ದುಡಿವ ಕತ್ತೆಯೇ ನನಗೆ ಪ್ರೇರಣೆ


Team Udayavani, Feb 24, 2017, 3:50 AM IST

23-pti-5.jpg

ಲಕ್ನೋ: ಉತ್ತರ ಪ್ರದೇಶ ವಿಧಾನಸಭೆ ಕಣದಲ್ಲೀಗ ಕತ್ತೆ ಕಹಳೆ ಜೋರು. ಗುಜರಾತಿನ ಕತ್ತೆಗಳ ಪರ ನಟ ಅಮಿತಾಭ್‌ ಬಚ್ಚನ್‌ ಜಾಹೀರಾತು ನೀಡಿದ್ದರ ಬಗ್ಗೆ ಆಕ್ಷೇಪ ಎತ್ತಿದ್ದ ಸಿಎಂ ಅಖೀಲೇಶ್‌ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಗುರುವಾರ ಉತ್ತರ ನೀಡಿದ್ದು, ಕತ್ತೆಗಳ ನಿಯತ್ತನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. “125 ಕೋಟಿಯ ಈ ದೇಶಕ್ಕೆ ನಾನು ಹಗಲಿರುಳು ಕತ್ತೆ ರೀತಿ ದುಡಿಯಲು ಸಿದ್ಧ’ ಎಂದಿದ್ದಾರೆ.

“ದುಡಿವ ಕತ್ತೆಗಳೇ ನನಗೆ ಪ್ರೇರಣೆ. ಗುಜರಾತಿನ ಕತ್ತೆಗಳ ನಿಯತ್ತಿನ ಬಗ್ಗೆ ಅಖೀಲೇಶ್‌ಗೆ ಏನೂ ಗೊತ್ತಿಲ್ಲ. ಪ್ರಾಮಾಣಿಕತೆಯಲ್ಲಿ ಅವುಗಳನ್ನು ಮೀರಿಸುವವರಿಲ್ಲ. ದೇಶದ 125 ಕೋಟಿ ಮಂದಿಯನ್ನೂ ಮೀರಿಸುವವರಿಲ್ಲ. ಅಖೀಲೇಶ್‌ ಗುಜರಾತನ್ನು ದ್ವೇಷಿಸಬಹುದು. ಆದರೆ, ಅಲ್ಲಿ ಕೇವಲ ನಾನೊಬ್ಬನೇ ಹುಟ್ಟಿಲ್ಲ. ದಯಾನಂದ ಸರಸ್ವತಿ, ಮಹಾತ್ಮ ಗಾಂಧಿ, ಸರ್ದಾರ್‌ ಪಟೇಲ್‌ ಜನ್ಮವೆತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ಹುಟ್ಟಿದ ಕೃಷ್ಣ ಕೂಡ ನೆಲೆ ನಿಲ್ಲಲು ಬಂದಿದ್ದು ಗುಜರಾತಿನ ದ್ವಾರಕೆಗೆ ಎನ್ನುವುದು ತಿಳಿದಿರಲಿ’ ಎಂದು ಮೋದಿ ತಿರುಗೇಟು ನೀಡಿದರು.

“ಶಾ ದೊಡ್ಡ ಉಗ್ರ’: ಎರಡು ದಿನದ ಹಿಂದಷ್ಟೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಕಾಂಗ್ರೆಸ್‌, ಎಸ್ಪಿ ಮತ್ತು ಬಿಎಸ್ಪಿಯನ್ನು “ಕಸಬ್‌’ ಎಂದು ವ್ಯಾಖ್ಯಾನಿಸಿದ್ದರು. ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿರುವ ಬಿಎಸ್ಪಿ ನಾಯಕಿ ಮಾಯಾವತಿ, “ಈ ದೇಶಕ್ಕೆ ಅಮಿತ್‌ ಶಾ ದೊಡ್ಡ ಉಗ್ರಗಾಮಿ. ಅವರಿಗಿಂತ ಕಸಬ್‌ ದೊಡ್ಡ ಉಗ್ರನಾಗಲು ಸಾಧ್ಯವೇ ಇಲ್ಲ’ ಎಂದಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಪ್ರಧಾನಿ ಮೋದಿ ಅವರನ್ನು ಮಾಯಾ, “ಮಿ. ನೆಗೆಟಿವ್‌ ದಲಿತ್‌ ಮ್ಯಾನ್‌’ ಎಂದು ಸಂಭೋದಿಸಿದ್ದರು.

