ICMR leak: 81 ಕೋಟಿ ಭಾರತೀಯರ ಮಾಹಿತಿ ಸೋರಿಕೆ
ದೇಶದಲ್ಲೇ ಬೃಹತ್ ಮಾಹಿತಿ ಸೋರಿಕೆ ಐಸಿಎಂಆರ್ನಲ್ಲಿದ್ದ ಮಾಹಿತಿ ಡಾರ್ಕ್ವೆಬ್ನಲ್ಲಿ!
Team Udayavani, Oct 30, 2023, 11:50 PM IST
ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಎಂಬಂತೆ 81 ಕೋಟಿ ಭಾರತೀಯರ ಖಾಸಗಿ ಮಾಹಿತಿಗಳು ಡಾರ್ಕ್ವೆಬ್ನಲ್ಲಿ ಸೋರಿಕೆಯಾಗಿವೆ. ಕೊರೊನಾ ವೇಳೆ ಜನರ ಮಾಹಿತಿಯನ್ನು ಭಾರತೀಯ ವೈದ್ಯಕೀಯ ಸಂಶೋಧನ ಮಂಡಳಿ(ಐಸಿಎಂಆರ್) ಸಂಗ್ರಹಿಸಿತ್ತು. ಇವು ಸೋರಿಕೆಯಾಗಿದ್ದು, ಇದನ್ನು ಮಾರಾಟಕ್ಕೂ ಇರಿಸಲಾಗಿದೆ.
ಏನೇನು ಸೋರಿಕೆ?
ಥ್ರೆಟ್ ಆ್ಯಕ್ಟರ್ ಎಂಬ ಎಕ್ಸ್ ಖಾತೆಯಲ್ಲಿ ಭಾರತೀಯರ ಖಾಸಗಿ ಮಾಹಿತಿಗಳನ್ನು ಹಂಚಿಕೊಳ್ಳಲಾಗಿದೆ. ಇದರಲ್ಲಿ 81.5 ಕೋಟಿ ಭಾರತೀಯರ ಮಾಹಿತಿ ಇದೆ. ಆಧಾರ್ ಕಾರ್ಡ್ ಸಂಖ್ಯೆ, ಪಾಸ್ಪೋರ್ಟ್ ಮಾಹಿತಿ, ಹೆಸರುಗಳು, ಮೊಬೈಲ್ ನಂಬರ್ ಮತ್ತು ಅವರ ವಿಳಾಸಗಳು ಇವೆ. ಈ ಬಗ್ಗೆ ನ್ಯೂಸ್18 ವಾಹಿನಿ ವರದಿ ಮಾಡಿದೆ.
ಎಲ್ಲಿಂದ ಸಿಕ್ಕಿತು?
ಥ್ರೆಟ್ ಆ್ಯಕ್ಟರ್ ಹೇಳುವಂತೆ ಭಾರತೀಯರ ಮಾಹಿತಿಯನ್ನು ಐಸಿಎಂಆರ್ನಿಂದಲೇ ಕಳವು ಮಾಡಲಾಗಿದೆ. ಆದರೆ ಬೇರೊಂದು ಮೂಲ ಹೇಳುವಂತೆ ಎಲ್ಲಿಂದ ಕಳವು ಮಾಡಲಾಗಿದೆ ಎಂಬ ಎಂಬ ಮಾಹಿತಿ ಇಲ್ಲ.
ಹ್ಯಾಕ್ಗಾಗಿ ಸರಣಿ ಪ್ರಯತ್ನ
ಐಸಿಎಂಆರ್ ಪ್ರಕಾರ ಈ ವರ್ಷದ ಫೆಬ್ರವರಿವರೆಗೆ 6 ಸಾವಿರ ಬಾರಿ ಮಾಹಿತಿ ಕದಿಯಲು ಹ್ಯಾಕರ್ಗಳು ಪ್ರಯತ್ನಿಸಿ ಸೋತಿದ್ದಾರೆ. ಹ್ಯಾಕರ್
ಗಳಿಂದ ಪಾರಾಗಲು ಪರಿಹಾರೋಪಾಯ ಗಳನ್ನು ಹುಡುಕಿಕೊಳ್ಳುವಂತೆ ತನಿಖಾ ಸಂಸ್ಥೆಗಳು ಐಸಿಎಂಆರ್ಗೆ ಸೂಚಿಸಿದ್ದವು.
ವಿದೇಶಿ ಹ್ಯಾಕರ್ಗಳ ಕೈವಾಡ?
ವಿಷಯ ಅತ್ಯಂತ ಸೂಕ್ಷ್ಮವಾಗಿದ್ದು, ಸರಕಾರ ಮತ್ತು ವಿವಿಧ ತನಿಖಾ ಸಂಸ್ಥೆಗಳ ಹಿರಿಯ ಅಧಿಕಾರಿಗಳು ಈ ಸಂಬಂಧ ಕಾರ್ಯಮಗ್ನರಾಗಿದ್ದಾರೆ. ಈ ಸೋರಿಕೆಯಲ್ಲಿ ವಿದೇಶಿ ಹ್ಯಾಕರ್ ಗಳ ಕೈವಾಡವಿರಬಹುದು ಎನ್ನಲಾಗಿದ್ದು, ದತ್ತಾಂಶವನ್ನು ರಕ್ಷಿಸುವ ಸಂಬಂಧ ಕ್ರಮ ಕೈಗೊಳ್ಳಲಾಗಿದೆ.
