ಭಾರತಕ್ಕೆ ಎಚ್ಚರಿಕೆ ಗಂಟೆ; ಕರಗುತ್ತಿರುವ ನೀರ್ಗಲ್ಲುಗಳಿಂದ ಅಪಾಯ ಖಚಿತ

ದಿಢೀರ್‌ ಪ್ರವಾಹಗಳ ಸಂಖ್ಯೆ ಹೆಚ್ಚಳ ಭೀತಿ

Team Udayavani, Aug 31, 2022, 7:30 AM IST

ಭಾರತಕ್ಕೆ ಎಚ್ಚರಿಕೆ ಗಂಟೆ; ಕರಗುತ್ತಿರುವ ನೀರ್ಗಲ್ಲುಗಳಿಂದ ಅಪಾಯ ಖಚಿತ

ನವದೆಹಲಿ/ಇಸ್ಲಾಮಾಬಾದ್‌: ಪಾಕಿಸ್ತಾನದಲ್ಲಿ ಹಿಂದೆಂದೂ ಕಂಡರಿಯದಂಥ ಪ್ರವಾಹವು ಸಾವಿರಕ್ಕೂ ಹೆಚ್ಚು ಮಂದಿಯನ್ನು ಬಲಿಪಡೆದಿರುವಂತೆಯೇ ಭಾರತಕ್ಕೂ ಇದು ಎಚ್ಚರಿಕೆಯ ಕರೆಗಂಟೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ!

ಪ್ರಸಕ್ತ ವರ್ಷದ ಮೇ ತಿಂಗಳ ಅವಧಿಯಲ್ಲಿ ಭಾರತ ಮತ್ತು ಪಾಕ್‌ ಎರಡೂ ದೇಶಗಳಲ್ಲೂ ಬಿಸಿಳಿನ ಝಳ ತೀವ್ರವಾಗಿತ್ತು. ಬಿಸಿಗಾಳಿಯ ಪರಿಣಾಮವೆಂಬಂತೆ, ನೀರ್ಗಲ್ಲುಗಳು ಹಿಂದೆಂದಿಗಿಂತಲೂ ವೇಗವಾಗಿ ಕರಗತೊಡಗಿವೆ. ಪಾಕಿಸ್ತಾನದಲ್ಲಿ “ಶತಮಾನದ ರಾಕ್ಷಸ ಮಳೆ’ ಹಾಗೂ ದಿಢೀರ್‌ ಪ್ರವಾಹ ಉಂಟಾಗಲು ಇದೇ ಕಾರಣ ಎನ್ನುತ್ತಾರೆ ತಜ್ಞರು.

ಪಾಕ್‌ನಲ್ಲಿ 7,253 ನೀರ್ಗಲ್ಲುಗಳಿದ್ದರೆ, ಭಾರತದಲ್ಲಿ ಅಂದಾಜು 9,575 ನೀರ್ಗಲ್ಲುಗಳಿವೆ. ಹೀಗಾಗಿ, ಹವಾಮಾನ ವೈಪರೀತ್ಯದ ಎಫೆಕ್ಟ್ ಎಂಬಂತೆ, ಭಾರತದಲ್ಲೂ ಮುಂಬರುವ ದಿನಗಳು, ವರ್ಷಗಳಲ್ಲಿ ವಿಪರೀತ ಮಳೆ, ದಿಢೀರ್‌ ಪ್ರವಾಹ, ಸಾವು-ನೋವುಗಳು ಹೆಚ್ಚಾಗುವ ಅಪಾಯ ಇದ್ದೇ ಇದೆ ಎಂದು ಎಚ್ಚರಿಸಿದ್ದಾರೆ ತಜ್ಞರು. ಅನಿರೀಕ್ಷಿತ ಪ್ರವಾಹವು ಈಗಾಗಲೇ ಪಾಕಿಸ್ತಾನವನ್ನು ನಲುಗಿಸಿದೆ. ಉತ್ತರದಿಂದ ದಕ್ಷಿಣದವರೆಗೂ ಜನ ಅತಂತ್ರರಾಗಿದ್ದು, ಎಲ್ಲ ನದಿಗಳೂ ಅಪಾಯದ ಮಟ್ಟ ಮೀರಿ ಹರಿಯಲಾರಂಭಿಸಿವೆ.