ಮೋದಿ ಹಗೆತನ: ಇನ್ನೊಂದೆಡೆ ಅಮೇಥಿಯಲ್ಲಿ ರಾಹುಲ್‌ ಗಾಂಧಿ ಕೂಡ ಪ್ರಧಾನಿ ವಿರುದ್ಧ ಗುಡುಗಿದರು. “ಆರಂಭದಲ್ಲಿ ಮೋದಿ ಬಹಳ ಖುಷಿಯಿಂದಲೇ ಚುನಾವಣಾ ಪ್ರಚಾರಕ್ಕಿಳಿದಿದ್ದರು. ಯಾವಾಗ ಕಾಂಗ್ರೆಸ್‌- ಎಸ್ಪಿ ಮೈತ್ರಿ ಆಯಿತೋ, ಅಲ್ಲಿಂದ ಹಗೆತನವನ್ನೇ ಮುಖ್ಯ ಅಸ್ತ್ರ ಮಾಡಿಕೊಂಡಿದ್ದಾರೆ. ಮೋದಿ ಮುಖದಲ್ಲಿ ನಗು ಕಣ್ಮರೆಯಾಗಿದೆ. ಹತಾಶೆಯಿಂದ ಅವರೀಗ ಜನರನ್ನು ಧಾರ್ಮಿಕವಾಗಿ ಒಡೆಯಲು ಯತ್ನಿಸುತ್ತಿದ್ದಾರೆ’ ಎಂದು ಕಾಂಗ್ರೆಸ್‌ ಉಪಾಧ್ಯಕ್ಷ ಆರೋಪಿಸಿದರು.

ಉತ್ತರ ಪ್ರದೇಶ ನಾಲ್ಕನೇ ಹಂತ ಶೇ.63ರಷ್ಟು ಮತ ಚಲಾವಣೆ
ಉತ್ತರ ಪ್ರದೇಶದ ನಾಲ್ಕನೇ ಹಂತದ ಮತದಾನ ಗುರುವಾರ ಮುಕ್ತಾಯ ಕಂಡಿದ್ದು, ಶೇ.63ರಷ್ಟು ಮತ ಚಲಾವಣೆ ಆಗಿದೆ. ಒಟ್ಟು 12 ಜಿಲ್ಲೆಗಳ 53 ವಿಧಾನಸಭೆ ಕ್ಷೇತ್ರಗಳಲ್ಲಿ ಮತದಾನ ನಡೆಯಿತು. ಮಹೋಬಾ ಎಂಬಲ್ಲಿ ಎಸ್ಪಿ ಮತ್ತು ಬಿಎಸ್ಪಿ ನಡುವೆ ಮಾರಾಮಾರಿ ವೇಳೆ ಪೊಲೀಸರು ಫೈರಿಂಗ್‌ ನಡೆಸಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ದಾಂದಲೆಗೆ ಕಾರಣವಾದ ಇಬ್ಬರ ಮೇಲೆ ಎಫ್ಐಆರ್‌ ದಾಖಲಿಸಿ, ಬಂಧನಕ್ಕೊಳಪಡಿಸಲಾಗಿದೆ. ಸೋನಿಯಾ ಗಾಂಧಿ ಕ್ಷೇತ್ರವಾದ ರಾಯ್‌ಬರೇಲಿ, ಅತಿ ಹಿಂದುಳಿದ ಬುಂದೇಲ್‌ ಖಂಡ, ಪುಣ್ಯಕ್ಷೇತ್ರ ಅಲಹಾಬಾದ್‌ ಸೇರಿದಂತೆ 12 ಜಿಲ್ಲೆಗಳಲ್ಲಿ ಮತದಾನ ನಡೆಯಿತು.  

