Excise: ಕೇಜ್ರಿಯೇ ಸೂತ್ರಧಾರಿ, 100 ಕೋ.ರೂ.ಗೆ ಬೇಡಿಕೆ: ಇ.ಡಿ.

ಕಿಕ್‌ಬ್ಯಾಕ್‌ ಹಣ ಗೋವಾ, ಪಂಜಾಬ್‌ ಚುನಾವಣೆಗೆ ಬಳಕೆ: ಆರೋಪ

Team Udayavani, Mar 23, 2024, 6:10 AM IST

kejriwal-2

ಹೊಸದಿಲ್ಲಿ: “ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರೇ ಅಬಕಾರಿ ನೀತಿ ಹಗರಣದ ಪ್ರಮುಖ ಸಂಚುಕೋರ ಹಾಗೂ ಕಿಂಗ್‌ಪಿನ್‌. ಅವರು ಬರೋಬ್ಬರಿ 100 ಕೋಟಿ ರೂ.ಗಳಿಗೆ ಬೇಡಿಕೆ ಮಂಡಿಸಿದ್ದರು’.
ಇದು ದಿಲ್ಲಿಯ ನ್ಯಾಯಾಲಯದಲ್ಲಿ ಶುಕ್ರ ವಾರ ಸಿಎಂ ಅರವಿಂದ ಕೇಜ್ರಿವಾಲ್‌ ವಿರುದ್ಧ ಜಾರಿ ನಿರ್ದೇಶ ನಾಲಯ (ಇ.ಡಿ.) ಮಾಡಿರುವ ಗಂಭೀರ ಆರೋಪ.

ಗುರುವಾರ ರಾತ್ರಿ ಕೇಜ್ರಿವಾಲ್‌ ಅವರನ್ನು ಬಂಧಿಸಿದ್ದ ಇ.ಡಿ.ಶುಕ್ರವಾರ ಅವರನ್ನು ದಿಲ್ಲಿಯ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಿ, 10 ದಿನಗಳ ಕಾಲ ತನ್ನ ವಶಕ್ಕೆ ನೀಡುವಂತೆ ಮನವಿ ಮಾಡಿತು. ಈ ವೇಳೆ ಇ.ಡಿ. ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಸ್‌.ವಿ. ರಾಜು, 2021-22ರ ದಿಲ್ಲಿ ಅಬಕಾರಿ ನೀತಿ ಜಾರಿಗಾಗಿ ಕೇಜ್ರಿವಾಲ್‌ ಅವರು “ದಕ್ಷಿಣ ಸಮೂಹ’ದಿಂದ (ಸೌತ್‌ ಗ್ರೂಪ್‌) ನೂರಾರು ಕೋಟಿ ರೂ. ಕಿಕ್‌ಬ್ಯಾಕ್‌ ಪಡೆದಿದ್ದಾರೆ. ಈ ಸಮೂಹದ ಆರೋಪಿಯಿಂದ 100 ಕೋಟಿ ರೂ.ಗಳಿಗೆ ಅವರು ಬೇಡಿಕೆ ಮಂಡಿಸಿದ್ದರು. ಅಷ್ಟೇ ಅಲ್ಲ, ಲಂಚ ನೀಡಿದವರು 600 ಕೋಟಿ ರೂ.ಗೂ ಹೆಚ್ಚು ಲಾಭ ಮಾಡಿಕೊಂಡಿದ್ದಾರೆ. ಕೇಜ್ರಿವಾಲ್‌ ಅವರು ಸೌತ್‌ ಗ್ರೂಪ್‌ ಮತ್ತು ಈ ಪ್ರಕರಣದ ಇತರ ಆರೋಪಿಗಳಾದ ಮನೀಶ್‌ ಸಿಸೋಡಿಯಾ, ಆಪ್‌ ಪದಾಧಿಕಾರಿ ವಿಜಯ್‌ ನಾಯರ್‌ ನಡುವೆ ದಲ್ಲಾಳಿ ರೀತಿಯಲ್ಲಿ ಕೆಲಸ ಮಾಡಿದ್ದಾರೆ ಎಂದರು.

