![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Nov 27, 2019, 1:58 PM IST
ರಾಜಸ್ಥಾನ್: ಮಗ ಪತ್ನಿಗೆ ತಲಾಖ್ ನೀಡಿದ ಬಳಿಕ ಮಾವ ಹಾಗೂ ಇನ್ನಿಬ್ಬರು ಜತೆ ಸೇರಿ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಬಿಹಾರದ ಅಲ್ವಾರ್ ನ ಭಿವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
2015ರಲ್ಲಿ ಈಕೆ ಭಿವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಚೌಪಂಕಿಯ ಯುವಕನ ಜತೆ ವಿವಾಹವಾಗಿದ್ದಳು. ಅಲ್ಲದೇ ಇಸ್ಲಾಂ ಸಂಪ್ರದಾಯದಂತೆ ನನ್ನ ತಂದೆ ವರದಕ್ಷಿಣೆ ಕೂಡಾ ನೀಡಿದ್ದರು ಎಂದು ಸಂತ್ರಸ್ತೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾಳೆ.
ಆದರೆ ಮತ್ತಷ್ಟು ವರದಕ್ಷಿಣೆ ತರುವಂತೆ ಗಂಡ, ಮಾವ ಹಾಗೂ ಭಾವ ಪ್ರತಿದಿನ ಕಿರುಕುಳ ನೀಡುತ್ತಿದ್ದರು ಎಂದು ದೂರಿದ್ದಾರೆ. ಕೋಣೆಯೊಳಗೆ ಕೂಡಿ ಹಾಕಿ ಥಳಿಸುತ್ತಿದ್ದರು ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾರೆ. ನವೆಂಬರ್ 22ರಂದು ಕೋಣೆಗೆ ಬಂದಿದ್ದ ಪತಿ, ತ್ರಿವಳಿ ತಲಾಖ್ ನೀಡಿರುವುದಾಗಿ ಸಂತ್ರಸ್ತೆಯ ತಂದೆ ತಿಳಿಸಿದ್ದಾರೆ.
ಅಂದು ಮಧ್ಯರಾತ್ರಿ 12ಗಂಟೆಗೆ ಮಾವ ಹಾಗೂ ಇಬ್ಬರು ವ್ಯಕ್ತಿಗಳು ಕೋಣೆಯೊಳಗೆ ಬಂದು, ನನ್ನ ಮಗ ನಿನಗೆ ವಿಚ್ಛೇದನ ನೀಡಿದ್ದಾನೆ. ಹೀಗಾಗಿ ನೀನು ನನ್ನ ಸೊಸೆಯಲ್ಲ ಎಂದು ತಿಳಿಸಿ, ಪಿಸ್ತೂಲ್ ಅನ್ನು ಹಣೆಗಿಟ್ಟು ಹೆದರಿಸಿ, ಮಾವ ಹಾಗೂ ಇನ್ನಿಬ್ಬರು ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದರು ಎಂದು ಸಂತ್ರಸ್ತೆ ತಂದೆ ದೂರಿದ್ದಾರೆ.
ಮರುದಿನ ಮಗಳು ತಂದೆಗೆ ರಾತ್ರಿ ನಡೆದ ಘಟನೆ ವಿವರಿಸಿದ್ದು, ನಂತರ ಪತಿ, ಮಾವ ಹಾಗೂ ಇನ್ನಿಬ್ಬರ ವಿರುದ್ಧ ಪ್ರಕರಣ ದಾಖಲಿಸಿರುವುದಾಗಿ ತಿಳಿಸಿದ್ದಾರೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.