![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Aug 11, 2018, 7:27 AM IST
ಚಂಡೀಗಢ: ಹೆತ್ತವರನ್ನು ಎದುರು ಹಾಕಿಕೊಂಡು ಇಷ್ಟಪಟ್ಟವರನ್ನು ವರಿಸಿ ಓಡಿಹೋಗಿ, ಆನಂತರ ತಮಗೆ ಪೊಲೀಸ್ ರಕ್ಷಣೆ ನೀಡಬೇಕೆಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವ ಪಂಜಾಬ್ನ ಪ್ರೇಮಿಗಳಿಗೆ ಅಲ್ಲಿನ ಹೈಕೋರ್ಟ್ ಚುರುಕು ಮುಟ್ಟಿಸಿದೆ. ಯಾವುದೇ ಯುವತಿಯನ್ನು ಮದುವೆಯಾಗಿ ಓಡಿಸಿಕೊಂಡು ಹೋಗುವ ಪ್ರೇಮಿಯು, ಓಡಿ ಹೋದ ದಿನದಿಂದ 9 ತಿಂಗಳೊಳಗಾಗಿ ತನ್ನ ಪತ್ನಿಯ ಹೆಸರಿನಲ್ಲಿ 50,000 ರೂ.ಗಳಿಂದ 3 ಲಕ್ಷ ರೂ.ವರೆಗೆ ಬ್ಯಾಂಕಿನಲ್ಲಿ ನಿಶ್ಚಿತ ಠೇವಣಿಯನ್ನು ಇಡಬೇಕು ಎಂದು ಪಂಜಾಬ್ ಹಾಗೂ ಹರ್ಯಾಣ ಹೈಕೋರ್ಟ್ನ ನ್ಯಾಯ ಮೂರ್ತಿ ಭಜಂತ್ರಿ ಆದೇಶಿಸಿದ್ದಾರೆ. ಕುಲದೀಪ್ ಮತ್ತು ಆತನ ಪತ್ನಿ ಪೊಲೀಸ್ ರಕ್ಷಣೆಗಾಗಿ ಸಲ್ಲಿಸಿದ್ದ ಅರ್ಜಿಯ ತೀರ್ಪಿನಲ್ಲಿ ನ್ಯಾಯಮೂರ್ತಿ ಭಜಂತ್ರಿ ಅವರು, ಕುಲದೀಪ್ ಅವರಿಗೆ 3 ಲಕ್ಷ ರೂ. ಠೇವಣಿ ಇಡುವಂತೆ ಸೂಚಿಸಿದರು.
ಇತ್ತೀಚೆಗೆ, ಇಂಥ ಹಲವಾರು ಪ್ರಕರಣಗಳಲ್ಲಿ ನ್ಯಾ. ಭಜಂತ್ರಿ ಇದೇ ರೀತಿ ತೀರ್ಪು ನೀಡಿದ್ದು ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ಸಮರ್ಥನೆ ನೀಡಿರುವ ಅವರು, ಇತ್ತೀಚೆಗೆ, ಪಂಜಾಬ್ನಲ್ಲಿ ಓಡಿಹೋದ ಪ್ರೇಮಿಗಳಿಂದ ಪೊಲೀಸ್ ರಕ್ಷಣೆ ಕೋರಿ ದಿನವೊಂದಕ್ಕೆ ಸರಾಸರಿ 20 ಅರ್ಜಿಗಳು ಹೈಕೋರ್ಟ್ನಲ್ಲಿ ದಾಖಲಾಗುತ್ತಿವೆ. ಹೀಗೆ ಯುವತಿಯನ್ನು ಓಡಿಸಿಕೊಂಡು ಬರುವ ಯುವಕರಿಗೆ ತಮ್ಮ ಸಂಗಾತಿ ಬಗ್ಗೆ ಇರಬಹುದಾದ ಬದ್ಧತೆಯನ್ನು ಪರೀಕ್ಷಿಸಲು ಇಂಥ ತೀರ್ಪು ನೀಡುತ್ತಿರುವುದಾಗಿ ತಿಳಿಸಿದ್ದಾರೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.