ಸಂಘ ಶಿಕ್ಷಾ ವರ್ಗ ನವೀಕರಣಕ್ಕೆ ಚಿಂತನೆ
ಶಿಬಿರದ ಅವಧಿ ಕಡಿತಕ್ಕೆ ಆರ್ಎಸ್ಎಸ್ ವಲಯದಲ್ಲಿ ಚರ್ಚೆ- ದಂಡದ ಗಾತ್ರ ಬದಲಿಸಲೂ ಚಿಂತನೆ
Team Udayavani, Jul 28, 2023, 7:51 AM IST
ನಾಗ್ಪುರ: ಮುಂದಿನ ವರ್ಷ ವಿಜಯದಶಮಿಯಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್ಎಸ್ಎಸ್)ವು ಶತಮಾನೋತ್ಸವ ವರ್ಷವನ್ನು ಆಚರಿಸುತ್ತಿದೆ. ಈ ಸಂದರ್ಭದಲ್ಲಿ ತನ್ನ ದಶಕಗಳ ಹಳೆಯ ತರಬೇತಿ ವ್ಯವಸ್ಥೆಯನ್ನು ನವೀಕರಿಸಲು ಸಂಘ ಚಿಂತನೆ ನಡೆಸುತ್ತಿದೆ.
ಈ ತರಬೇತಿ ಶಿಬಿರವನ್ನು ಆಫೀಸರ್ ಟ್ರೈನಿಂಗ್ ಕ್ಯಾಂಪ್(ಒಟಿಸಿ) ಅಥವಾ ಸಂಘ ಶಿಕ್ಷಾ ವರ್ಗ ಎಂದು ಕರೆಯಲಾಗುತ್ತದೆ. ಇನ್ನೊಂದೆಡೆ, ಆರ್ಎಸ್ಎಸ್ ಸ್ವಯಂ ಸೇವಕರು ಉಪಯೋಗಿಸುವ ಸಾಂಪ್ರದಾಯಿಕ ದಂಡ(ಬಿದಿರಿನ ದೊಣ್ಣೆ)ದ ಗಾತ್ರವನ್ನು ತಗ್ಗಿಸುವ ನಿಟ್ಟಿನಲ್ಲಿ ಚರ್ಚೆಗಳು ನಡೆಯುತ್ತಿವೆ. ಜು.13ರಿಂದ 15ರವರೆಗೆ ಊಟಿಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚೆಗಳು ಜರುಗಿದವು. ಈ ವರ್ಷ ನಡೆಯಲಿರುವ ಕೇಂದ್ರೀಯ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಈ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಪ್ರಸ್ತುತ ಮೊದಲನೇ ವರ್ಷ ಮತ್ತು ಎರಡನೇ ವರ್ಷದ ಶಿಬಿರ(ಒಟಿಸಿ) ಗಳನ್ನು ತಲಾ 20 ದಿನಗಳು ಹಾಗೂ ಮೂರನೇ ವರ್ಷದ ಶಿಬಿರವನ್ನು ನಾಗ್ಪುರದಲ್ಲಿ 25 ದಿನಗಳ ಕಾಲ ನಡೆಸಲಾಗುತ್ತದೆ. ಈ ಅವಧಿಯನ್ನು ಮೊದಲನೇ ವರ್ಷ ಮತ್ತು ಎರಡನೇ ವರ್ಷದಲ್ಲಿ ತಲಾ 15 ದಿನಗಳು ಹಾಗೂ ಮೂರನೇ ವರ್ಷದ ಶಿಬಿರವನ್ನು 20 ದಿನಗಳಿಗೆ ಇಳಿಸಲು ಚಿಂತನೆ ನಡೆದಿದೆ.
