ನಮಗೆ ಶಾಂತಿ ಮೊದಲು, ಅನಿವಾರ್ಯವಾದ್ರೆ ಯುದ್ಧ
Team Udayavani, Oct 9, 2017, 6:15 AM IST
ಹಿಂಡಾನ್(ಉ.ಪ್ರ): ಉತ್ತರ ಪ್ರದೇಶದಲ್ಲಿ ಗಡಿ ಭದ್ರತೆಗೆ ಸಂಬಂಧಿಸಿ ರವಿವಾರ ಮಾತನಾಡಿರುವ ಏರ್ ಚೀಫ್ ಮಾರ್ಷಲ್ ಬಿ.ಎಸ್. ಧನೋವಾ, “”ನಾವು ನೆರೆ ರಾಷ್ಟ್ರಗಳ ಜತೆ ಶಾಂತಿ ಬಯಸುತ್ತೇವೆ. ಆದರೆ, ಅನಿವಾರ್ಯ ಪರಿಸ್ಥಿತಿ ಎದುರಾದಾಗ ಸಣ್ಣದೊಂದು ಸೂಚನೆ ಸಿಕ್ಕರೂ ಯುದ್ಧಕ್ಕೆ ಸಿದ್ಧ” ಎಂದು ಹೇಳುವ ಮೂಲಕ ಮತ್ತೂಮ್ಮೆ ಸೈನ್ಯದ ಸಾಮರ್ಥ್ಯವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.
“ಯಾವುದೇ ದೇಶದ ಯಾವುದೇ ಸವಾಲನ್ನು ಎದುರಿಸಲು ಸೈನ್ಯ ತಯಾರಿದೆ. ಯಾವುದೇ ಕ್ಷಣದಲ್ಲಿ ಯುದ್ಧವನ್ನು ಎದುರಿಸಲು ಸಿದ್ಧ. ಅಷ್ಟೇ ಅಲ್ಲ, ಸೂಕ್ತರೀತಿಯಲ್ಲೇ ಎದಿರೇಟು ನೀಡುತ್ತೇವೆ” ಎಂದಿದ್ದಾರೆ. ಭಾರತೀಯ ವಾಯುಪಡೆಯ 85ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “”ಅನಿಶ್ಚಿತತೆಯನ್ನು ಇಂದಿನ ಸಂದರ್ಭದಲ್ಲಿ ಭೌಗೋಳಿಕ ಸವಾಲುಗಳ ಕಾರಣಕ್ಕಾಗಿಯೂ ಎದುರಿಸಬೇಕಾಗಿ ಬರುತ್ತದೆ. ಹೀಗಾಗಿ ದೇಶದ ಭದ್ರತೆ ದೃಷ್ಟಿಯಿಂದ ಯಾವ ಸಂದರ್ಭದಲ್ಲಿಯೂ ಸೇನೆ ಎಂಥದೇ ಸವಾಲು ಎದುರಿಸಲು ಸಜ್ಜಾಗಿರಬೇಕಾಗುತ್ತದೆ” ಎಂದಿದ್ದಾರೆ.
ಡೋಕ್ಲಾಂನಲ್ಲಿ ಚೀನ ಸೇನೆ ಇನ್ನೂ ಭಾರತದ ವಿರುದ್ಧ ಕತ್ತಿ ಮಸೆಯುತ್ತಿರುವ ಹಾಗೂ ಜಮ್ಮು ಕಾಶ್ಮೀರ ವಿಚಾರದಲ್ಲಿ ಪಾಕಿಸ್ಥಾನ ತಗಾದೆ ತೆಗೆಯುತ್ತಲೇ ಇರುವ ಹಿನ್ನೆಲೆಯಲ್ಲಿ ಅವರು ಮಾತನಾಡಿರುವುದು ಸ್ಪಷ್ಟವಾಗಿದೆ. ಆದರೆ ಎಲ್ಲಿಯೂ ಚೀನ ಅಥವಾ ಪಾಕ್ ಅನ್ನೇ ನೇರ ಗುರಿಯಾಗಿಸಿಕೊಂಡು ಮಾತನಾಡುತ್ತಿರುವುದಾಗಿ ಹೇಳಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Mangaluru: ಕಲೆಗೆ ಜೀವ ತಳೆವ ನವದುರ್ಗೆಯರು!
ಕನ್ನಡ ಜ್ಯೋತಿ ರಥ; ಕಾಪು ತಾಲೂಕಿಗೆ ಸ್ವಾಗತ; ಕನ್ನಡ ಅಮೃತ ಭಾಷೆಯಾಗಿ ಬೆಳಗಲಿ: ತಹಶೀಲ್ದಾರ್
Mumtaz Ali; ಮೊಯ್ದೀನ್ ಬಾವ ಸೋದರ ನಾಪತ್ತೆ; ಸೇತುವೆಯಲ್ಲಿ ಕಾರು ಬಿಟ್ಟು ಆತ್ಮಹತ್ಯೆ ಶಂಕೆ !
Bigg Boss Kannada11: ಬಿಗ್ ಬಾಸ್ ಮನೆಯಿಂದ ಈ ವಾರ ಹೊರಗೆ ಬರುವುದು ಇವರೇ..?
Udupi ಉಚ್ಚಿಲ ದಸರಾ 2024: ಉಡುಪಿ ಮತ್ತು ದ.ಕ. ಜಿಲ್ಲಾಮಟ್ಟದ ಕುಸ್ತಿ ಸ್ಪರ್ಧೆ ಉದ್ಘಾಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.