ಗೋವಾದಲ್ಲಿ ಪೆನ್ನಿ ತರಬೇತಿ
Team Udayavani, Nov 4, 2018, 6:00 AM IST
ಪಣಜಿ: ಗೋವಾದ ಪಾರಂಪರಿಕ ಸ್ಪಿರಿಟ್ ಪೆನ್ನಿಯನ್ನು ಇನ್ನಷ್ಟು ಜನಪ್ರಿಯಗೊಳಿಸಲು, ಇದರ ತಯಾರಿಕೆಗಾಗಿ ಯುವಕರಿಗೆ ತರಬೇತಿ ನೀಡಲು ಕ್ಯಾಷೂ ಪೆನ್ನಿ ಬಾಟಲ್ಸ್ ಆ್ಯಂಡ್ ಡಿಸ್ಟಿಲ್ಲರ್ಸ್ ಅಸೋಸಿಯೇಷನ್ ನಿರ್ಧರಿಸಿದೆ. ವಿದೇಶಗಳಲ್ಲಿರುವಂತೆ ವೈನ್ಪರಿಣಿತರ ರೀತಿಯಲ್ಲಿಯೇ ಪೆನ್ನಿ ತಯಾ ರಿಕೆಯ ಪರಿಣಿತರನ್ನು ತಯಾರಿಸುವುದು ಇದರ ಉದ್ದೇಶ. ಸಾಮಾನ್ಯವಾಗಿ ವೈನ್ ಪರಿಣಿತರಿಗೆ ಎಲ್ಲ ರೀತಿಯ ವೈನ್ ಬಗ್ಗೆ ತಿಳಿವಳಿಕೆ ಇರುತ್ತದೆ ಹಾಗೂ ಅದರ ತಯಾರಿಕೆ, ರುಚಿ ಇತ್ಯಾದಿ ವಿಚಾರದಲ್ಲಿ ಅಪಾರ ಅನುಭವ ಇರುತ್ತದೆ. ಅಂಥವರನ್ನು “ಸೊಮೆಲಿಯರ್ಸ್’ ಎಂದು ಕರೆಯಲಾಗುತ್ತದೆ. ಈಗ ಯುವಕ ರಿಗೆ ಪೆನ್ನಿ ತಯಾರಿಸುವ ಪ್ರಕ್ರಿಯೆ ಕಲಿಸಿಕೊಟ್ಟ ಬಳಿಕ, ಅವರನ್ನು “ಪೆನ್ನಿಲಿಯರ್ಸ್’ ಎಂದು ಕರೆಯಲಾಗುತ್ತದೆ.
ಗೋವಾ ಸರಕಾರ ಈಗಾಗಲೇ ಪೆನ್ನಿಗೆ ಪಾರಂಪರಿಕ ಸ್ಥಾನಮಾನ ನೀಡಿದೆ. ಪೆನ್ನಿ ಯನ್ನು ಗೇರುಹಣ್ಣಿನಿಂದ ತಯಾರಿಸಲಾ ಗುತ್ತದೆ. ಇದಕ್ಕೆ ಪ್ರದೇಶ ಸೂಚಕ (ಜಿಐ) ಟ್ಯಾಗ್ ಕೂಡ ಇದ್ದು, ಗೋವಾ ಪ್ರವಾಸಿಗರಲ್ಲಿ ಸಾಕಷ್ಟು ಪ್ರಸಿದ್ಧಿಯನ್ನೂ ಪಡೆದಿದೆ. ಸದ್ಯ ಪೆನ್ನಿಯಲ್ಲಿ ಗೋವಾ ಮೂಲದ ಯುವಕ ಜಫ್ರಿ ಮ್ಯಾನ್ಯುವಲ್ ಪರಿಣತಿ ಹೊಂದಿದ್ದು, ಇವರು ಇತರ ಯುವಕರಿಗೆ ತರಬೇತಿ ನೀಡ ಲಿದ್ದಾರೆ. ಈ ಪೆನ್ನಿ ಪರಿಣಿತರು ಹೊಟೇಲ್ಗಳು, ಟ್ರಾವೆಲ್ ಮಾರ್ಟ್ಗಳು, ಖಾಸಗಿ ಪಾರ್ಟಿಗಳಿಗೆ ತೆರಳಿ ಅದನ್ನು ಹೇಗೆ ಸೇವಿಸಬೇಕು ಮತ್ತು ಇದರ ಪರಿಣಾಮ ಏನು ಎಂಬುದರ ಬಗ್ಗೆ ವಿವರಿಸ ಲಿದ್ದಾರೆ. ಅಷ್ಟೇ ಅಲ್ಲ, ಮಾಹಿತಿ ವೀಡಿಯೋ ವನ್ನೂ ಈ ಪರಿಣಿತರು ಹೊಂದಿರಲಿದ್ದು, ಇದನ್ನು ಜನರಿಗೆ ಪ್ರದರ್ಶಿಸಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್
Recommendation: ನ್ಯಾ. ಸಂಜೀವ್ ಖನ್ನಾ ಸುಪ್ರೀಂಕೋರ್ಟ್ ಮುಂದಿನ ಮುಖ್ಯ ನ್ಯಾಯಮೂರ್ತಿ
MUST WATCH
ಹೊಸ ಸೇರ್ಪಡೆ
Aranthodu: ಅರಮನೆಗಯ ಶಿಥಿಲಗೊಂಡ ತೂಗು ಸೇತುವೆಯಿಂದ ಕೆಳಗೆ ಬಿದ್ದು ಮೂವರಿಗೆ ಗಾಯ
Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.