ಭಾರತಕ್ಕೆ ದ್ರೋಹ ಬಗೆಯಬೇಡಿ; ರಾಹುಲ್ ವಿರುದ್ಧ ಅನುರಾಗ್ ಠಾಕೂರ್ ವಾಗ್ದಾಳಿ
Team Udayavani, Mar 6, 2023, 5:49 PM IST
ನವದೆಹಲಿ: ಭಾರತದಲ್ಲಿ ಪ್ರಜಾಪ್ರಭುತ್ವ “ಕಣ್ಮರೆಯಾಗುತ್ತಿರುವ” ಬಗ್ಗೆ ಯುಎಸ್ ಮತ್ತು ಯುರೋಪಿಯನ್ ರಾಷ್ಟ್ರಗಳ ಮಧ್ಯಪ್ರವೇಶವನ್ನು ಬಯಸುತ್ತಿರುವ ರಾಹುಲ್ ಗಾಂಧಿಯವರ ಟೀಕೆಗಳಿಗೆ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ಸೋಮವಾರ ವಾಗ್ದಾಳಿ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು”ಭಾರತಕ್ಕೆ ದ್ರೋಹ ಮಾಡಬೇಡಿ, ರಾಹುಲ್ ಗಾಂಧಿ ಜೀ. ಭಾರತದ ವಿದೇಶಾಂಗ ನೀತಿಗೆ ಆಕ್ಷೇಪಣೆಗಳು ಈ ವಿಷಯದ ಬಗ್ಗೆ ನಿಮ್ಮ ಅಲ್ಪ ತಿಳುವಳಿಕೆಗೆ ಸಾಕ್ಷಿಯಾಗಿದೆ. ನೀವು ವಿದೇಶಿ ನೆಲದಿಂದ ಭಾರತದ ಬಗ್ಗೆ ಹರಡುವ ಸುಳ್ಳುಗಳನ್ನು ಯಾರೂ ನಂಬುವುದಿಲ್ಲ” ಎಂದು ಹೇಳಿದರು.
ತಮ್ಮ ವೈಫಲ್ಯಗಳನ್ನು ಮರೆಮಾಚುವ ಪಿತೂರಿಯ ಭಾಗವಾಗಿ ರಾಹುಲ್ ಗಾಂಧಿ ವಿದೇಶಿ ನೆಲದಿಂದ “ಭಾರತವನ್ನು ದೂಷಿಸಲು” ಆಶ್ರಯಿಸಿದ್ದಾರೆ ಎಂದು ಠಾಕೂರ್ ಹೇಳಿದರು.
ಅವರ ಭಾಷೆ, ಅವರ ಆಲೋಚನೆಗಳು, ಅವರ ಕಾರ್ಯಶೈಲಿ,ಎಲ್ಲವೂ ಶಂಕಿತವಾಗಿದೆ. ಇದೇ ಮೊದಲಲ್ಲ, ಪದೇ ಪದೇ ಇತರ ಹೇಳಿಕೆ ನೀಡುತ್ತಾ ಬಂದಿದ್ದಾರೆ.ಮಾತ್ರವಲ್ಲದೇ ಕೋವಿಡ್ ನಂತಹ ಮಾರಕ ರೋಗವು ಅಪ್ಪಳಿಸಿದಾಗ, ಅವರು ಭಾರತದ ಲಸಿಕೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಿದರು ಎಂದು ಹೇಳಿದರು.
ಚೀನಿಯರು ಭಾರತದ ಭೂಪ್ರದೇಶವನ್ನು ಅತಿಕ್ರಮಿಸಲು ಪ್ರಯತ್ನಿಸಿದಾಗ ಮಾಜಿ ಕಾಂಗ್ರೆಸ್ ಅಧ್ಯಕ್ಷರು ಸಶಸ್ತ್ರ ಪಡೆಗಳ ಮೇಲೆ ಪ್ರಶ್ನೆಗಳನ್ನು ಎತ್ತಿದರು. ಅವರು ಚೀನದ ಅಧಿಕಾರಿಗಳನ್ನು ಭೇಟಿಯಾಗಿದ್ದರು ಎಂದು ಠಾಕೂರ್ ಆರೋಪಿಸಿದ್ದಾರೆ.
ನಮ್ಮ ಸೈನಿಕರು ಹುತಾತ್ಮರಾದಾಗ ಅವರು ಕಾರ್ ಬಾಂಬ್ನಿಂದ ಕೊಲ್ಲಲ್ಪಟ್ಟರು ಎಂದು ಹೇಳಿದರು. ಸಶಸ್ತ್ರ ಪಡೆಗಳ ಬಗ್ಗೆ ರಾಹುಲ್ ಗಾಂಧಿ ಯೋಚಿಸುವ ರೀತಿ ಇದೇನಾ? ಎಂದು ಪ್ರಶ್ನಿಸಿದರು.
ಭಾರತದ ಪ್ರಜಾಪ್ರಭುತ್ವ ಬಲಿಷ್ಠವಾಗಿದೆ ಮಾತ್ರವಲ್ಲದೆ ಜನರು ಬಲಿಷ್ಠರಾಗಿದ್ದಾರೆ ಮತ್ತು ಸಶಸ್ತ್ರ ಪಡೆಗಳೂ ಬಲಿಷ್ಠವಾಗಿವೆ ಆದರೆ ರಾಹುಲ್ ಅವರು ಅಮೆರಿಕವನ್ನು ಮಧ್ಯಪ್ರವೇಶಿಸಲು ಏಕೆ ಕೇಳಬೇಕು? ಎಂದು ಠಾಕೂರ್ ಆರೋಪಿಸಿದ್ದಾರೆ.
ಭಾರತವು ದೂರದೃಷ್ಟಿಯ ನಾಯಕತ್ವವನ್ನು ಹೊಂದಿದೆ ಅಲ್ಲದೆ ವಿಶ್ವ ನಾಯಕರು ಭಾರತವನ್ನು ನಂಬುತ್ತಾರೆ ಮತ್ತು ಅವರು ಮೋದಿಯನ್ನು ನಂಬುತ್ತಾರೆ ಎಂದು ಸಚಿವರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi: ರಾಮಲೀಲಾ ಪ್ರದರ್ಶನದ ವೇಳೆ ಕುಸಿದು ಬಿದ್ದು ರಾಮನ ಪಾತ್ರಧಾರಿ ಮೃತ್ಯು
Short Circuit; ಅಗ್ನಿ ಆಕಸ್ಮಿಕದಲ್ಲಿ ಒಂದೇ ಕುಟುಂಬದ ಏಳು ಮಂದಿ ಸಜೀವ ದಹನ
Agra: ಶಿಕ್ಷಕಿಯ ಆಕ್ಷೇಪಾರ್ಹ ವಿಡಿಯೋ ಹಂಚಿಕೊಂಡ ವಿದ್ಯಾರ್ಥಿಗಳು; ನಾಲ್ವರ ಬಂಧನ
31 Naxal ಎನ್ಕೌಂಟರ್ಗೆ 1,500 ಮಂದಿ 25 ಕಿ.ಮೀ. ಟ್ರೆಕ್!
Maharashtra; ಅಹ್ಮದ್ನಗರ ಇನ್ನು ಮುಂದೆ ‘ಅಹಿಲ್ಯಾನಗರ’
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.