ರಾಜೀವ್ರನ್ನು ಟೀಕಿಸಿದ್ರೂ ಇ.ಡಿ. ದಾಳಿ ಆಗಿಲ್ಲ: ಉದ್ಧವ್
Team Udayavani, Aug 20, 2024, 11:15 PM IST
ಮುಂಬೈ: ಕಾಂಗ್ರೆಸ್ ಮತ್ತು ಶಿವಸೇನೆ ನಡುವೆ ವಿರೋಧವಿದ್ದರೂ, ಪ್ರತೀಕಾರ ಇರಲಿಲ್ಲ. ಮಾಜಿ ಪ್ರಧಾನಿ ರಾಜೀವ್ ಗಾಂಧಿಯನ್ನು ವಿರೋಧಿಸಿದ್ದರೂ ಕೇಂದ್ರೀಯ ತನಿಖಾ ಸಂಸ್ಥೆ ದಾಳಿ ಮಾಡು ತ್ತಿರಲಿಲ್ಲ ಎಂದು ಶಿವ ಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಮಂಗಳವಾರ ಹೇಳಿದ್ದಾರೆ.
ರಾಜೀವ್ ಗಾಂಧಿ ಅವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿವಸೇನೆ ಸ್ಥಾಪಕರಾದ ಬಾಳಾ ಠಾಕ್ರೆ ಅವರು ಸಾರ್ವಜನಿಕವಾಗಿ ರಾಜೀವ್ ಅವರ ಬಗ್ಗೆ ಮಾತನಾ ಡುತ್ತಿದ್ದರು. ಆದರೂ ಯಾವತ್ತೂ ಕೇಂದ್ರೀಯ ತನಿಖಾ ಸಂಸ್ಥೆಗಳು ಶಿವಸೇನೆ ನಾಯಕರ ಮನೆ ಬಾಗಿಲು ಬಡಿದಿದ್ದಿಲ್ಲ. ಕಾಂಗ್ರೆಸ್ ಮತ್ತು ಶಿವಸೇನೆ ನಡುವೆ ಪ್ರತೀಕಾರ ಇರಲಿಲ್ಲ ಎಂದಿದ್ದಾರೆ.
ಅಪ್ಪಾ, ನಿಮ್ಮ ಕನಸನ್ನು ನನಸು ಮಾಡುವೆ: ರಾಗಾ
ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ 80ನೇ ಜಯಂತಿ ಹಿನ್ನೆಲೆಯಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ವೀರ್ ಭೂಮಿಗೆ ತೆರಳಿ ಪುಷ್ಪನಮನ ಸಲ್ಲಿಸಿದ್ದಾರೆ. “ನಿಮ್ಮ ಬೋಧನೆಗಳು ನನಗೆ ಸ್ಫೂರ್ತಿ. ನಿಮ್ಮ ನೆನಪುಗಳನ್ನು ಹೊತ್ತು ನಿಮ್ಮ ಕನಸುಗಳನ್ನು ಭಾರತಕ್ಕಾಗಿ ನಾನು ನನಸು ಮಾಡುತ್ತೇನೆ’ ಎಂದು ರಾಹುಲ್ ಭಾವುಕವಾಗಿ ಟ್ವೀಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.