ಸದ್ದಾಂ, ಜನಾರ್ದನ ರೆಡ್ಡಿ ರೀತಿ ಜಗನ್ ಮನೆ ನಿರ್ಮಾ ಣ: ಟಿಡಿಪಿ
ಋಷಿಕೊಂಡ ಬೆಟ್ಟ ಮೇಲೆ 500 ಕೋಟಿ ಕಾಮಗಾರಿ ಆರೋಪ
Team Udayavani, Jun 18, 2024, 10:19 PM IST
ಅಮರಾವತಿ: ಪ್ರವಾಸೋದ್ಯಮ ಯೋಜನೆಗಳ ಅಭಿವೃದ್ಧಿಗೆಂದು ನೀಡಿದ್ದ ಅನುಮತಿಯನ್ನು ಆಂಧ್ರಪ್ರದೇಶದ ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ದುರುಪಯೋಗ ಪಡಿಸಿಕೊಂಡಿದ್ದಾರೆ. ಸಾರ್ವಜನಿಕರ ಹಣವನ್ನು ಬಳಸಿಕೊಂಡು ಋಷಿಕೊಂಡ ಬೆಟ್ಟದ ಮೇಲೆ 500 ಕೋಟಿ ರೂ. ವೆಚ್ಚದಲ್ಲಿ ಅರಮನೆಯನ್ನು ಕಟ್ಟಿಸಿಕೊಂಡಿದ್ದಾರೆ ಎಂದು ಆಡಳಿತಾರೂಢ ಟಿಡಿಪಿ ಆರೋಪಿಸಿದೆ.
ಶಾಸಕ ಗಂಟ ಶ್ರೀನಿವಾಸ್ ರಾವ್ ಅವರ ನಿಯೋಗವು ರಿಷಿಕೊಂಡ ಬೆಟ್ಟದ ಮೇಲಿನ ಅರಮನೆಗೆ ಇತ್ತೀಚೆಗೆ ತಮ್ಮ ನಿಯೋಗದೊಂದಿಗೆ ಭೇಟಿ ನೀಡಿದ್ದರು. ಆ ಬಳಿಕ ಜಗನ್ ವಿರುದ್ಧ ಹರಿಹಾಯ್ದಿರುವ ಅವರು, ಇರಾಕ್ ಸರ್ವಾಧಿಕಾರಿ ಸದ್ದಾಂ ಹುಸೇನ್ ಹಾಗೂ ಕರ್ನಾಟಕದ ಗಾಲಿ ಜನಾರ್ಧನ ರೆಡ್ಡಿ ಅವರ ಅರಮನೆಯ ರೀತಿಯ ಅರಮನೆಯನ್ನು ಜಗನ್ ಪ್ರವಾಸೋದ್ಯಮದ ಹೆಸರಿನಲ್ಲಿ ಬೆಟ್ಟದ ಮೇಲೆ ನಿರ್ಮಿಸಿದ್ದಾರೆ. 9.88 ಎಕರೆ ವ್ಯಾಪ್ತಿಯಲ್ಲಿ ಭವ್ಯವಾದ ಅರಮನೆಯನ್ನು ಕಟ್ಟಿಸಲಾಗಿದ್ದು, ಅದರ ನಿರ್ಮಾಣ ಕಾಣದಂತೆ ಸುತ್ತಲೂ 20 ಅಡಿ ಎತ್ತರ ತಡೆಗೋಡೆ ನಿರ್ಮಿಸಲಾಗಿದೆ ಎಂದಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.