Controversy; ರಾಮನಿಗೆ ಐತಿಹಾಸಿಕ ಪುರಾವೆ ಇಲ್ಲ ಎಂದ ತಮಿಳುನಾಡು ಸಚಿವ

''ರಾಮನ ಮೇಲಿನ ಗೀಳು'' ಎಂದು ಲೇವಡಿ ಮಾಡಿದ ಅಣ್ಣಾಮಲೈ

Team Udayavani, Aug 2, 2024, 8:27 PM IST

1-DMK

ಚೆನ್ನೈ: ‘ರಾಮನ ಅಸ್ತಿತ್ವಕ್ಕೆ ಯಾವುದೇ ಐತಿಹಾಸಿಕ ಪುರಾವೆಗಳಿಲ್ಲ’ ಎಂದು ತಮಿಳುನಾಡು ಸಚಿವ ಎಸ್‌.ಎಸ್. ಶಿವಶಂಕರ್ ಹೇಳಿಕೆ ನೀಡಿ ವಿವಾದವನ್ನು ಹುಟ್ಟುಹಾಕಿದ್ದಾರೆ.

ಅರಿಯಲೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಶಿವಶಂಕರ್, ರಾಜೇಂದ್ರ ಚೋಳನ (Rajendra I of Chola dynasty) ಪರಂಪರೆಯನ್ನು ಆಚರಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ, ಇಲ್ಲದಿದ್ದರೆ ಜನರು ತಮಗೆ ಸಂಬಂಧವಿಲ್ಲದ ಯಾವುದನ್ನಾದರೂ ಆಚರಿಸಲು ಒತ್ತಾಯಿಸಲಾಗುತ್ತದೆ. ರಾಜೇಂದ್ರ ಚೋಳ ನ ಅಸ್ಥಿತ್ವ ತೋರಿಸಲು, ಅವರು ನಿರ್ಮಿಸಿದ ಕೊಳಗಳು, ಅವರು ನಿರ್ಮಿಸಿದ ದೇವಾಲಯಗಳು ಇವೆ. ಲಿಪಿಗಳಲ್ಲಿ ಅವರ ಹೆಸರನ್ನು ಉಲ್ಲೇಖಿಸಲಾಗಿದೆ ಮತ್ತು ಅವರ ಶಿಲ್ಪಗಳು ಪ್ರಸ್ತುತವಾಗಿವೆ. ಆದರೆ ರಾಮ ಇದ್ದ ಎಂಬುದಕ್ಕೆ ಯಾವುದೇ ಪುರಾವೆ ಅಥವಾ ಇತಿಹಾಸವಿಲ್ಲ. ಅವರು ಅವನನ್ನು ಅವತಾರ ಎಂದು ಕರೆಯುತ್ತಾರೆ. ಅವತಾರ ಹುಟ್ಟಲು ಸಾಧ್ಯವಿಲ್ಲ. ನಮ್ಮನ್ನು ದುರ್ಬಳಕೆ ಮಾಡಿ, ನಮ್ಮ ಇತಿಹಾಸವನ್ನು ಮರೆಮಾಚಲು ಮತ್ತು ಇನ್ನೊಂದು ಇತಿಹಾಸವನ್ನು ದೊಡ್ಡದಾಗಿ ತೋರಿಸಲು ಇದನ್ನು ಮಾಡಲಾಗುತ್ತಿದೆ,’’ ಎಂದು ಹೇಳುವ ಮೂಲಕ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಅವರು ಡಿಎಂಕೆಗೆ “ರಾಮನ ಮೇಲಿನ ಗೀಳು” ಎಂದು ಕಿಡಿ ಕಾರಿದ್ದಾರೆ.“ಭಗವಾನ್ ಶ್ರೀರಾಮನೊಂದಿಗಿನ ಡಿಎಂಕೆಯ ಹಠಾತ್ ಗೀಳು ನಿಜವಾಗಿಯೂ ನೋಡಲೇಬೇಕಾದುದು. ನೂತನ ಸಂಸತ್ ನಲ್ಲಿ ಚೋಳ ರಾಜವಂಶದ ಸೆಂಗೋಲ್ ಅನ್ನು ಸ್ಥಾಪಿಸಿದ್ದಕ್ಕಾಗಿ ನಮ್ಮ ಪ್ರಧಾನಿ ಮೋದಿಯವರನ್ನು ವಿರೋಧಿಸಿದವರು ಅವರೇ ಅಲ್ಲವೇ? ತಮಿಳುನಾಡಿನ ಇತಿಹಾಸವು 1967 ರಲ್ಲಿ ಪ್ರಾರಂಭವಾಯಿತು ಎಂದು ಭಾವಿಸುವ ಡಿಎಂಕೆಯು ರಾಷ್ಟ್ರದ ಶ್ರೀಮಂತ ಸಂಸ್ಕೃತಿ ಮತ್ತು ಇತಿಹಾಸದ ಮೇಲಿನ ಪ್ರೀತಿಯನ್ನು ಇದ್ದಕ್ಕಿದ್ದಂತೆ ಕಂಡುಕೊಂಡಿರುವುದು ಬಹುತೇಕ ಹಾಸ್ಯಾಸ್ಪದವಾಗಿದೆ. ಬಹುಶಃ ಡಿಎಂಕೆ ಸಚಿವರಾದ ರೇಗುಪತಿ ಮತ್ತು ಶಿವಶಂಕರ್ ಅವರು ಕುಳಿತು, ಚರ್ಚೆ ನಡೆಸಿ, ಭಗವಾನ್ ರಾಮನ ಕುರಿತು ಒಮ್ಮತಕ್ಕೆ ಬರಲು ಇದು ಸಮಯವಾಗಿದೆ. ಶಿವ ಶಂಕರ್ ಅವರು ರೇಗುಪತಿ ಅವರಿಂದ ಭಗವಾನ್ ಶ್ರೀರಾಮನ ಬಗ್ಗೆ ಒಂದೋ ಎರಡೋ ವಿಷಯಗಳನ್ನು ಕಲಿಯಬಹುದು ಎಂದು ನಮಗೆ ವಿಶ್ವಾಸವಿದೆ” ಎಂದು ಅಣ್ಣಾಮಲೈ ತಿರುಗೇಟು ನೀಡಿದ್ದಾರೆ.

