![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Jun 7, 2022, 12:19 AM IST
ಹೊಸದಿಲ್ಲಿ: “ಆತ್ಮನಿರ್ಭರ ಭಾರತ’ ಪರಿ ಕಲ್ಪನೆಯಡಿ ಭಾರತೀಯ ಸೇನಾ ಪಡೆಗಳ ಆಧುನೀಕರಣಕ್ಕಾಗಿ ಸಲ್ಲಿಸಲಾಗಿದ್ದ 76 ಸಾವಿರ ಕೋಟಿ ರೂ.ಗಳ ಪ್ರಸ್ತಾವನೆಗೆ ರಕ್ಷಣ ಸಚಿವ ರಾಜನಾಥ್ ಸಿಂಗ್ ನೇತೃತ್ವದ ರಕ್ಷಣ ಸಾಮಗ್ರಿ ಖರೀದಿ ಮಂಡಳಿ (ಡಿಎಸಿ) ಒಪ್ಪಿಗೆ ನೀಡಿದೆ. ಈ ಪ್ರಸ್ತಾವನೆಯಲ್ಲಿ, ಭಾರತೀಯ ನೌಕಾಪಡೆಗೆ
ಯುದ್ಧ ಹಡಗುಗಳನ್ನು ಪೂರೈಸುವ ಯೋಜನೆಯೂ ಸೇರಿದೆ.
ಈ ಒಪ್ಪಿಗೆಯಿಂದಾಗಿ, ಯುದ್ಧ ಸಾಮಗ್ರಿ ಗಳಿಗಾಗಿ ಭಾರತ, ವಿದೇಶಗಳ ಮೇಲೆ ಅವಲಂಬಿತವಾಗುವುದು ತಪ್ಪಲಿದೆ ಎಂದು ಮೂಲಗಳು ತಿಳಿಸಿವೆ.
ಯಾವ್ಯಾವುದಕ್ಕೆ ಒಪ್ಪಿಗೆ?
ರಫ್ ಟರೈನ್ ಫೋರ್ಕ್ ಲಿಫ್ಟ್ ಟ್ರಕ್ಗಳು (ಆರ್ಟಿಎಫ್ಎಲ್ಟಿ), ಬ್ರಿಡ್ಜ್ ಲೇಯಿಂಗ್ ಟ್ಯಾಂಕ್ಗಳು (ಬಿಎಲ್ಟಿ), ವ್ಹೀಲ್ಡ್ ಆರ್ಮರ್ಡ್ ಫೈಟಿಂಗ್ ಟ್ರಕ್ಗಳು (ಡಬ್ಲ್ಯುಎಚ್ ಎಎಫ್ವಿ), ಆ್ಯಂಟಿ- ಟ್ಯಾಂಕ್ಡ್ ಗೈಡೆಡ್ ಕ್ಷಿಪಣಿಗಳು (ಎಟಿಜಿಎಂ), ವೆಪನ್ ಲೊಕೇಟಿಂಗ್ ರೇಡಾರ್ಗಳನ್ನು (ಡಬ್ಲ್ಯುಎಲ್ಆರ್) ಭಾರತೀಯ ಸೇನೆಗಾಗಿ ದೇಶೀಯ ಕಂಪೆನಿಗಳಿಂದ ಕೊಳ್ಳಲು ಪ್ರಸ್ತಾವನೆ.
ಭಾರತೀಯ ನೌಕಾಪಡೆಗೆ ಮುಂದಿನ ತಲೆಮಾರಿನ ಯುದ್ಧ ನೌಕೆಗಳನ್ನು (ಎನ್ಜಿಸಿ) 36 ಸಾವಿರ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಯೋಜನೆ. ಅದರ ಜತೆಗೆ ಕಣ್ಗಾವಲಿಗೆ, ಭದ್ರತಾ ಕಾರ್ಯಾಚರಣೆಗೆ, ಸಫೇìಸ್ ಆ್ಯಕ್ಷನ್ ಗ್ರೂಪ್ಗೆ (ಎನ್ಎಜಿ), ಸರ್ಚ್ ಆ್ಯಂಡ್ ಅಟ್ಯಾಕ್ಗೆ, ಕೋಸ್ಟಲ್ ಡಿಫೆನ್ಸ್ಗಾಗಿ ಬೇಕಿರುವ ಸಲಕರಣೆಗಳು.
ಕೇಂದ್ರ ಸರಕಾರದ ನವರತ್ನ ಕಂಪೆನಿಗಳಲ್ಲೊಂದಾದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ವತಿಯಿಂದ ಡೋರ್ನಿಯರ್ ಹಾಗೂ ಸುಖೋಯ್ ಯುದ್ಧ ವಿಮಾನಗಳಿಗಾಗಿ ಎಂಜಿನ್ ತಯಾರಿಕ ಯೋಜನೆ.
ರಕ್ಷಣ ಇಲಾಖೆಗೆ ಸಂಬಂಧಿಸಿದ ಎಲ್ಲ ವ್ಯವಹಾರಗಳನ್ನು ಸಂಪೂರ್ಣವಾಗಿ, ಭೇದಿಸಲು ಅಸಾಧ್ಯವಾದ ಡಿಜಿಟಲ್ ತಂತ್ರಜ್ಞಾನದ ಚೌಕಟ್ಟಿನೊಳಗೆ ತರುವ ಡಿಜಿಟಲ್ ಕೋಸ್ಟ್ ಗಾರ್ಡ್ ಯೋಜನೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.