![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Sep 1, 2018, 4:13 PM IST
ಚೆನ್ನೈ : ”ಪಕ್ಷದ ಅಧ್ಯಕ್ಷ ಎಂ ಕೆ ಸ್ಟಾಲಿನ್ ಅವರ ಕಾಲಿಗೆ ಯಾರೂ ಎರಗಬಾರದು, ಹೂಮಾಲೆ ಹಾಕಬಾರದು, ಕೇವಲ ಒಣಕ್ಕಂ ಎಂದು ಹೇಳುವ ಮೂಲಕ ಅವರನ್ನು ಗೌರವಿಸಬೇಕು” ಎಂದು ಡಿಎಂಕೆ ತನ್ನ ಪದಾಧಿಕಾರಿಗಳು ಮತ್ತು ಕಾರ್ಯಕರ್ತರಿಗೆ ಕಟ್ಟಪ್ಪಣೆ ಮಾಡಿದೆ.
”ನಾಯಕನ ಕಾಲಿಗೆ ಎರಗುವುದು ಆತ್ಮ ಗೌರವದ ತತ್ವಗಳಿಗೆ ವಿರುದ್ಧ. ಆದುದರಿಂದ ಯಾರೂ ಸ್ಟಾಲಿನ್ ಕಾಲಿಗೆ ಎರಗಬಾರದು; ಒಣಕ್ಕಂ ಎಂದು ಹೇಳಿದರೆ ಸಾಕು. ಆ ಮೂಲಕ ಎಲ್ಲರೂ ಉತ್ತಮ ರಾಜಕೀಯ ಸಂಸ್ಕೃತಿಯನ್ನು ರೂಪಿಸುವುದಕ್ಕೆ ಸಹಕರಿಬಹುದು” ಎಂದು ಡಿಎಂಕೆ ಹೇಳಿದೆ.
ಹಿಂದೆಲ್ಲ ಎಐಎಡಿಎಂಕೆ ಪರಮೋಚ್ಚ ನಾಯಕಿ ದಿ| ಜಯಲಲಿತಾ ಅವರ ಹಿಂಬಾಲಕರು, ಅನುಯಾಯಿಗಳು, ಪದಾಧಿಕಾರಿಗಳು ಆಕೆಯ ಕಾಲಿಗೆ ಎರಗುತ್ತಿದ್ದುದನ್ನು ಡಿಎಂಕೆ ಲೇವಡಿ ಮಾಡುತ್ತಿತ್ತು. ಈಗ ತಾವೇ ಅಂತಹ ಕೃತ್ಯಕ್ಕೆ ಇತರರಿಂದ ಲೇವಡಿಗೆ ಗುರಿಯಾಗಬಾರದು ಎಂಬ ಕಾರಣಕ್ಕೆ ಡಿಎಂಕೆ ತನ್ನ ಪದಾಧಿಕಾರಿಗಳಿಗೆ, ಕಾರ್ಯಕರ್ತರಿಗೆ ಈ ರೀತಿಯ ಕಟ್ಟಪ್ಪಣೆ ಮಾಡಿದೆ.
ಕಳೆದ ಆಗಸ್ಟ್ 28ರಂದು ಸ್ಟಾಲಿನ್ ಪಕ್ಷದ ಅಧ್ಯಕ್ಷರಾಗಿ ಚುನಾಯಿತರಾಗಿದ್ದಾಗ ಪಕ್ಷದ ಪ್ರಧಾನ ಕಾರ್ಯಾಲಯವಾದ ಅಣ್ಣಾ ಅರಿವಾಳಯಂ ನಲ್ಲಿ ಪಕ್ಷದ ಪದಾಧಿಕಾರಿಗಳು, ಸ್ಟಾಲಿನ್ ಕಾಲಿಗೆರಗಿ, ಹೂಮಾಲೆ, ಹೂ ಗುಚ್ಚ ನೀಡಿ ಗೌರವಿಸಿದ್ದರು.
ಆದರೆ ಅದಕ್ಕೂ ಹಿಂದೆ , ಈ ವರ್ಷ ಜನವರಿಯಲ್ಲಿ ಪಕ್ಷದ ಕಾರ್ಯಾಧ್ಯಕ್ಷರಾದಾಗಲೇ ಸ್ಟಾಲಿನ್ , ತಮ್ಮ ಕಾಲಿಗೆ ಯಾರೂ ಎರಗಬಾರದು; ಹೂಮಾಲೆ ಹಾಕಬಾರದು ಎಂದು ತಾಕೀತು ಮಾಡಿದ್ದರು. ಆದರೂ ಅದು ಮತ್ತೆ ಮರುಕಳಿಸಿತು.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.