![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Dec 31, 2022, 8:00 AM IST
ಹೊಸದಿಲ್ಲಿ/ಪಟ್ನಾ: ಬಿಹಾರದ ಬುದ್ಧ ಗಯಾದಲ್ಲಿ ಟಿಬೆಟಿಯನ್ನರ ಧರ್ಮಗುರು ದಲಾೖಲಾಮಾ ಮೇಲೆ ಬೇಹುಗಾರಿಕೆ ನಡೆಸು ತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ವಶಕ್ಕೆ ಪಡೆ ಯಲಾಗಿರುವ ಚೀನ ಮಹಿಳೆ ಸಾಂಗ್ ಕ್ಸಿಯವೋಲಾನ್ ಎಂಬಾಕೆಯನ್ನು ಹೊಸ ದಿಲ್ಲಿಗೆ ಕರೆತರಲಾಗಿದೆ. ಆಕೆ ತನ್ನ ವೀಸಾ ಅವಧಿ ಮುಕ್ತಾಯಗೊಂಡಿದ್ದರೂ ನಿಯಮ ಮೀರಿ ದೇಶದಲ್ಲಿ ವಾಸ್ತವ್ಯ ಹೂಡಿರುವ ಅಂಶ ಬೆಳಕಿಗೆ ಬಂದಿದೆ. ಆಕೆಯನ್ನು ಶೀಘ್ರವೇ ಚೀನಕ್ಕೆ ಗಡೀಪಾರು ಮಾಡಲಾಗುತ್ತದೆ.
ಮತ್ತೂಂದು ಬೆಳವಣಿಗೆಯಲ್ಲಿ ಆಕೆ ವಾಸ್ತವ್ಯ ಹೂಡಿದ್ದ ಹೊಟೇಲ್ನ ಆಡಳಿತ ಮಂಡಳಿ ವಿರುದ್ಧವೂ ಪೊಲೀಸರು ಕೇಸು ದಾಖಲಿಸಿದ್ದಾರೆ. ವಿದೇಶಿ ಪ್ರಜೆಗಳು ಹೊಟೇಲ್ಗೆ ಬಂದು ಕೊಠಡಿ ಕಾಯ್ದಿರಿಸುವ ಸಂದರ್ಭ “ಫಾರಂ ಸಿ’ ಅನ್ನು ಭರ್ತಿ ಮಾಡಿ ಅವರು ಯಾವ ದೇಶಕ್ಕೆ ಸೇರಿದವರು, ಅವರ ಮಾಹಿತಿಯನ್ನು ಭರ್ತಿ ಮಾಡಿ ಸ್ಥಳೀಯ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ಗೆ ನೀಡಬೇಕು. ಹೊಟೇಲ್ನ ಆಡಳಿತ ಮಂಡಳಿ ವಿರುದ್ಧ ಆ ನಿಯಮ ಪಾಲಿಸದೇ ಇರುವ ಆರೋಪ ಹೊರಿಸಲಾಗಿದೆ. ಚೀನ ಮಹಿಳೆಯ ಜತೆಗೆ ಇದ್ದ ನೇಪಾಲ ಪ್ರಜೆಯನ್ನು ಪೊಲೀಸರು ವಿಚಾರಣೆ ನಡೆಸಿ ಬಿಡುಗಡೆ ಮಾಡಿದ್ದಾರೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.