![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Mar 25, 2020, 1:43 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಹೊಸದಿಲ್ಲಿ: ‘ಒಬ್ಬ ಭಾರತೀಯನಿಗೆ ಕೋವಿಡ್ 19 ವೈರಸ್ ಸೋಂಕು ತಗಲಿದರೆ ಅದು ಆತನಿಂದ ಏಕಕಾಲಕ್ಕೆ ನಾಲ್ವರಿಗೆ ಹರಡಬಹುದು. ಹಾಗಾಗಿ ಸೋಂಕಿತರನ್ನು ಅಥವಾ ಸೋಂಕು ಶಂಕಿತರನ್ನು 3 ದಿನಗಳ ಕಾಲ ಸ್ವಯಂನಿರ್ಬಂಧಕ್ಕೆ ಒಳಪಡಿಸಿದರೆ ಸಾಕು, ಕೊರೊನಾ ಹರಡುವಿಕೆಯನ್ನು ಶೇ. 62ರಷ್ಟು ಕಡಿಮೆ ಮಾಡಬಹುದು.
ಮಿತಿಮೀರಿದ ಸಂದರ್ಭಗಳಲ್ಲಿ ಈ ಸೋಂಕನ್ನು ಶೇ. 89ರಷ್ಟು ಕಡಿಮೆಗೊಳಿಸಬಹುದು’ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಸಿದ್ಧಪಡಿಸಿರುವ ಗಣಿತಶಾಸ್ತ್ರ ಆಧಾರಿತ ಸಂಶೋಧನಾ ವರದಿಯೊಂದು ಹೇಳಿದೆ. ಬಹುಮುಖ್ಯವಾಗಿ ಇದು ಸಾಮಾಜಿಕ ಅಂತರ ಕಾಪಾಡುವುದರ ಪ್ರಯೋಜನಗಳನ್ನು ಅಂಕಿ-ಅಂಶಗಳ ಮೂಲಕ ಪ್ರಸ್ತುತಗೊಳಿಸಿದೆ.
ಈ ವರದಿಯನ್ನು ಫೆಬ್ರವರಿಯಲ್ಲಿ, ಅಂದರೆ ಸೋಂಕು ಆಗ ತಾನೇ ಭಾರತಕ್ಕೆ ಕಾಲಿಡುತ್ತಿದ್ದ ಸಂದರ್ಭದಲ್ಲಿ ಸಿದ್ಧಪಡಿಸಲಾಗಿತ್ತು. ಆದರೆ ಈಗ ದೇಶದೆಲ್ಲೆಡೆ ಹರಡಿದೆ. ಸೋಂಕಿತರ ಸಂಖ್ಯೆ 515ನ್ನು ದಾಟಿದೆ.
ದೇಶವೇ ಲಾಕ್ಡೌನ್ ಆಗಿದೆ. ಹೀಗಿರುವಾಗ ಆರಂಭಿಕ ಹಂತದಲ್ಲಿ ತಯಾರಿಸಲಾದ ವರದಿ ಈಗ ಅನ್ವಯವಾಗುತ್ತದೆಯೇ ಎಂಬ ಪ್ರಶ್ನೆಗೆ ಐಸಿಎಂಆರ್ನ ಸಾಂಕ್ರಾಮಿಕ ರೋಗಗಳ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ| ರಮಣ ಆರ್. ಗಂಗಖೇಡ್ಕರ್ ಅವರು ಉತ್ತರಿಸಿದ್ದಾರೆ.
‘ಸೋಂಕು ಆರಂಭಿಕ ಹಂತದಲ್ಲಿ ಈ ವರದಿಯನ್ನು ಸಿದ್ಧಪಡಿಸಲಾಗಿದೆ. ನಿಜ. ಆದರೆ ಸೋಂಕಿತರು ನಿರ್ದಿಷ್ಟ ಅವಧಿಯಲ್ಲಿ ಎಷ್ಟು ಜನರಿಗೆ ಹರಡುತ್ತಾರೆ ಎಂಬುದು ಬದಲಾಗದ ಸತ್ಯ. ಏಕೆಂದರೆ ಆ ವೈರಾಣು ಹರಡಿಕೊಳ್ಳುವ ವೇಗವನ್ನು ಲೆಕ್ಕ ಇಟ್ಟು ಈ ವರದಿ ಸಿದ್ಧಪಡಿಸಲಾಗಿದೆ. ಆ ವೇಗ ಬದಲಾಗುವುದಿಲ್ಲ. ಹಾಗಾಗಿ ಈ ವರದಿಯು ಸರ್ವಕಾಲಿಕ’ ಎಂದು ಅವರು ತಿಳಿಸಿದ್ದಾರೆ.
‘ಇದು ನಿರ್ದಿಷ್ಟ ಪ್ರಾಂತ್ಯ ಅಥವಾ ದೇಶದಲ್ಲಿ ರೋಗಾಣುಗಳ ಹರಡುವಿಕೆಯ ವೇಗವನ್ನು ಆರ್- ನಾಟ್ (R0) ಎಂದು ಸಾಂಕೇತಿಕವಾಗಿ ವರದಿಯಲ್ಲಿ ಉಲ್ಲೇಖೀಸಲಾಗಿದೆ. 0 ಮೌಲ್ಯ 1 ಅಥವಾ ಅದಕ್ಕಿಂತ ಕೆಳಗಿದ್ದರೆ ವೈರಾಣುಗಳು ಸಾಯುವ ಹಂತದಲ್ಲಿವೆ ಎಂದರ್ಥ. ಆದರೆ ಈ ಮೌಲ್ಯ 2 ಅಥವಾ ಅದಕ್ಕಿಂತ ಹೆಚ್ಚಿದ್ದರೆ ವೈರಾಣುಗಳು ಅಪಾಯಕಾರಿ ಸ್ಥಿತಿಯಲ್ಲಿ ಹರಡುತ್ತಿವೆ ಎಂದರ್ಥ’ ಎಂದು ಡಾ| ರಮಣ ಅವರು ಹೇಳಿದ್ದಾರೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.