Ramoji Rao ವಿದಾಯ ; ಪಾರ್ಥಿವ ಶರೀರಕ್ಕೆ ಹೆಗಲು ಕೊಟ್ಟ ಚಂದ್ರಬಾಬು ನಾಯ್ಡು
Team Udayavani, Jun 10, 2024, 1:48 AM IST
ಹೈದರಾಬಾದ್: ಶನಿವಾರ ನಿಧನ ಹೊಂದಿದ ರಾದ ದೇಶದ ಮಾಧ್ಯಮ ಕ್ಷೇತ್ರದ ದೈತ್ಯ, ರಾಮೋಜಿ ಗ್ರೂಪ್ ಮುಖ್ಯಸ್ಥ ಸಿ. ರಾಮೋಜಿ ರಾವ್(88) ಅವರ ಅಂತ್ಯಕ್ರಿಯೆ ರವಿವಾರ ಸಕಲ ಸರಕಾರಿ ಗೌರವಗಳೊಂದಿಗೆ ಹೈದರಾ ಬಾದ್ನ ರಾಮೋಜಿ ಫಿಲಂ ಸಿಟಿ ಯಲ್ಲಿ ನೆರವೇರಿತು. ಕುಟುಂಬ ಸದಸ್ಯರು, ಸ್ನೇಹಿತರು, ಹಿತೈಷಿಗಳು ಸೇರಿದಂತೆ ಅಪಾರ ಅಭಿಮಾನಿಗಳ ಸಮ್ಮುಖದಲ್ಲಿ ಪುತ್ರ ಕಿರಣ್ ಅವರು ರಾಮೋಜಿಯವರ ಚಿತೆಗೆ ಅಗ್ನಿಸ್ಪರ್ಶ ಮಾಡಿದರು.
ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು, ಭಾರತದ ನಿವೃತ್ತ ನ್ಯಾಯಮೂರ್ತಿ ಎನ್.ವಿ. ರಮಣ, ಟಿಡಿಪಿ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು, ತೆಲಂಗಾಣ ಸಚಿವರಾದ ತುಮ್ಮಲ ನಾಗೇಶ್ವರ ರಾವ್ ಮತ್ತು ಡಿ. ಸೀತಕ್ಕ, ಸಿನೆಮಾ ರಂಗದ ಪ್ರಮುಖರು ರಾಮೋಜಿಯವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.
ಪಾರ್ಥಿವ ಶರೀರಕ್ಕೆ ಹೆಗಲು ಕೊಟ್ಟ ನಾಯ್ಡು
ರಾಮೋಜಿ ಕುಟುಂಬದೊಂದಿಗೆ ಆಪ್ತ ನಂಟು ಹೊಂದಿರುವ ಆಂಧ್ರ ನಿಯೋಜಿತ ಸಿಎಂ, ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರು ರವಿವಾರ ರಾಮೋಜಿ ಅವರ ಪಾರ್ಥಿವ ಶರೀರಕ್ಕೆ ಹೆಗಲು ಕೊಟ್ಟು ಸಾಗಿದ್ದು ಕಂಡುಬಂತು. ರಾಮೋಜಿ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡ ಅವರು, ಅನಂತರ ಟ್ವೀಟ್ ಮಾಡಿ, “ಯುಗಪುರುಷ ರಾಮೋಜಿ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡೆ, ನನ್ನ ಹೃದಯ ಭಾರವಾಗಿದೆ. ಅವರು ನಮ್ಮೊಂದಿಗೆ ಇಲ್ಲದೇ ಇರಬಹುದು. ಆದರೆ ಅವರು ಸದಾ ನಮ್ಮೆಲ್ಲರಿಗೂ ಸ್ಫೂರ್ತಿಯಾಗಿರುತ್ತಾರೆ’ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
DNA Test: ಐಸ್ ಕ್ರೀಮ್ ನಲ್ಲಿ ಮಾನವನ ಬೆರಳು ಪತ್ತೆ ಪ್ರಕರಣ… DNA ವರದಿ ಹೇಳಿದ್ದೇನು?
Heavy Rain: ಮಳೆಗೆ ನಲುಗಿದ ದೆಹಲಿ… ಏರ್ಪೋರ್ಟ್ ಮೇಲ್ಛಾವಣಿ ಕುಸಿದು 6 ಮಂದಿಗೆ ಗಾಯ
45,000 ಜೀವಪ್ರಭೇದ ಅಳಿವಿನಂಚಿಗೆ: ಕಳೆದ ವರ್ಷಕ್ಕಿಂತ ಸಾವಿರ ಹೆಚ್ಚಳ
Bengaluru ಸನಿಹ ಏರ್ಪೋರ್ಟ್: ತಮಿಳುನಾಡು ಹೊಸ ಕ್ಯಾತೆ
India ಹಿಂದೂ ರಾಷ್ಟ್ರವಲ್ಲ ಇದಕ್ಕೆ ಫಲಿತಾಂಶ ಸಾಕ್ಷಿ:ಅಮರ್ತ್ಯ ಸೇನ್
MUST WATCH
ಹೊಸ ಸೇರ್ಪಡೆ
T20 World Cup; ವಿರಾಟ್ ಫಾರ್ಮ್ ಬಗ್ಗೆ ಚಿಂತೆಯಿಲ್ಲ…: ಕ್ಯಾಪ್ಟನ್ ಶರ್ಮಾ ಹೀಗಂದಿದ್ಯಾಕೆ?
Udupi: ಜೂನ್ 29ರಂದು “ದೊಡ್ಡ ಸಾಮಗರ ನಾಲ್ಮೊಗ” ಪುಸ್ತಕ ಬಿಡುಗಡೆ, ಯಕ್ಷಗಾನ ತಾಳಮದ್ದಳೆ
DNA Test: ಐಸ್ ಕ್ರೀಮ್ ನಲ್ಲಿ ಮಾನವನ ಬೆರಳು ಪತ್ತೆ ಪ್ರಕರಣ… DNA ವರದಿ ಹೇಳಿದ್ದೇನು?
Sandalwood: ಜುಲೈ ತಿಂಗಳ ಪೂರ್ತಿ ಹೊಸಬರ ಮೆರವಣಿಗೆ; 20+ ಸಿನಿಮಾ ರಿಲೀಸ್
Kannada Cinema; ತೆರೆಗೆ ಬಂತು ನವತಂಡದ ‘ಶತಭಿಷ ‘
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.