ಆಟೋ ವಲಯ -ಬಿಸ್ಕೆಟ್‌ ಕಂಪನಿಗಳಿಗೆ ನಿರಾಸೆ?

ಜಿಎಸ್‌ಟಿ ರಿಯಾಯಿತಿ ಕಡಿತ ಅಸಂಭವ

Team Udayavani, Sep 18, 2019, 7:00 PM IST

GST

ಹೊಸದಿಲ್ಲಿ: ಶುಕ್ರವಾರ ದಿಲ್ಲಿಯಲ್ಲಿ ಸರಕು ಮತ್ತು ಸೇವಾ ತೆರಿಗೆ ಸಮಿತಿ (ಜಿಎಸ್‌ಟಿ ಕೌನ್ಸಿಲ್‌) ಸಭೆ ನಡೆಯಲಿದ್ದು, ಕೆಲವು ವಲಯಗಳಿಗೆ ಜಿಎಸ್‌ಟಿ ದರ ಕಡಿತವಾಗಬಹುದೆನ್ನುವ ನಿರೀಕ್ಷೆ ಕಮರಿದೆ.

ಆಟೋ ಮತ್ತು ಬಿಸ್ಕೆಟ್‌ ತಯಾರಿಕೆ ವಲಯ ಕಳೆದ ಕೆಲವು ತಿಂಗಳಿಂದ ತೀವ್ರವಾಗಿ ಕುಸಿದಿದ್ದು, ಈ ಹಿನ್ನೆಲೆಯಲ್ಲಿ ಜಿಎಸ್‌ಟಿ ರಿಯಾಯಿತಿ ಸಿಗಬಹುದು ಎನ್ನುವ ನಿರೀಕ್ಷೆ ಇತ್ತು.

ಜಿಎಸ್‌ಟಿ ತೆರಿಗೆ ದರ ಇಳಿಸುವ ಬಗ್ಗೆ ಫಿಟ್‌ಮೆಂಟ್‌ ಸಮಿತಿ ಶಿಫಾರಸು ಸಲ್ಲಿಸಬೇಕಿದ್ದು, ದರ ಇಳಿಸುವ ಬಗ್ಗೆ ಅದು ಯಾವುದೇ ಪ್ರಸ್ತಾವನೆ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ದರ ಕಡಿತ ಕ್ಷೀಣಗೊಂಡಿದೆ. ಸದ್ಯ ಆಟೋ ಮಾರುಕಟ್ಟೆ ಹಾಗೂ ಬ್ಯಾಂಕ್‌ಗಳ ವಲಯದಲ್ಲಿ ಆಗುತ್ತಿರುವ ಬದಲಾವಣೆಗಳ ಕಾರಣವನ್ನು ಮುಂದಿಟ್ಟುಕೊಂಡು ಫಿಟ್‌ಮೆಂಟ್‌ ಸಮಿತಿ ಯಾವುದೇ ಬದಲಾವಣೆಗೆ ಸೂಚಿಸಿಲ್ಲ.

ಸಮಿತಿ ವರದಿ ಹೇಳಿದ್ದೇನು?
ಆಟೋ ವಲಯದಲ್ಲಿ ಫಿಟ್‌ಮೆಂಟ್‌ ಸಮಿತಿ ಕೆಲವೊಂದು ಅಂಶಗಳನ್ನು ಮನಗಂಡಿದೆ. ಅದರ ಪ್ರಕಾರ ಈಗಿನ ಹಿನ್ನಡೆಗೆ ಬ್ಯಾಂಕ್‌ ಹೊರತಾದ ಸಾಲಗಾರರು ಕಾರಣ, ಅಲ್ಲದೇ ಆಟೋ ಕೈಗಾರಿಕೆಗಳ ಹಿನ್ನೆಡೆ, ಬೇಡಿಕೆ ಪೂರೈಕೆ ನಡುವಿನ ಅಸಮತೋಲನ, ಬಿಎಸ್‌4 ಮತ್ತು ಬಿಎಸ್‌6 ಎಂಜಿನ್‌ ವಾಹನಗಳ ಮಾರಾಟದಲ್ಲಿ ಆದ ಬದಲಾವಣೆ, ಹಣದ ಚಲಾವಣೆ ಕುಂಠಿತಗೊಂಡಿದ್ದರಿಂದಲೂ ಹೀಗಾಗಿದೆ ಎಂದು ಹೇಳಿದೆ. ಅಲ್ಲದೇ ಒಂದು ವೇಳೆ ಈಗ ಜಿಎಸ್‌ಟಿ ದರ ಕಡಿತ ಮಾಡಿದರೆ ಅದರ ಪರಿಣಾಮ ಬೇರೆಯ ವಲಯಗಳ ಮೇಲೂ ಆಗಬಹುದು. ಅಲ್ಲದೇ ಇತರ ವಲಯದವರೂ ದರ ಕಡಿತಕ್ಕೆ ಆಗ್ರಹಿಸಬಹುದು ಎಂದು ಹೇಳಿದೆ.

