ಹರಿಯಾಣ,ರಾಜಸ್ಥಾನದಲ್ಲಿ ಕೈಗೆ ಕ್ರಾಸ್‌ ವೋಟಿಂಗ್‌ ಶಾಕ್‌? 10ರಂದು ಚುನಾವಣೆ, ಅಂದೇ ಫ‌ಲಿತಾಂಶ


Team Udayavani, Jun 1, 2022, 6:50 AM IST

ಹರಿಯಾಣ, ರಾಜಸ್ಥಾನದಲ್ಲಿ ಕೈಗೆ ಕ್ರಾಸ್‌ ವೋಟಿಂಗ್‌ ಶಾಕ್‌? 10ರಂದು ಚುನಾವಣೆ, ಅಂದೇ ಫ‌ಲಿತಾಂಶ

ಹೊಸದಿಲ್ಲಿ: ಭಾರೀ ಕುತೂಹಲ ಕೆರಳಿಸಿರುವ ರಾಜ್ಯಸಭಾ ಚುನಾವಣೆಯ ನಾಮಪತ್ರ ಸಲ್ಲಿಕೆ ಅವಧಿ ಪೂರ್ಣಗೊಂಡಿದ್ದು, ಹೆಚ್ಚು ಕಡಿಮೆ ಕಣ ಸಿದ್ಧವಾಗಿದೆ. ಅಚ್ಚರಿಯ ಬೆಳವಣಿಗೆಯಲ್ಲಿ ರಾಜಸ್ಥಾನದಿಂದ ಮಾಧ್ಯಮ ದೊರೆ ಸುಭಾಷ್‌ ಚಂದ್ರ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಇವರಿಗೆ ಬಿಜೆಪಿ ಬೆಂಬಲ ಘೋಷಿಸಿದೆ. ಹಾಗೆಯೇ, ಹರಿಯಾಣದಲ್ಲೂ ಕಾರ್ತಿಕೇಯ ಶರ್ಮ ಸ್ಪರ್ಧಿಸಿದ್ದು, ಕಾಂಗ್ರೆಸ್‌ಗೆ ಪೆಟ್ಟು ಬೀಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಈ ಚುನಾವಣೆಯಲ್ಲಿ ಬಿಜೆಪಿ, ವಿವಿಧ ರಾಜ್ಯಗಳಲ್ಲಿ ಒಟ್ಟು 22 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಇಬ್ಬರು ಸ್ವತಂತ್ರ ಅಭ್ಯರ್ಥಿಗಳಿಗೆ ಬೆಂಬಲ ನೀಡಿದೆ. ಅಂದರೆ ರಾಜಸ್ಥಾನ ಮತ್ತು ಹರಿಯಾಣದಲ್ಲಿ ತಲಾ ಒಬ್ಬ ಸ್ವತಂತ್ರ ಅಭ್ಯರ್ಥಿಗಳು ಬಿಜೆಪಿ ಬೆಂಬಲ ಪಡೆಯಲಿದ್ದಾರೆ. ಈ ಬಾರಿಯ ವಿಶೇಷವೆಂದರೆ ಬಿಜೆಪಿ ಘಟಾನುಘಟಿ ನಾಯಕರುಗಳಿಗೇ ಟಿಕೆಟ್‌ ನೀಡಿಲ್ಲ. ಅಂದರೆ ಸದ್ಯ ಕೇಂದ್ರ ಅಲ್ಪಸಂಖ್ಯಾಕ ವ್ಯವಹಾರಗಳ ಸಚಿವರಾಗಿರುವ ಮುಖಾ¤ರ್‌ ಅಬ್ಟಾಸ್‌ ನಖೀÌ ಅವರಿಗೆ ಟಿಕೆಟ್‌ ನೀಡಿಲ್ಲ. ಇವರನ್ನು ಉತ್ತರ ಪ್ರದೇಶದ ಉಪಚುನಾವಣೆಯಲ್ಲಿ ಕಣಕ್ಕಿಳಿಸುವ ಸಾಧ್ಯತೆ ಇದೆ. ಅಲ್ಲದೆ ವಿನಯ್‌ ಸಹಸ್ರಬುದ್ಧೆ ಮತ್ತು ಒ.ಪಿ. ಮಾಥುರ್‌ ಅವರಿಗೂ ಟಿಕೆಟ್‌ ಸಿಕ್ಕಿಲ್ಲ.

ಬಿಜೆಪಿಯಿಂದ ಉತ್ತರ ಪ್ರದೇಶದಲ್ಲಿ 8, ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ತಲಾ ಮೂರು, ಬಿಹಾರ ಮತ್ತು ಮಧ್ಯಪ್ರದೇಶದಲ್ಲಿ ತಲಾ ಎರಡು ಹಾಗೂ ರಾಜಸ್ಥಾನ, ಉತ್ತರಾಖಂಡ, ಝಾರ್ಖಂಡ್‌ ಮತ್ತು ಹರಿಯಾಣದಲ್ಲಿ ತಲಾ ಒಬ್ಬರು ಸ್ಪರ್ಧಿಸಿದ್ದಾರೆ.

