![Parameshwar](https://www.udayavani.com/wp-content/uploads/2024/07/Parameshwar-415x249.jpg)
ದೇಗುಲ ಜೀರ್ಣೋದ್ಧಾರಕ್ಕೆ ಮುಸ್ಲಿಮರಿಂದ ದೇಣಿಗೆ; 50 ಲಕ್ಷ ರೂ. ಸಂಗ್ರಹಿಸಿ ಕೊಟ್ಟ ಸಮುದಾಯ
Team Udayavani, Apr 10, 2024, 10:57 PM IST
![ದೇಗುಲ ಜೀರ್ಣೋದ್ಧಾರಕ್ಕೆ ಮುಸ್ಲಿಮರಿಂದ ದೇಣಿಗೆ; 50 ಲಕ್ಷ ರೂ. ಸಂಗ್ರಹಿಸಿ ಕೊಟ್ಟ ಸಮುದಾಯ](https://www.udayavani.com/wp-content/uploads/2024/04/TEMPLE-620x349.jpg)
ಮಲಪ್ಪುರಂ: ಶತಮಾನಗಳಷ್ಟು ಹಳೆಯದಾದ ಹಿಂದೂ ದೇಗುಲ ಜೀರ್ಣೋದ್ಧಾರ ಮತ್ತು ಪ್ರಾಣ ಪ್ರತಿಷ್ಠಾಪನೆಯು ಹಿಂದೂ ಮತ್ತು ಮುಸ್ಲಿಮ್ ಸೌಹಾರ್ದತೆಗೆ ಕೇರಳದಲ್ಲಿ ಮಾದರಿಯಾಗಿದೆ. ಮುಸ್ಲಿಮರೇ ಹೆಚ್ಚಿರುವ ಹಳ್ಳಿಯ ಈ “ಕೇರಳ ಸ್ಟೋರಿ’ ಹೆಚ್ಚು ಗಮನ ಸೆಳೆಯುತ್ತಿದೆ.
ಕೊಂಡಟ್ಟಿಯ ಮುತುವಳ್ಳೂರ್ನ 400 ವರ್ಷಗಳ ಹಳೆಯ ಶ್ರೀ ದುರ್ಗಾ ಭಗವತಿ ದೇಗುಲವನ್ನು ಜೀರ್ಣೋದ್ಧಾರ ಮಾಡಲಾಗಿದೆ. ದೇಗುಲದ ಅಧಿಕಾರಿಗಳ ಹೇಳಿಕೆಗಳ ಪ್ರಕಾರ, ಜೀರ್ಣೋದ್ಧಾರಕ್ಕೆ ಈವರೆಗೆ ವೆಚ್ಚ ಮಾಡಲಾಗಿರುವ 50 ಲಕ್ಷ ರೂ. ಪೈಕಿ ಹೆಚ್ಚಿನ ಅರ್ಧಕ್ಕೂ ಹೆಚ್ಚು ಹಣವನ್ನು ಮುಸ್ಲಿಂ ಸಮುದಾಯದ ದಾನಿಗಳು ನೀಡಿದ್ದಾರೆ.
ಇಂಡಿಯನ್ ಯುನಿಯನ್ ಮಸ್ಲಿಮ್ ಲೀಗ್ (ಐಯುಎಂಎಲ್)ನ ನಾಯಕ ಸಿದ್ಧಿಕಿ ಅಲಿ ಸಿಹಾಬ್ ತಂಗಳ್ ಸೇರಿ ಹಲವರು ಜೀರ್ಣೋದ್ಧಾರಕ್ಕೆ ಕಾಣಿಕೆ ನೀಡಿದ್ದಾರೆ. ನಿಧಿ ಸಂಗ್ರಹಕ್ಕಾಗಿ ದೇವಸ್ಥಾನಕ್ಕೂ ಅವರು ಭೇಟಿ ನೀಡಿದ್ದ ರು ಎಂದು ದೇಗುಲ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರನ್ ಪಿ. ತಿಳಿಸಿದ್ದಾರೆ. 2015ರಲ್ಲಿ ಆರಂಭ ವಾದ ದೇಗುಲ ಜೀರ್ಣೋದ್ಧಾರವು ಈಗ 8ನೇ ವರ್ಷಕ್ಕೆ ಕಾಲಿಟ್ಟಿದೆ. ಬೃಹತ್ ದುರ್ಗಾ ಭಗವತಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ.
ಟಾಪ್ ನ್ಯೂಸ್
![Parameshwar](https://www.udayavani.com/wp-content/uploads/2024/07/Parameshwar-415x249.jpg)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.