![5-sulya](https://www.udayavani.com/wp-content/uploads/2024/07/5-sulya-415x249.jpg)
Housing Fraud Case: ಇಡಿ ದಾಳಿ… ಬಿಲ್ಡರ್ ಗೆ ಸೇರಿದ 52 ಕೋಟಿ ಮೌಲ್ಯದ ಆಸ್ತಿ ಜಪ್ತಿ
Team Udayavani, May 11, 2024, 8:43 AM IST
![Fraud Case: ಮುಂಬೈ ಬಿಲ್ಡರ್ ಮನೆ ಮೇಲೆ ಇಡಿ ದಾಳಿ… 52 ಕೋಟಿ ಮೌಲ್ಯದ ಆಸ್ತಿ ಜಪ್ತಿ](https://www.udayavani.com/wp-content/uploads/2024/05/ED-1-620x349.jpg)
ಮುಂಬಯಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ನವಿ ಮುಂಬೈನಲ್ಲಿರುವ ರಿಯಲ್ ಎಸ್ಟೇಟ್ ಗ್ರೂಪ್ ಮೊನಾರ್ಕ್ ಯೂನಿವರ್ಸಲ್ ಗ್ರೂಪ್ ಗೆ ಸೇರಿದ 52.73 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ.
ವಸತಿ ಯೋಜನೆಯಲ್ಲಿ ಅಕ್ರಮ ನಡೆಸಿರುವ ಕುರಿತು ಮೋನಾರ್ಕ್ ಯೂನಿವರ್ಸಲ್ ಗ್ರೂಪ್ ನ ಗೋಪಾಲ್ ಅಮರಲಾಲ್ ಠಾಕೂರ್, ಹಸ್ಮುಖ್ ಅಮರಲಾಲ್ ಠಾಕೂರ್ ಸೇರಿ ಇತರರ ವಿರುದ್ಧ ಮಹಾರಾಷ್ಟ್ರ ಪೊಲೀಸರು ದಾಖಲಿಸಿಕೊಂಡಿರುವ ಎಫ್ಐಆರ್ಗಳ ಆಧಾರದ ಮೇಲೆ ರಿಯಲ್ ಎಸ್ಟೇಟ್ ಗುಂಪಿನ ಅಕ್ರಮ ಹಣ ವರ್ಗಾವಣೆಯ ಕುರಿತು ಇಡಿ ತನಿಖೆಯನ್ನು ಪ್ರಾರಂಭಿಸಿದೆ, ಈ ವೇಳೆ ಬಿಲ್ಡರ್ ಗಳು ನಿಜವಾದ ಫ್ಲಾಟ್ ಖರೀದಿದಾರರನ್ನು ವಂಚಿಸಿದ್ದಾರೆ. ಫ್ಲಾಟ್ಗಳನ್ನು ಮಾರಾಟ ಮಾಡುವ ವೇಳೆ ಖರೀದಿರಾರರ ಹೆಸರುಗಳನ್ನೂ ನೋಂದಾಯಿಸದೆ ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಮೊನಾರ್ಕ್ ಯೂನಿವರ್ಸಲ್ ಗ್ರೂಪ್ ತಮ್ಮ ಬಹು ಪ್ರಾಜೆಕ್ಟ್ಗಳಿಗೆ ಖರೀದಿದಾರರನ್ನು ಆಹ್ವಾನಿಸಿತ್ತು ಮತ್ತು ಟಾಪ್ ಬಾಲಿವುಡ್ ನಟಿಯನ್ನು ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆ ಮಾಡಿಕೊಂಡಿತ್ತು. ಮೊನಾರ್ಕ್ ಯೂನಿವರ್ಸಲ್ ಗ್ರೂಪ್ ಪ್ರಾಜೆಕ್ಟ್ಗಳನ್ನು ಪ್ರಚಾರ ಮಾಡುತ್ತಿದ್ದ ಬಾಲಿವುಡ್ ನಟಿಯನ್ನು ಒಳಗೊಂಡ ಜಾಹೀರಾತುಗಳನ್ನು ನೋಡಿದ ನಂತರ ದೊಡ್ಡ ದೊಡ್ಡ ಹೂಡಿಕೆದಾರರು ಈ ಕಂಪನಿಯಲ್ಲಿ ದೊಡ್ಡ ಮಟ್ಟದ ಹೂಡಿಕೆ ಮಾಡಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.