ಹರಿಯಾಣದಲ್ಲಿ ಪೆಟ್ಟು ಕೊಟ್ಟಿದ್ದ ಶರ್ಮ: ಮಾಧ್ಯಮ ದೊರೆ ಸುಭಾಷ್‌ ಚಂದ್ರ ಶರ್ಮ, ಕಳೆದ ಬಾರಿ ಹರಿಯಾಣದಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿ, ಕಾಂಗ್ರೆಸ್‌ನ ಅಭ್ಯರ್ಥಿಯನ್ನೇ ಸೋಲಿಸಿದ್ದರು. ಈಗ ಇವರು ರಾಜಸ್ಥಾನದಿಂದ ಸ್ವತಂತ್ರವಾಗಿ ಸ್ಪರ್ಧಿಸಿದ್ದು, ಪ್ರಮುಖವಾಗಿ ಕಾಂಗ್ರೆಸ್‌ ಮತಗಳ ಮೇಲೆ ದೃಷ್ಟಿ ಇಟ್ಟಿದ್ದಾರೆ. ಬಿಜೆಪಿ ಬೆಂಬಲ ನೀಡಿರುವುದರಿಂದ ಇಲ್ಲಿ ಕಾಂಗ್ರೆಸ್‌ನಿಂದ ಅಡ್ಡಮತದಾನವಾಗುವ ಸಾಧ್ಯತೆ ಇದೆ. ಅತ್ತ ಹರಿಯಾಣದಲ್ಲೂ ಕಾರ್ತಿಕೇಯ ಶರ್ಮ ಸ್ಪರ್ಧಿಸಿದ್ದು, ಕಾಂಗ್ರೆಸ್‌ ಮತಗಳು ಚದುರುವ ಸಾಧ್ಯತೆ ಇದೆ.

ನಾಮಪತ್ರ ಸಲ್ಲಿಸಿದ ಪ್ರಮುಖರು
ಕಾಂಗ್ರೆಸ್‌ನ ಕರ್ನಾಟಕ ಉಸ್ತುವಾರಿ ರಣದೀಪ್ ಸುರ್ಜೇವಾಲ, ಅಜಯ್‌ ಮಾಕೇನ್‌, ರಾಜೀವ್‌ ಶುಕ್ಲಾ, ಬಿಜೆಪಿಯಿಂದ ಒಬಿಸಿ ಮೋರ್ಚಾ ಅಧ್ಯಕ್ಷ ಕೆ. ಲಕ್ಷ್ಮಣ್‌, ನಿರ್ಮಲಾ ಸೀತಾರಾಮನ್‌ ಸೇರಿ ಹಲವು ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಬುಧವಾರ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಜೂ. 3ರಂದು ವಾಪಸ್‌ ಪಡೆಯಲು ಕಡೇ ದಿನ. ಜೂ.10ಕ್ಕೆ ಮತದಾನ, ಅದೇ ದಿನ ಸಂಜೆ ಫ‌ಲಿತಾಂಶ ಹೊರಬೀಳಲಿದೆ. ಸದ್ಯ 245 ಸದಸ್ಯರ ರಾಜ್ಯಸಭೆಯಲ್ಲಿ ಬಿಜೆಪಿ 95, ಕಾಂಗ್ರೆಸ್‌ 29 ಸದಸ್ಯರನ್ನು ಹೊಂದಿವೆ.

 

ಟಾಪ್ ನ್ಯೂಸ್

1-JA-1

England ವೇಗದ ಬೌಲರ್‌; ಜೇಮ್ಸ್‌  ಆ್ಯಂಡರ್ಸನ್‌ಗೆ ಗೆಲುವಿನ ವಿದಾಯ

BJP 2

Maharashtra ಎಂಎಲ್‌ಸಿ ಚುನಾವಣೆ: ಬಿಜೆಪಿ ಕೂಟಕ್ಕೆ11 ರಲ್ಲಿ 9 ಸೀಟು!