ಕಿಕ್‌ಬ್ಯಾಕ್‌ ಆಗಿ ಪಡೆದ 45 ಕೋಟಿ ರೂ.ಗಳನ್ನು ಆಮ್‌ ಆದ್ಮಿ ಪಕ್ಷವು ಗೋವಾ ಮತ್ತು ಪಂಜಾಬ್‌ ವಿಧಾನಸಭೆ ಚುನಾವಣೆಗೆ ಬಳಸಿಕೊಂಡಿದೆ. ಹವಾಲಾ ಮೂಲಕ ಈ ಹಣ ರವಾನೆಯಾಗಿತ್ತು ಎಂದು ಇ.ಡಿ. ಪರ ವಕೀಲರು ಹೇಳಿದರು.

ಕೇಜ್ರಿ ಬಂಧನದ ಅಗತ್ಯ ಇರಲಿಲ್ಲ: ಸಿಂಘ್ವಿ
ಕೇಜ್ರಿವಾಲ್‌ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಅಭಿಷೇಕ್‌ ಮನು ಸಿಂಘ್ವಿ , ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅಧಿಕಾರ ದಲ್ಲಿರುವ ಮುಖ್ಯಮಂತ್ರಿಯೊಬ್ಬರನ್ನು ಬಂಧಿಸ ಲಾಗಿದೆ ಎಂದು ಪ್ರತಿಪಾದಿಸಿದ್ದಾರೆ. ಇ.ಡಿ.ಗೆ ಬಂಧಿಸುವ ಅಧಿಕಾರ ಇದೆ ಎನ್ನುವುದು ಬಂಧಿಸಲೇ ಬೇಕಾದ ಅಗತ್ಯ ಆಗಬಾರದು. ದಿಲ್ಲಿ ಅಬಕಾರಿ ನೀತಿ ಪ್ರಕರಣದಲ್ಲಿ ಕೇಜ್ರಿವಾಲ್‌ ಅವರನ್ನು ಬಂಧಿಸುವ ಅಗತ್ಯವೇ ಇರಲಿಲ್ಲ. ಹಣ ದೊರಕಿದ್ದೇ ಬಂಧನಕ್ಕೆ ಆಧಾರವಾಗಬಾರದು. ಅದು ವಿಚಾರಣೆಗೆ ಕಾರಣವಾಗಬಹುದು ಅಷ್ಟೆ ಎಂದರು.

ಈ ಪ್ರಕರಣದಲ್ಲಿ ಹೊಸ ಮಾದರಿ ಕಂಡುಬಂದಿದೆ. ಮೊದಲ ಅಥವಾ ಎರಡನೇ ಹೇಳಿಕೆಯಲ್ಲಿ ಸಾಕ್ಷಿಗಳು ಅರವಿಂದ್‌ ಕೇಜ್ರಿವಾಲ್‌ ಹೆಸರು ಹೇಳುವುದಿಲ್ಲ. ನೀವು (ಇ.ಡಿ.) ಆ ಸಾಕ್ಷಿಯನ್ನು ಬಂಧಿಸುತ್ತೀರಿ. ಜಾಮೀನು ನಿರಾಕರಿಸುತ್ತೀರಿ. ಕೂಡಲೇ ಸಾಕ್ಷಿಗಳು ಮಾಫಿ ಸಾಕ್ಷಿ ಆಗಿ ಬದಲಾಗುತ್ತಾರೆ. ಬಳಿಕ ಕೇಜ್ರಿವಾಲ್‌ ವಿರುದ್ಧ ಹೇಳಿಕೆ ನೀಡುತ್ತಾರೆ ಎಂದು ವಾದಿಸಿದ ಸಿಂಘ್ವಿ , ಕೇಜ್ರಿವಾಲ್‌ ಈ ಪ್ರಕರಣದಲ್ಲಿ ಹೇಗೆ ಭಾಗಿಯಾಗಿದ್ದಾರೆ ಎಂಬುದನ್ನು ಇ.ಡಿ. ನಿರೂಪಿಸಲಿ. ಕೇಜ್ರಿವಾಲ್‌ ವಿರುದ್ಧ ಹೇಳಿಕೆಗಳನ್ನು ಹೊರತುಪಡಿಸಿ ನೇರವಾದ ಯಾವುದೇ ಸಾಕ್ಷ್ಯಗಳಿಲ್ಲ ಎಂದರು.

