![Udupi ಪತ್ರಿಕಾ ದಿನಾಚರಣೆ: ಸಮ್ಮಾನ, ಪ್ರತಿಭಾ ಪುರಸ್ಕಾರ](https://www.udayavani.com/wp-content/uploads/2024/07/u-415x256.jpg)
Delhi ಮುಂಗಾರಿನ ಅಬ್ಬರ: ಮೃತರ ಸಂಖ್ಯೆ 14ಕ್ಕೆ ಏರಿಕೆ
Team Udayavani, Jun 30, 2024, 1:52 AM IST
![1-ddddd](https://www.udayavani.com/wp-content/uploads/2024/06/1-ddddd-1-620x307.jpg)
ಹೊಸದಿಲ್ಲಿ: ದಿಲ್ಲಿಯಲ್ಲಿ ಶನಿವಾರವೂ ಭಾರೀ ಮಳೆಯಾಗಿದ್ದು, ಮುಂದಿನ 2 ದಿನಗಳ ಕಾಲ ಇದೇ ಪರಿಸ್ಥಿತಿ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ವಸಂತ್ ವಿಹಾರ ಪ್ರದೇಶದಲ್ಲಿ ಗೋಡೆ ಕುಸಿತದಿಂದ ಶನಿವಾರ ಮೂವರು ಮೃತಪಟ್ಟಿದ್ದು, ಸಿರಾಸ್ಪುರ ಅಂಡರ್ಪಾಸ್ನಲ್ಲಿ ನೀರಿನಲ್ಲಿ ಮುಳುಗಿ ಇಬ್ಬರು ಮಕ್ಕಳು ಸೇರಿ ಪ್ರತ್ಯೇಕ ಘಟನೆಗಳಲ್ಲಿ 6 ಮಂದಿ ಸಾವಿಗೀಡಾಗಿದ್ದಾರೆ. ಈ ಮೂಲಕ ಮಳೆ ಸಂಬಂಧಿ ಅವಘಡಗಳಿಗೆ ಬಲಿಯಾದವರ ಸಂಖ್ಯೆ 14ಕ್ಕೇರಿದೆ.
ದಿಲ್ಲಿಯಲ್ಲಿ ರವಿವಾರದಿಂದ 4 ದಿನ ಕಾಲ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.ಈಶಾನ್ಯ-ವಾಯವ್ಯ ಭಾರತದಲ್ಲಿ ಮಳೆ: ಬಂಗಾಲ ಕೊಲ್ಲಿಯಲ್ಲಿ ವಾಯುಭಾರ ಕುಸಿತವೂ ಉಂಟಾಗಿದ್ದು, ಈಶಾನ್ಯ ಹಾಗೂ ವಾಯವ್ಯ ಭಾರತದಲ್ಲಿ ಮುಂದಿನ 4-5 ದಿನ ಧಾರಾಕಾರ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಟಾಪ್ ನ್ಯೂಸ್
![Udupi ಪತ್ರಿಕಾ ದಿನಾಚರಣೆ: ಸಮ್ಮಾನ, ಪ್ರತಿಭಾ ಪುರಸ್ಕಾರ](https://www.udayavani.com/wp-content/uploads/2024/07/u-415x256.jpg)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.