Puttur ಅರ್ಧ ದರಕ್ಕೆ ಚಿನ್ನ ನೀಡುವುದಾಗಿ ವಂಚನೆಯ ಕರೆ: ಎಚ್ಚೆತ್ತ ಯುವಕ

Puttur ಅರ್ಧ ದರಕ್ಕೆ ಚಿನ್ನ ನೀಡುವುದಾಗಿ ವಂಚನೆಯ ಕರೆ: ಎಚ್ಚೆತ್ತ ಯುವಕ

Kundapura ಬೀಜಾಡಿ: ಕಾರು ಪಲ್ಟಿ; ಚಾಲಕ ಪಾರು

Kundapura ಬೀಜಾಡಿ: ಕಾರು ಪಲ್ಟಿ; ಚಾಲಕ ಪಾರು

Fraud Case ಸ್ಟಾಕ್‌ ಮಾರುಕಟ್ಟೆಯಲ್ಲಿ ಲಾಭದ ಆಮಿಷ: ಲಕ್ಷಾಂತರ ರೂ. ವಂಚನೆ

Fraud Case ಸ್ಟಾಕ್‌ ಮಾರುಕಟ್ಟೆಯಲ್ಲಿ ಲಾಭದ ಆಮಿಷ: ಲಕ್ಷಾಂತರ ರೂ. ವಂಚನೆ

Road Mishap ಉಪ್ಪಿನಂಗಡಿ: ಬೈಕ್‌ – ಪಿಕಪ್‌ ಢಿಕ್ಕಿ: ಬೈಕ್‌ ಸವಾರ ಸಾವು

Road Mishap ಉಪ್ಪಿನಂಗಡಿ: ಬೈಕ್‌ – ಪಿಕಪ್‌ ಢಿಕ್ಕಿ: ಬೈಕ್‌ ಸವಾರ ಸಾವು

Siddapura ಕಟ್ಟೆಮಕ್ಕಿ: ಲಾರಿ ಪಲ್ಟಿ; ಲಕ್ಷಾಂತರ ನಷ್ಟ

Siddapura ಕಟ್ಟೆಮಕ್ಕಿ: ಲಾರಿ ಪಲ್ಟಿ; ಲಕ್ಷಾಂತರ ನಷ್ಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP 2

Maharashtra ಎಂಎಲ್‌ಸಿ ಚುನಾವಣೆ: ಬಿಜೆಪಿ ಕೂಟಕ್ಕೆ11 ರಲ್ಲಿ 9 ಸೀಟು!

arrested

Drugs case: ಸಂಸದ ಅಮೃತ್‌ಪಾಲ್‌ ಸಿಂಗ್‌ ಸೋದರ ಬಂಧನ

1-k-H

Presidential Election; ರಾಹುಲ್‌ ಗಾಂಧಿ- ಕಮಲಾ ಹ್ಯಾರಿಸ್‌ ಫೋನ್‌ ಮಾತುಕತೆ

police crime

Maharashtra; ನಗರ ನಕ್ಸಲರನ್ನು ಮಟ್ಟ ಹಾಕಲು ಮಸೂದೆ ಮಂಡನೆ!

dharmendra pradhan

Law ವಿದ್ಯಾರ್ಥಿಗಳಿಗೆ ಮನುಸ್ಮೃತಿ ಪಠ್ಯ ಇಲ್ಲ: ಕೇಂದ್ರ ಸಚಿವ ಪ್ರಧಾನ್‌

MUST WATCH

udayavani youtube

ಅನಂತ್- ರಾಧಿಕಾ ಮದುವೆ ಮಂಟಪದಲ್ಲಿ ಕಾಶಿ ಬನಾರಸ್ ಘಾಟ್ ಗಳ ಮರುಸೃಷ್ಟಿ

udayavani youtube

ತೆಂಕನಿಡಿಯೂರು ಗ್ರಾಮ ಪಂಚಾಯತ್ ನಲ್ಲಿ ಸದಸ್ಯರ ಜಟಾಪ

udayavani youtube

ಮಾತು ನಿಲ್ಲಿಸಿದ ಅಪರ್ಣಾ | ಗೆಳತಿಯರೊಂದಿಗೆ ಕಳೆದ ಭಾವನಾತ್ಮಕ ಕ್ಷಣಗಳು

udayavani youtube

ಪದ್ಮಶ್ರೀ ಪುರಸ್ಕೃತ ಹಿರಿಯ ಕಳರಿ ಕಲೆಯ ಛಲಗಾರ್ತಿ ಮೀನಾಕ್ಷಿ ಅಮ್ಮ

udayavani youtube

ಸೈನಾ ನೆಹ್ವಾಲ್ ಜೊತೆ ಬ್ಯಾಡ್ಮಿಂಟನ್ ಆಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು

ಹೊಸ ಸೇರ್ಪಡೆ

1-JA-1

England ವೇಗದ ಬೌಲರ್‌; ಜೇಮ್ಸ್‌  ಆ್ಯಂಡರ್ಸನ್‌ಗೆ ಗೆಲುವಿನ ವಿದಾಯ

1-trr

Wimbledon ಕ್ವೀನ್‌;ಕ್ರೆಜಿಕೋವಾ-ಪೌಲಿನಿ ಪೈಪೋಟಿ

BJP 2

Maharashtra ಎಂಎಲ್‌ಸಿ ಚುನಾವಣೆ: ಬಿಜೆಪಿ ಕೂಟಕ್ಕೆ11 ರಲ್ಲಿ 9 ಸೀಟು!

1-ree

Women’s ಏಷ್ಯಾ ಕಪ್‌ ಕ್ರಿಕೆಟ್‌; ಜು. 19 ರಂದು ಭಾರತ-ಪಾಕಿಸ್ಥಾನ ಸ್ಪರ್ಧೆ

Puttur ಅರ್ಧ ದರಕ್ಕೆ ಚಿನ್ನ ನೀಡುವುದಾಗಿ ವಂಚನೆಯ ಕರೆ: ಎಚ್ಚೆತ್ತ ಯುವಕ

Puttur ಅರ್ಧ ದರಕ್ಕೆ ಚಿನ್ನ ನೀಡುವುದಾಗಿ ವಂಚನೆಯ ಕರೆ: ಎಚ್ಚೆತ್ತ ಯುವಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.