![Lalu](https://www.udayavani.com/wp-content/uploads/2025/02/Lalu-2-415x282.jpg)
![Lalu](https://www.udayavani.com/wp-content/uploads/2025/02/Lalu-2-415x282.jpg)
Team Udayavani, Jun 20, 2023, 6:51 PM IST
ಪಣಜಿ: ಗೋವಾದ ಕಲಂಗುಟ್ನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ತೆರವು ವಿಚಾರ ಇದೀಗ ಕಲಂಗುಟ್ ಪಂಚಾಯತ್ ಹತ್ತು ದಿನಗಳಲ್ಲಿ ಪ್ರತಿಮೆಯನ್ನು ತೆಗೆಯುವಂತೆ ಸಂಬಂಧಪಟ್ಟ ಸಂಸ್ಥೆಗೆ ಸೂಚಿಸಿತ್ತು. ಮಂಗಳವಾರ ಬೆಳಗ್ಗೆಯಿಂದಲೇ ಶಿವ ಪ್ರೇಮಿಗಳು ಪಂಚಾಯ್ತಿಯ ಹೊರಗೆ ಧರಣಿ ನಡೆಸಿದರು. ಈ ಬೃಹತ್ ಪ್ರತಿಭಟನೆಯ ನಂತರ ಪ್ರತಿಮೆ ತೆರವುಗೊಳಿಸುವ ಆದೇಶವನ್ನು ಕಲಂಗುಟ್ ಪಂಚಾಯತ್ ಹಿಂಪಡೆದಿದೆ.
ಕಲಂಗುಟ್ನ ಪಂಚಾಯತ ಅಧ್ಯಕ್ಷರು ಪ್ರತಿಮೆ ಬಳಿ ಬಂದು ಕ್ಷಮೆಯಾಚಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಇದೇ ವೇಳೆ ಆಕ್ರೋಶಗೊಂಡ ಪ್ರತಿಭಟನಾಕಾರರು ಪಂಚಾಯಿತಿಗೆ ನುಗ್ಗಲು ಯತ್ನಿಸಿದರು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು.ಆದರೆ ಕಲಂಗುಟ್ ಪಂಚಾಯತ್ ಪ್ರತಿಮೆಯನ್ನು ತೆಗೆಯುವ ಆದೇಶವನ್ನು ಹಿಂಪಡೆದಿದೆ. ಆದರೆ, ಪಂಚಾಯತ ಅಧ್ಯಕ್ಷರು ಕ್ಷಮೆಯಾಚಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಘಟನಾ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ವಿವಾದವನ್ನು ಚರ್ಚೆಯ ಮೂಲಕ ಬಗೆಹರಿಸಬೇಕು ಎಂದು ಕಲಂಗುಟ್ ಶಾಸಕ ಮೈಕಲ್ ಲೋಬೋ ಹೇಳಿದ್ದಾರೆ. ಎಲ್ಲರೂ ಶಾಂತಿ ಕಾಪಾಡಿ, ಕಾನೂನನ್ನು ಕೈಗೆತ್ತಿಕೊಳ್ಳಬೇಡಿ ಎಂದು ಲೋಬೋ ಮನವಿ ಮಾಡಿದ್ದಾರೆ.
ಕೊನೆಗೂ ಕ್ಷಮೆಯಾಚಿಸಿದ ಪಂಚಾಯತ್ ಅಧ್ಯಕ್ಷರು…
ಕಲಂಗುಟ್ನಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಹತ್ತು ದಿನಗಳೊಳಗೆ ತೆರವು ಮಾಡುವಂತೆ ಕಲಂಗುಟ್ ಪಂಚಾಯತ್ ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ಸಾವಿರಾರು ಶಿವ ಪ್ರೇಮಿಗಳು ಮಂಗಳವಾರ ಕಲಂಗುಟ್ ಪಂಚಾಯತ್ ಎದುರು ಪ್ರತಿಭಟನೆ ನಡೆಸಿದರು. ಪಂ.ಅಧ್ಯಕ್ಷರು ಬಹಿರಂಗ ಕ್ಷಮೆಯಾಚಿಸದ ಹೊರತು ಹಿಂದೆ ಸರಿಯುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಕಲಂಗುಟ್ ಪಂ.ಅಧ್ಯಕ್ಷ ಜೋಸೆಫ್ ಸಿಕ್ವೇರಾ ಅವರು ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ. ಶಿವಪ್ರೇಮಿಗಳ ಆಕ್ರಮಣಕಾರಿ ಪಾತ್ರದಿಂದಾಗಿ ಪ್ರತಿಮೆ ತೆರವಿಗೆ ನೀಡಿದ್ದ ನೋಟಿಸ್ ಅನ್ನು ಪಂಚಾಯತ್ ಅಧ್ಯಕ್ಷ ಜೋಸೆಫ್ ಸಿಕ್ವೇರಾ ಹಿಂಪಡೆದಿದ್ದಾರೆ.
ಇದನ್ನೂ ಓದಿ: ಮಲೆನಾಡಿನಲ್ಲೇ ಮಳೆಯ ಸಮಸ್ಯೆ… ನೀರನ್ನು ಮಿತವಾಗಿ ಬಳಸಿ: ಡಾ.ವೀರೇಂದ್ರ ಹೆಗಡೆ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
You seem to have an Ad Blocker on.
To continue reading, please turn it off or whitelist Udayavani.