ಥ್ರೆಟ್ ಆ್ಯಕ್ಟರ್ ಅಲಿಯಾಸ್ ಪಿಡಬ್ಲ್ಯುಎನ್0001
ಈ ಹ್ಯಾಕರ್ಗಳೇ ಮಾಹಿತಿ ಕದ್ದಿರಬಹುದು ಎಂಬ ಅನುಮಾನವಿದೆ. ಇದು ಅ. 9ರಂದೇ ಭಾರತೀಯ ನಾಗರಿಕರ ಮಾಹಿತಿ ಕದ್ದಿರುವ ಬಗ್ಗೆ ತನ್ನ ಎಕ್ಸ್ ಖಾತೆಯಲ್ಲಿ ಪ್ರಕಟಿಸಿತ್ತು. ಜತೆಗೆ ನಾಲ್ಕು ಮಾದರಿ ಪುಟಗಳನ್ನೂ ಬಿಡುಗಡೆ ಮಾಡಿತ್ತು.
ಇದೇ ಮೊದಲಲ್ಲ
ವಿಚಿತ್ರವೆಂದರೆ ಭಾರತದ ಆರೋಗ್ಯ ಕ್ಷೇತ್ರದ ಮೇಲೆ ಆಗಾಗ ಇಂಥ ಸೈಬರ್ ದಾಳಿಗಳು ನಡೆಯುತ್ತಲೇ ಇರುತ್ತವೆ. ಕಳೆದ ವರ್ಷ ಏಮ್ಸ್ನಲ್ಲಿ ಸೈಬರ್ ದಾಳಿ ಆಗಿದ್ದು, ವ್ಯವಸ್ಥೆಯೇ ಬದಲಾಗಿತ್ತು. ಆಗ ಭಾರತದ ನೆರೆಯ ದೇಶವೊಂದರ ಐಪಿ ವಿಳಾಸ ಪತ್ತೆಯಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Laddoo Row: ಲಡ್ಡು ತಯಾರಿಸಲು ತಿರುಪತಿಗೆ ನಾವು ತುಪ್ಪ ಪೂರೈಕೆ ಮಾಡಿಲ್ಲ: ಅಮೂಲ್ ಸ್ಪಷ್ಟನೆ
Kuki: ಮಣಿಪುರಕ್ಕೆ ಅಕ್ರಮ ಪ್ರವೇಶಿಸಿದ 900 ಕುಕಿ ಉಗ್ರರು: ಭದ್ರತಾ ಸಂಸ್ಥೆ ಮಾಹಿತಿ
Atishi: ದೆಹಲಿ ನೂತನ ಸಿಎಂ ಆಗಿ ಆತಿಶಿ ಇಂದು ಅಧಿಕಾರ ಸ್ವೀಕಾರ
PM Modi U.S. visit: ಇಂದಿನಿಂದ 3 ದಿನಗಳ ಕಾಲ ಮೋದಿ ಅಮೆರಿಕ ಪ್ರವಾಸ
Tirupati: ಲಡ್ಡಿಗೆ ಪ್ರಾಣಿ ಕೊಬ್ಬು: ಟಿಟಿಡಿ ಹೇಳಿದ್ದೇನು? ತನಿಖೆಗೆ ನಿರ್ಧಾರ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Belagavi; ದರ್ಬಾರ್ ಗಲ್ಲಿಯಲ್ಲಿ ಪ್ಯಾಲೆಸ್ತೀನ್ ಧ್ವಜದ ಮಾದರಿಯ ಪೆಂಡಾಲ್!
Shimoga; ಹಿಂದೂ ಭಾವನೆ ಮೇಲೆ ಧಕ್ಕೆ ತರುವ ಕೆಲಸ ನಡೆಯುತ್ತಿದೆ: ವಿಜಯೇಂದ್ರ ಆಕ್ರೋಶ
Desi Swara: ಅಮೆರಿಕ ಕನ್ನಡತಿ ಕಲಾಶ್ರೀ, ನೃತ್ಯಗುರು ಸುಪ್ರಿಯಾ ದೇಸಾಯಿಗೆ ಸಮ್ಮಾನ
Shiruru; ನಾಪತ್ತೆಯಾಗಿದ್ದ ಕೇರಳದ ಅರ್ಜುನನ ಲಾರಿ ಪತ್ತೆ; ಈಶ್ವರ್ ಮಲ್ಪೆ ತಂಡದ ಕಾರ್ಯಾಚರಣೆ
World Rivers Day: ಸೆ.22 ವಿಶ್ವ ನದಿಗಳ ದಿನ- ನಿತ್ಯ ಬದುಕಿನ ಜೀವನಾಡಿಯ ಮೂಲ “ನದಿ’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.