ಕೇಜ್ರಿವಾಲ್‌ ಅವರನ್ನು ತನ್ನ ವಶಕ್ಕೆ ನೀಡುವ ಇ.ಡಿ.ಯ ಬೇಡಿಕೆಯನ್ನು ಎಂದಿನ ಪ್ರಕ್ರಿಯೆ ಎಂಬಂತೆ ನೋಡಬೇಡಿ. ಈ ಪ್ರಕರಣದಲ್ಲಿ ಪ್ರಜಾಪ್ರಭುತ್ವದ ಮುಖ್ಯ ವಿಷಯಗಳು ಅಡಗಿವೆ ಎಂದು ನ್ಯಾಯಾಲಯವನ್ನು ಕೇಳಿಕೊಂಡರು. ಇ.ಡಿ.ಯೇ ನ್ಯಾಯಮೂರ್ತಿ, ಜ್ಯೂರಿ ಮತ್ತು ಶಿಕ್ಷೆ ನೀಡುವ ಅಧಿಕಾರಿಯಂತೆ ವರ್ತಿಸುತ್ತಿದೆ ಎಂದು ಕೇಜ್ರಿವಾಲ್‌ ಪರವಾಗಿ ವಾದ ಮಂಡಿಸಿದ ಮತ್ತೂಬ್ಬ ವಕೀಲ ವಿಕ್ರಮ್‌ ಚೌಧರಿ ಆರೋಪಿಸಿದರು.

ಯಾವುದಿದು ಸೌತ್‌ ಗ್ರೂಪ್‌? 
ಅಬಕಾರಿ ನೀತಿ ಹಗರಣ ವಿಚಾರಣೆ ವೇಳೆ ಇ.ಡಿ.ಯು ಸೌತ್‌ ಗ್ರೂಪ್‌ (ದಕ್ಷಿಣ ಸಮೂಹ) ಎಂದು ಉಲ್ಲೇಖೀಸಿದೆ. ವೈಎಸ್‌ಆರ್‌ಸಿಪಿ ಸಂಸದ ಮಗುಂತಾ ಶ್ರೀನಿವಾಸಲು ರೆಡ್ಡಿ, ಅವರ ಪುತ್ರ ಮಗುಂತಾ ರಾಘವ್‌ ರೆಡ್ಡಿ, ಬಿಆರ್‌ಎಸ್‌ ಎಂಎಲ್‌ಸಿ ಕೆ. ಕವಿತಾ, ಉದ್ಯಮಿ ರಾಮಚಂದ್ರ ಪಿಳ್ಳೆ„, ಹೈದರಾಬಾದಿನ ಉದ್ಯಮಿ ಅಭಿಷೇಕ್‌ ಬೋಯಿನಪಳ್ಳಿ, ಲೆಕ್ಕ ಪರಿಶೋಧಕ ಬುಚ್ಚಿಬಾಬು ಗೋರಂಟ್ಲಾ, ಪ್ರಮುಖ ಫಾರ್ಮಾ ಕಂಪೆನಿಯ ನಿರ್ದೇಶಕ ಪಿ. ಶರತ್‌ ಚಂದ್ರ ರೆಡ್ಡಿ ಅವರನ್ನು ಇ.ಡಿ. “ಸೌತ್‌ ಗ್ರೂಪ್‌’ ಎಂದು ಉಲ್ಲೇಖೀಸಿದೆ.

ಇ.ಡಿ. ಆರೋಪವೇನು?
ಕೇಜ್ರಿವಾಲ್‌ ಅವರೇ ದಿಲ್ಲಿ ಅಬಕಾರಿ ನೀತಿ ಹಗರಣದ ಪ್ರಮುಖ ಸೂತ್ರಧಾರ.
ಅಬಕಾರಿ ನೀತಿ ಜಾರಿ ಮಾಡಲು ಕೇಜ್ರಿ 100 ಕೋ.ರೂ. ಲಂಚ ಪಡೆದಿದ್ದಾರೆ.
ಲಂಚ ಕೊಟ್ಟ “ಸೌತ್‌ ಗ್ರೂಪ್‌’ 600 ಕೋ.ರೂ.ಗೂ ಹೆಚ್ಚು ಲಾಭ ಮಾಡಿಕೊಂಡಿದೆ.
ಕಿಕ್‌ಬ್ಯಾಕ್‌ ಪೈಕಿ 45 ಕೋಟಿ ರೂ.ಗಳನ್ನು ಆಪ್‌ ಪಂಜಾಬ್‌, ಗೋವಾ ಚುನಾವಣೆಗೆ ವೆಚ್ಚ ಮಾಡಿದೆ.
ಈ ಹಣವು 4 ಹವಾಲಾ ಮಾರ್ಗಗಳ ಮೂಲಕ ರವಾನೆಯಾಗಿತ್ತು.

ಟಾಪ್ ನ್ಯೂಸ್

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1sadgu

Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!

Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.