ಬಿಸ್ಕೆಟ್‌ಯೂ ಆಸೆ ನಿರಾಸೆ?
ಬಿಸ್ಕೆಟ್‌ ಸೇರಿದಂತೆ ಬೇಕರಿ ತಿನ್ನಿಸುಗಳು, ತರಕಾರಿಗಳು, ಮಿನರಲ್‌ ವಾಟರ್‌ ಬಾಟಲಿಗಳು, ಹಾಗೂ ಸಿದ್ಧ ಆಹಾರ ಪ್ಯಾಕೆಟ್‌ಗಳ ಮೇಲಿನ ದರದ ಮೇಲಿನ ಶುಲ್ಕವನ್ನು ಕಡಿತಗೊಳಿಸಲು ಪಾಲೇಜಿ, ಬ್ರಿಟಾನಿಯಾ ಕಂಪನಿಗಳು ಕೇಳಿಕೊಂಡಿದ್ದವು. ಆದರೆ ಅವರ ಆಸೆಯೂ ನಿರಾಸೆಗೊಂಡಿದ್ದು, ಪ್ಯಾನಲ್‌ ಸದಸ್ಯರು ಸದ್ಯ ದರದಲ್ಲಿ ಯಾವುದೇ ಕಡಿತ ಮಾಡುವುದಿಲ್ಲ ಎಂದಿದ್ದಾರೆ. ಬಿಸ್ಕೆಟ್‌ಗೆ ವಿವಿಧ ಸ್ಲಾéಬ್‌ಗಳಲ್ಲಿ ದರಗಳನ್ನು ವಿಧಿಸುವುದರಿಂದ ತೆರಿಗೆ ತಪ್ಪಿಸಲು ಕಾರಣವಾಗಬಹುದು ಎಂದು ಅದು ಅಭಿಪ್ರಾಯ ಪಟ್ಟಿದೆ. ಸದ್ಯ ಕಡಿಮೆ ದರದ ಬಿಸ್ಕೆಟ್‌ಗಳ ಮೇಲೆ ಶೇ.18ರಷ್ಟು (100 ಕೆ.ಜಿ.) ಜಿಎಸ್‌ಟಿ ಇದ್ದು ಇದನ್ನು ಶೇ.5ರಷ್ಟಕ್ಕೆ ಇಳಿಸಬೇಕೆನ್ನುವ ಬೇಡಿಕೆ ಕಂಪೆನಿಗಳದ್ದಾಗಿತ್ತು.

ಟಾಪ್ ನ್ಯೂಸ್

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-kashmir-msulim-IAS

Kashmir; ಮೊದಲ ಮುಸ್ಲಿಂ ಐಎಎಸ್‌ ಅಧಿಕಾರಿ ನಿಧನ

PM Modi: ವಿದೇಶದಲ್ಲಿ ನಮ್ಮ ದೇವತೆಗಳಿಗೆ ರಾಹುಲ್‌ ಅವಮಾನ

PM Modi: ವಿದೇಶದಲ್ಲಿ ನಮ್ಮ ದೇವತೆಗಳಿಗೆ ರಾಹುಲ್‌ ಅವಮಾನ

1-JSSS

TMC ರಾಜ್ಯಸಭಾ ಸದಸ್ಯತ್ವಕ್ಕೆ ಜವಾಹರ್‌ ಸರ್ಕಾರ್‌ ರಾಜೀನಾಮೆ

1-eeeeee

Train ಹಳಿಯ ಮೇಲೆ ರಾಡ್‌: ಹಳಿ ತಪ್ಪಿಸಲು ಮತ್ತೆ ಯತ್ನ, ತಪ್ಪಿದ ಅನಾಹುತ

firee

Bihar;ಜಮೀನು ವಿವಾದ: 21 ದಲಿತರ ಮನೆಗಳಿಗೆ ಬೆಂಕಿ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.