ಬಿಲ್ಡರ್ ಗೋಪಾಲ್ ಅಮರಲಾಲ್ ಠಾಕೂರ್ ಅವರು ಹೂಡಿಕೆದಾರರಿಂದ ಸಂಗ್ರಹಿಸಿದ ಅಪಾರ ಪ್ರಮಾಣದ ಹಣವನ್ನು ಅದರ ವಿವಿಧ ಸೋದರ ಸಂಸ್ಥೆಗಳಿಗೆ ಹಂಚಿದ್ದಾರೆ ಎಂದು ಇಡಿ ತನಿಖೆಯಿಂದ ತಿಳಿದುಬಂದಿದೆ.
ಇದನ್ನೂ ಓದಿ: Daily Horoscope: ಉದ್ಯೋಗದಲ್ಲಿ ದಿನೇ ದಿನೇ ಉನ್ನತಿ, ಅಕಸ್ಮಾತ್ ಧನಾಗಮ ಯೋಗ
ಟಾಪ್ ನ್ಯೂಸ್
![5-sulya](https://www.udayavani.com/wp-content/uploads/2024/07/5-sulya-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Modi-Lokasabha](https://www.udayavani.com/wp-content/uploads/2024/07/Modi-Lokasabha-150x90.jpg)
Lokasabha: ಕಾಂಗ್ರೆಸ್ಗೆ 100ಕ್ಕೆ 99 ಸಿಕ್ಕಿದ್ದಲ್ಲ- ಪ್ರಧಾನಿ ಮೋದಿ ವಾಗ್ದಾಳಿ
![Anant Ambani ಮದುವೆಗೆ ಮುನ್ನ ಸಾಮೂಹಿಕ ವಿವಾಹ ಆಯೋಜನೆ; ವಧುಗಳಿಗೆ ತಲಾ ಒಂದು 1ರೂ. ವಿತರಣೆ](https://www.udayavani.com/wp-content/uploads/2024/07/anant-150x83.jpg)
Anant Ambani ಮದುವೆಗೆ ಮುನ್ನ ಸಾಮೂಹಿಕ ವಿವಾಹ; ವಧುಗಳಿಗೆ ತಲಾ ಒಂದು 1.01 ಲಕ್ಷರೂ. ವಿತರಣೆ
![Uttar Pradesh: ಸತ್ಸಂಗ ಕಾರ್ಯಕ್ರಮದಲ್ಲಿ ಕಾಲ್ತುಳಿತ-ಮಕ್ಕಳು ಸೇರಿ 27 ಮಂದಿ ದುರ್ಮರಣ](https://www.udayavani.com/wp-content/uploads/2024/07/Lucknoe-150x93.jpg)
Uttar Pradesh: ಸತ್ಸಂಗ ಕಾರ್ಯಕ್ರಮದಲ್ಲಿ ಕಾಲ್ತುಳಿತ-ಮಕ್ಕಳು ಸೇರಿ 50 ಮಂದಿ ದುರ್ಮರಣ
![](https://www.udayavani.com/wp-content/uploads/2024/07/Bite-150x84.jpg)
Uttar Pradesh: ಹಾವಿನ ದ್ವೇಷ…45 ದಿನಗಳಲ್ಲಿ 5 ಬಾರಿ ಹಾವು ಕಚ್ಚಿದರೂ ಬದುಕುಳಿದ ವ್ಯಕ್ತಿ!
![16](https://www.udayavani.com/wp-content/uploads/2024/07/16-150x90.jpg)
ಮದುವೆ ಆಗಲು ನಿರಾಕರಿಸಿದ್ದಕ್ಕೆ ಪ್ರಿಯಕರನ ಖಾಸಗಿ ಅಂಗವನ್ನೇ ಕತ್ತರಿಸಿದ ಪ್ರಿಯತಮೆ.!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.