ಕಳೆದ ವರ್ಷ ಉತ್ತರಾಖಂಡದ ಚಮೋಲಿಯಲ್ಲಿ ಉಂಟಾದ ದಿಢೀರ್‌ ಪ್ರವಾಹವು 200ಕ್ಕೂ ಹೆಚ್ಚು ಮಂದಿಯನ್ನು ಬಲಿಪಡೆದುಕೊಂಡಿತ್ತು. ಇದು ಕೂಡ ಉಂಟಾಗಿದ್ದು ನೀರ್ಗಲ್ಲುಗಳು ಕರಗಿದ್ದರಿಂದ. ಹೀಗಾಗಿ, ಇಂತಹ ದುರಂತಗಳು ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಮರುಕಳಿಸಬಹುದು ಎಂಬ ಎಚ್ಚರಿಕೆಯನ್ನೂ ತಜ್ಞರು ನೀಡಿದ್ದಾರೆ.
ಇದೇ ವೇಳೆ, ನೀರ್ಗಲ್ಲುಗಳ ಕರಗುವಿಕೆಯು ಪಾಕಿಸ್ತಾನದಷ್ಟು ಅಪಾಯವನ್ನು ಭಾರತಕ್ಕೆ ತಂದೊಡ್ಡಲಿಕ್ಕಿಲ್ಲ ಎಂದು ದೈವೇಚ ಸೆಂಟರ್‌ ಫಾರ್‌ ಕ್ಲೈಮೇಟ್‌ ಚೇಂಜ್‌ನ ನೀರ್ಗಲ್ಲು ತಜ್ಞ ಅನಿಲ್‌ ಕುಲಕರ್ಣಿ. ಸಿಂಧೂ ಜಲಾನಯನ ಪ್ರದೇಶದಲ್ಲಿ ನೀರ್ಗಲ್ಲುಗಳು ತುಂಬಿರುವ ನೀರು 2103 ಕ್ಯೂಬಿಕ್‌ ಕಿಲೋಮೀಟರ್‌ನಷ್ಟಿದೆ. ಈ ಪೈಕಿ ಶೇ.95ರಷ್ಟು ಸಂಗ್ರಹವಾಗಿರುವುದು ಪಶ್ಚಿಮ ಜಲಾನಯನ ಪ್ರದೇಶದಲ್ಲಿ. ಇದು ಪಾಕ್‌ ವ್ಯಾಪ್ತಿಗೆ ಬರುವ ಕಾರಣ ಪ್ರವಾಹ ಭೀತಿ ಭಾರತಕ್ಕಿಂತಲೂ ಪಾಕಿಸ್ತಾನಕ್ಕೇ ಹೆಚ್ಚು ಎನ್ನುವುದು ಕುಲಕರ್ಣಿ ಅವರ ವಾದ.

ಗ್ರೀನ್‌ಲ್ಯಾಂಡ್ ಆತಂಕ:
ಇದೇ ವೇಳೆ, ಗ್ರೀನ್‌ಲ್ಯಾಂಡ್ ಐಸ್‌ಶೀಟ್‌ ಎಂದು ಕರೆಸಿಕೊಳ್ಳುವ ಝೋಂಬಿ ಐಸ್‌ ಕೂಡ ನಿಧಾನವಾಗಿ ಕರಗಲಾರಂಭಿಸಿದೆ. ಇದು ಜಾಗತಿಕ ಸಮುದ್ರ ಮಟ್ಟವನ್ನು ಕನಿಷ್ಠ 27 ಸೆಂಟಿ ಮೀಟರ್‌ನಷ್ಟು ಅಥವಾ 10.6 ಇಂಚುಗಳಷ್ಟು ಹೆಚ್ಚಿಸಲಿದೆ ಎಂದು ಜಿಯಾಲಾಜಿಕಲ್‌ ಸರ್ವೇ ಆಫ್ ಡೆನ್ಮಾರ್ಕ್‌ನ ಸಂಶೋಧಕರು ಕಂಡುಕೊಂಡಿದ್ದಾರೆ. ಒಂದು ವೇಳೆ ತತ್‌ಕ್ಷಣವೇ ಇಡೀ ಜಗತ್ತು ಪಳೆಯುಳಿಕೆ ಇಂಧನದ ಸುಡುವಿಕೆಯನ್ನು ಸ್ಥಗಿತಗೊಳಿಸಿದರೂ ಗ್ರೀನ್‌ಲ್ಯಾಂಡ್ ಐಸ್‌ ಶೀಟ್‌ 110 ಕ್ವಾಡ್ರಿಲಿಯನ್‌ ಟನ್‌ಗಳಷ್ಟು ಮಂಜುಗಡ್ಡೆ ಕಳೆದುಕೊಳ್ಳಲಿದ್ದು, ಸಮುದ್ರ ಮಟ್ಟವು 27 ಸೆ.ಮೀ.ನಷ್ಟು ಏರಿಕೆಯಾಗಲಿದೆ ಎಂದೂ ಅವರು ಹೇಳಿದ್ದಾರೆ.

