯು ಜಪ್ತಿ ಮಾಡಿದೆ ಎಂದು ಬಿಜೆಪಿಯ ವಕ್ತಾರ ಸಂಬಿತ್ ಪಾತ್ರಾ ಹೇಳಿದ್ದಾರೆ.
ರೈಲ್ವೇ ಟಿಕೆಟ್ ಖರೀದಿಸುವುದಕ್ಕೂ ಹಣ ಇಲ್ಲ ಎನ್ನುವ ರಾಹುಲ್ ಗಾಂಧಿ ಅವರು, ನಿತ್ಯ ಚಾರ್ಟರ್ಡ್ ವಿಮಾನಗಳಲ್ಲಿ ಸಂಚರಿಸುತ್ತಿದ್ದಾರೆ ಎಂದು ಆರೋಪಿಸಿದ ಸಂಬಿತ್ ಪಾತ್ರಾ, ಈ ಪ್ರಕರಣದಲ್ಲಿ ರಾಜಕೀಯದ ಉತ್ತರದ ಬದಲು ಕಾಂಗ್ರೆಸ್ ಪಕ್ಷವು ತಾಂತ್ರಿಕವಾಗಿ ಉತ್ತರ ನೀಡಬೇಕು ಎಂದು ಬಿಜೆಪಿ ವಕ್ತಾರರು ಆಗ್ರಹಿಸಿದರು. ಉದ್ದೇಶಪೂರ್ವಕವಾಗಿ ಖಾತೆ ಸ್ಥಗಿತ ಮಾಡಲಾಗಿದೆ ಎಂಬುದು ಕಾಂಗ್ರೆಸ್ ಆರೋಪವಾಗಿದೆ.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.