ಟಾಪ್ ನ್ಯೂಸ್

ಮೋಜು-ಮಸ್ತಿಯ ಅಡ್ಡವಾಯ್ತಾ ಶ್ರೀ ಕ್ಷೇತ್ರ ದೇವರಮನೆ! ರಸ್ತೆ ಮಧ್ಯೆ ವಾಹನ ನಿಲ್ಲಿಸಿ ಡ್ಯಾನ್ಸ್

ಮೋಜು-ಮಸ್ತಿಯ ಅಡ್ಡವಾಯ್ತಾ ಶ್ರೀ ಕ್ಷೇತ್ರ ದೇವರಮನೆ! ರಸ್ತೆ ಮಧ್ಯೆ ವಾಹನ ನಿಲ್ಲಿಸಿ ಡ್ಯಾನ್ಸ್

Untitled-1

World Doctor’s Day: ನನ್ನ ಆರೋಗ್ಯ ನನ್ನ ಕೈಯ್ಯಲ್ಲಿ!

Panipuri ಅಸುರಕ್ಷಿತ ಪಾನಿಪೂರಿ ನಿಷೇಧ: ಇಂದು ಅಂತಿಮ ನಿರ್ಣಯ

Panipuri ಅಸುರಕ್ಷಿತ ಪಾನಿಪೂರಿ ನಿಷೇಧ: ಇಂದು ಅಂತಿಮ ನಿರ್ಣಯ

Daily Horoscope: ಉದ್ಯೋಗ ಹುಡುಕುವವರಿಗೆ ಶುಭಸೂಚನೆ ಸಿಗಲಿದೆ

Daily Horoscope: ಉದ್ಯೋಗ ಹುಡುಕುವವರಿಗೆ ಶುಭಸೂಚನೆ ಸಿಗಲಿದೆ

Warning… ಶವರ್ಮಾದಲ್ಲೂ ಬ್ಯಾಕ್ಟೀರಿಯಾ ಈಸ್ಟ್‌ ! ತಯಾರಕರ ವಿರುದ್ಧ ಕಾನೂನು ಕ್ರಮ

Warning… ಶವರ್ಮಾದಲ್ಲೂ ಬ್ಯಾಕ್ಟೀರಿಯಾ ಈಸ್ಟ್‌ ! ತಯಾರಕರ ವಿರುದ್ಧ ಕಾನೂನು ಕ್ರಮ

CM ಸಿದ್ದು, ಡಿಕೆಶಿ ಕರ್ನಾಟಕದ ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ ಇದ್ದಂತೆ: ವಚನಾನಂದ ಶ್ರೀ

CM ಸಿದ್ದು, ಡಿಕೆಶಿ ಕರ್ನಾಟಕದ ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ ಇದ್ದಂತೆ: ವಚನಾನಂದ ಶ್ರೀ

Mangaluru ವಿಮಾನ ನಿಲ್ದಾಣ: ಪರಿಹಾರ ಕಾಣದ ಕಾರ್ಗೋ ಸಮಸ್ಯೆ

Mangaluru ವಿಮಾನ ನಿಲ್ದಾಣ: ಪರಿಹಾರ ಕಾಣದ ಕಾರ್ಗೋ ಸಮಸ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

NEET EXAM ಇನ್ನು ನೀಟ್‌ ಆನ್‌ಲೈನ್‌?ವಿವಾದದ ಬೆನ್ನಲ್ಲೇ ಕೇಂದ್ರ ಸರಕಾರದ ಚಿಂತನೆ

NEET EXAM ಇನ್ನು ನೀಟ್‌ ಆನ್‌ಲೈನ್‌?ವಿವಾದದ ಬೆನ್ನಲ್ಲೇ ಕೇಂದ್ರ ಸರಕಾರದ ಚಿಂತನೆ

ಇಂದಿನಿಂದ 3 ದೇಸಿ ಕಾನೂನು ಜಾರಿ

ಇಂದಿನಿಂದ 3 ದೇಸಿ ಕಾನೂನು ಜಾರಿ; ಏನೆಲ್ಲ ಹೊಸತು?

1-kedar

Kedarnath ದೇಗುಲದ ಸಮೀಪ ಹಿಮಪಾತ: ವೀಡಿಯೋ ವೈರಲ್‌

Parliment New

Parliament ; ಇಂದಿನಿಂದ ಸಂಸತ್‌ ಕಲಾಪದಲ್ಲಿ ಕಾವೇರುವ ಚರ್ಚೆ ಸಾಧ್ಯತೆ!

