ಆಡಿನ ಮಾಲೀಕತ್ವಕ್ಕಾಗಿ ಇಬ್ಬರ ನಡುವೆ ಜಗಳ… ಹಬ್ಬಕ್ಕೆ ಬಲಿಯಾಗಬೇಕಿದ್ದ ಆಡು ಬಚಾವ್
ಇಬ್ಬರ ಜಗಳ ಆಡಿಗೆ ಲಾಭ!
Team Udayavani, Jul 1, 2023, 8:35 PM IST
ಭೋಪಾಲ್: ಇಬ್ಬರ ಜಗಳದಿಂದ ಮೂರನೇಯವನಿಗೆ ಲಾಭ ಎನ್ನುವಂತೆ ಮಧ್ಯಪ್ರದೇಶದಲ್ಲಿ ಮಾಲೀಕರಿಬ್ಬರ ಜಗಳದಲ್ಲಿ ಹಬ್ಬಕ್ಕೆ ಬಲಿಯಾಗಬೇಕಿದ್ದ ಆಡೊಂದು, ಲಾಭ ಪಡೆದು ಬಚಾವ್ ಆಗಿ, ಜೀವ ಉಳಿಸಿಕೊಂಡಿರುವ ಘಟನೆ ವರದಿಯಾಗಿದೆ.
ರೇವಾ ಜಿಲ್ಲೆಯ ನಿವಾಸಿಗಳಾದ ಸಂಜಯ್ ಖಾನ್ ಹಾಗೂ ಶಾರುಖ್ ಖಾನ್ ಎಂಬ ಇಬ್ಬರು ಒಂದೇ ಆಡಿಗಾಗಿ ಜಗಳವಾಡಿದ್ದಾರೆ. ಪೊಲೀಸರ ಪ್ರಕಾರ, ಸಂಜಯ್ ಎಂಬವರು ಆಡು ಒಂದನ್ನು ಖರೀದಿಸಿದ್ದು, 6 ತಿಂಗಳ ಹಿಂದೆ ಅದು ಕಳೆದುಹೋಗಿದೆ. ಅದಕ್ಕಾಗಿ ಹುಡುಕಾಟ ನಡೆಸುತ್ತಿದ್ದರು ಅದೇ ಆಡು ಈಗ ಶಾರುಖ್ ಅವರ ಬಳಿ ಇದೆ ಎನ್ನುತ್ತಿದ್ದಾರೆ. ಅದೇ ರೀತಿ, ಶಾರುಖ್ ಅವರು ಕೆಲ ದಿನಗಳ ಹಿಂದಷ್ಟೇ ಈ ಆಡನ್ನು 15,000 ರೂ.ಗಳನ್ನು ಕೊಟ್ಟು ಖರೀದಿಸಿರುವುದಾಗಿ ಹೇಳಿಕೊಂಡಿದ್ದಾರೆ. ಹೀಗಾಗಿ ಈ ಆಡಿನ ಮಾಲೀಕತ್ವಕ್ಕೆ ಇಬ್ಬರೂ ಜಗಳವಾಡಿದ್ದಾರೆ.
ಬಕ್ರೀದ್ ಹಬ್ಬದ ದಿನ ಸಂಜೆಯೇ ವಿಷಯ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಅದಕ್ಕಾಗಿ ಸ್ಥಳೀಯ ಕಾರ್ಪೊರೇಟರ್ ಮಧ್ಯಸ್ಥಿಕೆಯನ್ನೂ ವಹಿಸಿದ್ದರು. ಅಂತಿಮವಾಗಿ ಸಂಜಯ್ ಬಳಿಯಲ್ಲಿ ಆಡು ಇರಬೇಕು ಎಂದು ಪೊಲೀಸರು ತಾಕೀತು ಮಾಡಿದ್ದಾರೆ. ಸದ್ಯ ಆಡು ತನಿಖೆಯ ಭಾಗವಾಗಿದ್ದು, ಅದಕ್ಕೆ ಹಾನಿ ಮಾಡಬಾರದು ಎಂದು ಮುಚ್ಚಳಿಕೆ ಬರೆಯಿಸಿಕೊಳ್ಳಲಾಗಿದೆ.
ಇದನ್ನೂ ಓದಿ: ಅಧಿಕಾರಿಗಳ ಕಾಲಹರಣ: ಹಂಪಿ ಮಾಸ್ಟರ್ಪ್ಲಾನ್ ವಿಳಂಬ, ಫಾರ್ಮ್ ಸ್ಟೇ ಪರವಾನಿಗೆಗೂ ತಡೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ನಟ ಸಲ್ಮಾನ್ ಖಾನ್ಗೆ ಬೆದರಿಕೆ ಹಾಕಿ 5ಕೋಟಿಗೆ ಬೇಡಿಕೆ ಇಟ್ಟಿದ್ದ ಆರೋಪಿ ಅರೆಸ್ಟ್
Female CFO: ಭಾರತದ ಪಾಮ್ ಕೌರ್ಗೆ ಎಚ್ಎಸ್ಬಿಸಿ ಸಿಎಫ್ಒ ಹುದ್ದೆ
Post Office Fined: 50 ಪೈಸೆ ಹಿಂದಿರುಗಿಸದ ಅಂಚೆ ಕಚೇರಿಗೆ 15,000 ದಂಡ!
Cyclone Dana: 10ಲಕ್ಷ ಜನ ಸ್ಥಳಾಂತರ… ಅಪಾಯದ ಭೀತಿಯಲ್ಲಿ ಒಡಿಶಾದ 3,000 ಗ್ರಾಮಗಳು
Threats To Airlines: ಬಾಂಬ್ ಬೆದರಿಕೆ… ಟ್ವಿಟರ್ಗೆ ಕೇಂದ್ರ ಸರಕಾರ ತರಾಟೆ !
MUST WATCH
ಹೊಸ ಸೇರ್ಪಡೆ
Arrested: ನಟ ಸಲ್ಮಾನ್ ಖಾನ್ಗೆ ಬೆದರಿಕೆ ಹಾಕಿ 5ಕೋಟಿಗೆ ಬೇಡಿಕೆ ಇಟ್ಟಿದ್ದ ಆರೋಪಿ ಅರೆಸ್ಟ್
BBK11: ಬಿಗ್ ಬಾಸ್ ಮನೆಗೆ ಖ್ಯಾತ ಆ್ಯಂಕರ್ ರಾಧಾ ಹಿರೇಗೌಡರ್ ಎಂಟ್ರಿ
Udupi; ಜಗತ್ತು ಯೋಗಮಯವಾಗುವ ಆಕಾಂಕ್ಷೆ: ಪ್ರಾಚ್ಯವಿದ್ಯಾ ಸಮ್ಮೇಳನದಲ್ಲಿ ಬಾಬಾ ರಾಮ್ದೇವ್
Female CFO: ಭಾರತದ ಪಾಮ್ ಕೌರ್ಗೆ ಎಚ್ಎಸ್ಬಿಸಿ ಸಿಎಫ್ಒ ಹುದ್ದೆ
Mudhol: ಅಕ್ರಮ ಮರಳು ಅಡ್ಡೆಗಳ ಮೇಲೆ ಅಧಿಕಾರಿಗಳ ದಾಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.