ಮತ್ತೂಂದಡೆ, ಪ್ರಸ್ತುತ ಸಾಂಪ್ರದಾಯಿಕ ದಂಡ 5.3 ಅಡಿ ಗಾತ್ರವಿದೆ. ಇದನ್ನು “ಯಶ್ತಿ”‘ ಎಂದು ಕರೆಯುವ ಸುಮಾರು 3 ಅಡಿ ಉದ್ದದ ದಂಡಕ್ಕೆ ಇಳಿಸಲು ಯೋಜಿಸಲಾಗುತ್ತಿದೆ. ಕೆಲವು ವರ್ಷಗಳ ಹಿಂದೆ, ಸಮವಸ್ತ್ರದಲ್ಲಿ ಬದಲಾವಣೆ ತರಲಾಗಿ, ಪ್ರಸ್ತುತ ಪ್ಯಾಂಟ್ಗಳನ್ನು ಬಳಸಲಾಗುತ್ತಿದೆ.
ಹೆಚ್ಚಿನ ಸಂಘ ಶಿಕ್ಷಾ ವರ್ಗಗಳು ಏಪ್ರಿಲ್ನಿಂದ ಜೂನ್ವರೆಗೆ ನಡೆಯುತ್ತದೆ ಮತ್ತು ಕೆಲವು ಚಳಿಗಾಲದಲ್ಲೂ ನಡೆಯುತ್ತದೆ. ಈ ವರ್ಷ 100ಕ್ಕೂ ಹೆಚ್ಚು ಸ್ಥಳಗಳಲ್ಲಿ ಶಿಬಿರಗಳನ್ನು ನಡೆಸಲಾಗಿದ್ದು, 20,000ಕ್ಕೂ ಹೆಚ್ಚು ಮಂದಿ ತರಬೇತಿ ಪಡೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Haryana Polls; ಕೈ ಕಾರ್ಯಕರ್ತರು ಮತ್ತು ಪಕ್ಷೇತರನ ಬೆಂಬಲಿಗರ ಮಾರಾಮಾರಿ
PM: ಕಾಂಗ್ರೆಸ್ ಡ್ರಗ್ಸ್ ದಂಧೆ ಹಣ ಚುನಾವಣೆ ಗೆಲ್ಲಲು ಬಳಸಿಕೊಳ್ಳುತ್ತಿದೆ: ಪ್ರಧಾನಿ ಮೋದಿ
IFFI: ನವೆಂಬರ್ 20ರಿಂದ ಗೋವಾದಲ್ಲಿ 55ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವ
West Bengal: ಬಾಲಕಿಯನ್ನು ಅಪಹರಿಸಿ ಕೊ*ಲೆ: ಭುಗಿಲೆದ್ದ ಆಕ್ರೋಶ, ಪ್ರತಿಭಟನೆ
Pune: ಉತ್ತರಕನ್ನಡ ಮೂಲದ ಮಾಜಿ ಕ್ರಿಕೆಟಿಗ, ನಟ ಸಲೀಲ್ ತಾಯಿ ಶವ ಪತ್ತೆ, ಗಂಟಲು ಸೀಳಿ ಕೊಲೆ?
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Minchu Hulu Review: ಮಿಂಚುಹುಳು ತಂದ ಹೊಸಕಿರಣ
Haryana Polls; ಕೈ ಕಾರ್ಯಕರ್ತರು ಮತ್ತು ಪಕ್ಷೇತರನ ಬೆಂಬಲಿಗರ ಮಾರಾಮಾರಿ
Vinesh Phogat; ನನ್ನ ತಂದೆಯ ಸಹಾಯವನ್ನು ವಿನೇಶ್ ಮರೆತಿದ್ದಾರೆ: ಬಬಿತಾ ಫೋಗಾಟ್
Bigg Boss: ಬಿಗ್ ಬಾಸ್ ಮನೆಯಲ್ಲಿ ರಾದ್ಧಾಂತ ಸೃಷ್ಟಿಸಿದ ವಿವಾದಿತ ಸ್ಪರ್ಧಿಗಳಿವರು..
Irani Cup: ತನುಷ್ ಕೋಟ್ಯಾನ್ ದಿಟ್ಟ ಹೋರಾಟ; 27 ವರ್ಷದ ಬಳಿಕ ಇರಾನಿ ಕಪ್ ಗೆದ್ದ ಮುಂಬೈ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.