Mann Ki Baat ಕಬ್ಬನ್‌ ಪಾರ್ಕ್‌ನಲ್ಲಿ ಸಂಸ್ಕೃತ ಕಲರವ: ಮೋದಿ ಮೆಚ್ಚುಗೆ

Mann Ki Baat ಕಬ್ಬನ್‌ ಪಾರ್ಕ್‌ನಲ್ಲಿ ಸಂಸ್ಕೃತ ಕಲರವ: ಮೋದಿ ಮೆಚ್ಚುಗೆ

MUST WATCH

udayavani youtube

ಸಂಸದೆ ಪ್ರಿಯಾಂಕಾ ಅಭಿನಂದನಾ‌ ಸಮಾವೇಶದಲ್ಲಿ ಸತೀಶ ಜಾರಕಿಹೊಳಿ ಭಾಷಣ

udayavani youtube

Congress ಪಾರ್ಟಿಯ ಯಾರೂ ನಮ್ಮನ್ನು ಸಂಪರ್ಕಿಸಿಲ್ಲ ಬಸವರಾಜ ಬೊಮ್ಮಾಯಿ

udayavani youtube

ರುಚಿ ರುಚಿ ಮನೆ ತಿಂಡಿ ಬೇಕು ಅನ್ನೋರು ವಿವಿ ಪುರಂಗೆ ಹೋಗಲೇಬೇಕು

udayavani youtube

ವಿಧಿಯಾಟಕ್ಕೆ ಬಲಿಯಾದ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್

udayavani youtube

ಮಾತು ಬರದ ಮಗುವಿಗೆ ಮಾತು ಬರಿಸಿದ ಕಾಪು ಮಾರಿಯಮ್ಮ | ಕಾಪುವಿನ ಅಮ್ಮನ ಪವಾಡ

ಹೊಸ ಸೇರ್ಪಡೆ

ಮೋಜು-ಮಸ್ತಿಯ ಅಡ್ಡವಾಯ್ತಾ ಶ್ರೀ ಕ್ಷೇತ್ರ ದೇವರಮನೆ! ರಸ್ತೆ ಮಧ್ಯೆ ವಾಹನ ನಿಲ್ಲಿಸಿ ಡ್ಯಾನ್ಸ್

ಮೋಜು-ಮಸ್ತಿಯ ಅಡ್ಡವಾಯ್ತಾ ಶ್ರೀ ಕ್ಷೇತ್ರ ದೇವರಮನೆ! ರಸ್ತೆ ಮಧ್ಯೆ ವಾಹನ ನಿಲ್ಲಿಸಿ ಡ್ಯಾನ್ಸ್

Untitled-1

World Doctor’s Day: ನನ್ನ ಆರೋಗ್ಯ ನನ್ನ ಕೈಯ್ಯಲ್ಲಿ!

Panipuri ಅಸುರಕ್ಷಿತ ಪಾನಿಪೂರಿ ನಿಷೇಧ: ಇಂದು ಅಂತಿಮ ನಿರ್ಣಯ

Panipuri ಅಸುರಕ್ಷಿತ ಪಾನಿಪೂರಿ ನಿಷೇಧ: ಇಂದು ಅಂತಿಮ ನಿರ್ಣಯ

Daily Horoscope: ಉದ್ಯೋಗ ಹುಡುಕುವವರಿಗೆ ಶುಭಸೂಚನೆ ಸಿಗಲಿದೆ

Daily Horoscope: ಉದ್ಯೋಗ ಹುಡುಕುವವರಿಗೆ ಶುಭಸೂಚನೆ ಸಿಗಲಿದೆ

Warning… ಶವರ್ಮಾದಲ್ಲೂ ಬ್ಯಾಕ್ಟೀರಿಯಾ ಈಸ್ಟ್‌ ! ತಯಾರಕರ ವಿರುದ್ಧ ಕಾನೂನು ಕ್ರಮ

Warning… ಶವರ್ಮಾದಲ್ಲೂ ಬ್ಯಾಕ್ಟೀರಿಯಾ ಈಸ್ಟ್‌ ! ತಯಾರಕರ ವಿರುದ್ಧ ಕಾನೂನು ಕ್ರಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.