ಅಕ್ರಮವಾಗಿ ನೆಲೆಸಿದ್ದ ಐವರು ಬಾಂಗ್ಲಾದೇಶಿ ಪ್ರಜೆಗಳ ಬಂಧನ
Team Udayavani, Mar 21, 2023, 9:24 AM IST
ಲಕ್ನೋ: ಭಾರತದಲ್ಲಿ ಕಳೆದ ಕೆಲ ಸಮಯದಿಂದ ಅಕ್ರಮವಾಗಿ ನೆಲೆಸಿದ್ದ ಐವರು ಬಾಂಗ್ಲಾದೇಶದ ಪ್ರಜೆಗಳನ್ನು ಜಂಟಿ ಕಾರ್ಯಾಚರಣೆಯಲ್ಲಿ ಭಯೋತ್ಪಾದನಾ ನಿಗ್ರಹ ದಳ, ಯುಪಿ ಪೊಲೀಸರು ಆಗ್ರಾದ ತಾಜ್ಗಂಜ್ ಟೋರಾ ಚೌಕಿ ಪ್ರದೇಶದಲ್ಲಿ ಬಂಧಿಸಿದ್ದಾರೆ.
ಇಬ್ರಾಹಿಂ ಶೇಖ್, ಮೊಹಮ್ಮದ್ ಅಜೀಜುರ್ ಗಾಜಿ, ರಾಜು ಶೇಖ್, ಜನ್ನತ್ ಬೇಗಂ ಮತ್ತು ಮುಕ್ತಾ ಶೇಖ್ ಬಂಧಿತರು. ಕಳೆದ ಮೂರು ವರ್ಷಗಳಿಂದ ಇವರು ಭಾರತದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ನಕಲಿ ಆಧಾರ್ ಕಾರ್ಡ್ಗಳು, ಬಾಂಗ್ಲಾದೇಶದ ಪಾಸ್ಪೋರ್ಟ್ಗಳು, ರೈಲ್ವೇ ಟಿಕೆಟ್,ಮೊಬೈಲ್ ಫೋನ್ ಮತ್ತು ಬಾಂಗ್ಲಾದೇಶಿ ಐಡಿಗಳನ್ನು ಪೊಲೀಸರು ಬಂಧಿತರಿಂದ ವಶಕ್ಕೆ ಪಡೆದುಕೊಂಡಿದ್ದಾರೆ.
ಅಜೀಜುರ್ ಗಾಜಿ ಮತ್ತು ಆಕೆಯ ಪತ್ನಿ ಜನ್ನತ್ ಇತರ ವಲಸಿಗರನ್ನು ನೋಡಿಕೊಳ್ಳುತ್ತಿದ್ದರು. ದಂಪತಿಗಳು ಹಣವನ್ನು ಪಡೆದು ಅಕ್ರಮ ವಲಸಿಗರನ್ನು ಗಡಿಯೊಳಗೆ ತಲುಪಿಸುವ ದಂಧೆಯನ್ನು ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NDA CMs Meet: ರಾಷ್ಟ್ರದ ಅಭಿವೃದ್ಧಿಗೆ ಎನ್ಡಿಎ ಬದ್ಧ: ಪ್ರಧಾನಿ ಮೋದಿ
Termination of Employees: ಅಮೆರಿಕದಲ್ಲಿ ಉದ್ಯೋಗ ಕಡಿತಕ್ಕೆ ಮುಂದಾದ ಮೆಟಾ, ಇಂಟೆಲ್!
Mumbai: ಮತ್ತೆ 9 ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆ!
Uttarakanda: ಮದ್ರಸಾಗಳಲ್ಲಿ ಸಂಸ್ಕೃತ ಕಡ್ಡಾಯಕ್ಕೆ ಚಿಂತನೆ
Share Market: ಸೆನ್ಸೆಕ್ಸ್ ಸತತ ಪತನ: 2 ತಿಂಗಳ ಕನಿಷ್ಠ ಕುಸಿತ ದಾಖಲಿಸಿದ ಷೇರುಪೇಟೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.