ರೈಲ್ವೆ ನೌಕರರಿಗೆ ವಿದೇಶ ಭಾಗ್ಯ
Team Udayavani, Jan 31, 2018, 6:15 AM IST
ನವದೆಹಲಿ: ಭಾರತೀಯ ರೈಲ್ವೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ, ದಕ್ಷಿಣ ಕೇಂದ್ರ ವಿಭಾಗೀಯ ರೈಲ್ವೆಯ (ಎಸ್ಸಿಆರ್) ಗ್ರೂಪ್ ಸಿ ಮತ್ತು ಡಿ ಉದ್ಯೋಗಿಗಳಿಗೆ ಇಲಾಖೆ ವತಿಯಿಂದಲೇ ವಿದೇಶ ಪ್ರವಾಸ ಸೌಕರ್ಯ ಕಲ್ಪಿಸಲಾಗಿದೆ. ಗ್ಯಾಂಗ್ಮನ್, ಟ್ರಾಕ್ಮನ್ ಹಾಗೂ ಇತರ ನಾನ್ ಗೆಜೆಟೆಡ್ ಅಧಿಕಾರಿಗಳುಳ್ಳ 100 ಉದ್ಯೋಗಿಗಳ ತಂಡ ಜ. 28ರಂದು ಆರು ದಿನಗಳ ಕಾಲಾವಧಿಯ ಪ್ರವಾಸಕ್ಕೆಂದು ಸಿಂಗಾಪುರ, ಮಲೇಷ್ಯಾಕ್ಕೆ ತೆರಳಿದೆ.
ಪ್ರತಿ ಉದ್ಯೋಗಿಯ ಪ್ರವಾಸದ ಖರ್ಚಿನಲ್ಲಿ ಶೇ. 25ರಷ್ಟನ್ನು ಉದ್ಯೋಗಿಗಳೇ ಭರಿಸಲಿದ್ದು, ಖರ್ಚಿನ ಶೇ.75ರಷ್ಟು ಭಾಗವನ್ನು ಇಲಾಖೆ ಭರಿಸಲಿದೆ ಎಂದು ಸ್ಟಾಫ್ ಬೆನಿಫಿಟ್ ಫಂಡ್ನ (ಎಸ್ಬಿಎಫ್) ಸಾರ್ವಜನಿಕ ಸಂಪರ್ಕಾಧಿಕಾರಿ ಎಂ. ಉಮಾಶಂಕರ್ ಕುಮಾರ್ ತಿಳಿಸಿದ್ದಾರೆ.
ಪ್ರವಾಸಿಗರು, ಸಿಂಗಾಪುರ ಪ್ರವಾಸದಲ್ಲಿ ಪ್ರಮುಖವಾಗಿ ಯೂನಿವರ್ಸಲ್ ಸ್ಟುಡಿ ಯೋಸ್, ಸೆಂಟೋಸಾ ಆ್ಯಂಡ್ ನೈಟ್ ಸಫಾರಿಯಲ್ಲಿ ಭಾಗಿಯಾಗಲಿದ್ದು, ಮಲೇಷ್ಯಾ ಪ್ರವಾಸದ ವೇಳೆ, ಪ್ರಮುಖವಾಗಿ ಕೌಲಾಲಂ ಪುರ ನಗರ ಪ್ರದಕ್ಷಿಣೆ, ಪೆಟ್ರೋನಾಸ್ ಟವರ್ಸ್, ಬಾಟು ಕೇವ್ಸ್ ಹಾಗೂ ಜೆಂಟಿಂಗ್ ಹೈಲ್ಯಾಂಡ್ಸ್ ನೋಡಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chennai: ಗ್ರಾಹಕ ನಿಂದಿಸಿದ್ದಕ್ಕೆ ಖಿನ್ನತೆಗೆ ಒಳಗಾಗಿ ಫುಡ್ ಡೆಲಿವರಿ ಯುವಕ ಆತ್ಮಹತ್ಯೆ
Haryana: ಮಹಿಳೆಯರಿಗೆ ವಿತ್ತ ನೆರವು, ಎಂಎಸ್ ಪಿ ಭರವಸೆ; ಬಿಜೆಪಿ ಪ್ರಣಾಳಿಕೆ ಬಿಡುಗಡೆ
Chennai: ರಸ್ತೆ ಬದಿ ಪತ್ತೆಯಾದ ಸೂಟ್ಕೇಸ್ನಲ್ಲಿತ್ತು ಮಹಿಳೆಯ ಕತ್ತರಿಸಿದ ದೇಹದ ಭಾಗಗಳು…
Jammu Kashmir: ಯುವಕರ ಕೈಯಲ್ಲೀಗ ಕಲ್ಲುಗಳಿಲ್ಲ, ಪೆನ್ನು-ಪುಸ್ತಕಗಳಿವೆ: ಪ್ರಧಾನಿ ಮೋದಿ
West Bengal: ಪ್ರವಾಹ ಪರಿಸ್ಥಿತಿ ಅವಲೋಕಿಸಲು ಹೋದ ಸಂಸದರು, ಶಾಸಕರಿದ್ದ ದೋಣಿ ಪಲ್ಟಿ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.