ಪಾಕ್‌ಗೆ ಮತ್ತಷ್ಟು ಸಂಕಷ್ಟ
ಪಾಕಿಸ್ತಾನದಲ್ಲಿ ಬುಧವಾರ ಪ್ರವಾಹ ಪರಿಸ್ಥಿತಿ ಮತ್ತಷ್ಟು ಹೆಚ್ಚಲಿದೆ ಎಂದು ಅಲ್ಲಿನ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಈಗಾಗಲೇ 1,200ರಷ್ಟು ಮಂದಿ ಮೃತಪಟ್ಟಿದ್ದು, 33 ದಶಲಕ್ಷಕ್ಕೂ ಹೆಚ್ಚು ಜನರು ನಿರ್ವಸಿತರಾಗಿದ್ದಾರೆ. ಆಹಾರ ವಸ್ತುಗಳ ದರಗಳು ಗಗನಕ್ಕೇರಿವೆ. ಈಗ ಮತ್ತೆ ಪ್ರವಾಹ ಎಚ್ಚರಿಕೆ ನೀಡಿರುವುದು ಜನರನ್ನು ಆತಂಕಕ್ಕೆ ನೂಕಿದೆ. ಈ ನಡುವೆ, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೂ ಪಾಕ್‌ ಪ್ರವಾಹದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಆದಷ್ಟು ಬೇಗ ಅಲ್ಲಿನ ಪರಿಸ್ಥಿತಿ ಸಹಜತೆಗೆ ಮರಳಲಿ ಎಂದು ಆಶಿಸಿದ್ದಾರೆ.

ಕೇರಳದಲ್ಲಿ ಧಾರಾಕಾರ ಮಳೆ
ಮಂಗಳವಾರವೂ ಕೇರಳದಲ್ಲಿ ಧಾರಾಕಾರ ಮಳೆ ಮುಂದುವರಿದಿದೆ. ಇನ್ನೂ 2 ದಿನಗಳ ಕಾಲ ಇದೇ ಪರಿಸ್ಥಿತಿ ಮುಂದುವರಿಯಲಿದ್ದು, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಕೊಚ್ಚಿ, ಅಳಪ್ಪುಳ, ಪಟ್ಟಣಂತಿಟ್ಟ, ಎರ್ನಾಕುಳಂ, ಕೊಟ್ಟಾಯಂಗಳಲ್ಲಿ ಹಲವು ಗ್ರಾಮಗಳು ಜಲಾವೃತಗೊಂಡಿವೆ. ಭಾರೀ ಮಳೆಯಿಂದಾಗಿ ಓಣಂ ಹಬ್ಬದ ಸಂಭ್ರಮವೂ ಗೌಣವಾಗಿದೆ.

ಪಾಕಿಸ್ತಾನದಲ್ಲಿರುವ ನೀರ್ಗಲ್ಲುಗಳು- 7,253
ಭಾರತದಲ್ಲಿರುವ ಅಂದಾಜು ನೀರ್ಗಲ್ಲುಗಳು- 9,575

ಟಾಪ್ ನ್ಯೂಸ್

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1sadgu

Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!

Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.