ತಮಿಳುನಾಡಿನ ಕಾನೂನು ಸಚಿವ ರೇಗುಪತಿ ಅವರು ಭಗವಾನ್ ರಾಮ “ದ್ರಾವಿಡ ಮಾದರಿಯ ಮುಂಚೂಣಿ” ಎಂದು ಹೇಳಿದ್ದನ್ನು ಅಣ್ಣಾಮಲೈ ಉಲ್ಲೇಖಿಸಿದರು.

ಟಾಪ್ ನ್ಯೂಸ್

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-kashmir-msulim-IAS

Kashmir; ಮೊದಲ ಮುಸ್ಲಿಂ ಐಎಎಸ್‌ ಅಧಿಕಾರಿ ನಿಧನ

PM Modi: ವಿದೇಶದಲ್ಲಿ ನಮ್ಮ ದೇವತೆಗಳಿಗೆ ರಾಹುಲ್‌ ಅವಮಾನ

PM Modi: ವಿದೇಶದಲ್ಲಿ ನಮ್ಮ ದೇವತೆಗಳಿಗೆ ರಾಹುಲ್‌ ಅವಮಾನ

1-JSSS

TMC ರಾಜ್ಯಸಭಾ ಸದಸ್ಯತ್ವಕ್ಕೆ ಜವಾಹರ್‌ ಸರ್ಕಾರ್‌ ರಾಜೀನಾಮೆ

1-eeeeee

Train ಹಳಿಯ ಮೇಲೆ ರಾಡ್‌: ಹಳಿ ತಪ್ಪಿಸಲು ಮತ್ತೆ ಯತ್ನ, ತಪ್ಪಿದ ಅನಾಹುತ

firee

Bihar;ಜಮೀನು ವಿವಾದ: 21 ದಲಿತರ ಮನೆಗಳಿಗೆ ಬೆಂಕಿ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.