![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
Team Udayavani, Jul 1, 2023, 8:35 PM IST
ಭೋಪಾಲ್: ಇಬ್ಬರ ಜಗಳದಿಂದ ಮೂರನೇಯವನಿಗೆ ಲಾಭ ಎನ್ನುವಂತೆ ಮಧ್ಯಪ್ರದೇಶದಲ್ಲಿ ಮಾಲೀಕರಿಬ್ಬರ ಜಗಳದಲ್ಲಿ ಹಬ್ಬಕ್ಕೆ ಬಲಿಯಾಗಬೇಕಿದ್ದ ಆಡೊಂದು, ಲಾಭ ಪಡೆದು ಬಚಾವ್ ಆಗಿ, ಜೀವ ಉಳಿಸಿಕೊಂಡಿರುವ ಘಟನೆ ವರದಿಯಾಗಿದೆ.
ರೇವಾ ಜಿಲ್ಲೆಯ ನಿವಾಸಿಗಳಾದ ಸಂಜಯ್ ಖಾನ್ ಹಾಗೂ ಶಾರುಖ್ ಖಾನ್ ಎಂಬ ಇಬ್ಬರು ಒಂದೇ ಆಡಿಗಾಗಿ ಜಗಳವಾಡಿದ್ದಾರೆ. ಪೊಲೀಸರ ಪ್ರಕಾರ, ಸಂಜಯ್ ಎಂಬವರು ಆಡು ಒಂದನ್ನು ಖರೀದಿಸಿದ್ದು, 6 ತಿಂಗಳ ಹಿಂದೆ ಅದು ಕಳೆದುಹೋಗಿದೆ. ಅದಕ್ಕಾಗಿ ಹುಡುಕಾಟ ನಡೆಸುತ್ತಿದ್ದರು ಅದೇ ಆಡು ಈಗ ಶಾರುಖ್ ಅವರ ಬಳಿ ಇದೆ ಎನ್ನುತ್ತಿದ್ದಾರೆ. ಅದೇ ರೀತಿ, ಶಾರುಖ್ ಅವರು ಕೆಲ ದಿನಗಳ ಹಿಂದಷ್ಟೇ ಈ ಆಡನ್ನು 15,000 ರೂ.ಗಳನ್ನು ಕೊಟ್ಟು ಖರೀದಿಸಿರುವುದಾಗಿ ಹೇಳಿಕೊಂಡಿದ್ದಾರೆ. ಹೀಗಾಗಿ ಈ ಆಡಿನ ಮಾಲೀಕತ್ವಕ್ಕೆ ಇಬ್ಬರೂ ಜಗಳವಾಡಿದ್ದಾರೆ.
ಬಕ್ರೀದ್ ಹಬ್ಬದ ದಿನ ಸಂಜೆಯೇ ವಿಷಯ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಅದಕ್ಕಾಗಿ ಸ್ಥಳೀಯ ಕಾರ್ಪೊರೇಟರ್ ಮಧ್ಯಸ್ಥಿಕೆಯನ್ನೂ ವಹಿಸಿದ್ದರು. ಅಂತಿಮವಾಗಿ ಸಂಜಯ್ ಬಳಿಯಲ್ಲಿ ಆಡು ಇರಬೇಕು ಎಂದು ಪೊಲೀಸರು ತಾಕೀತು ಮಾಡಿದ್ದಾರೆ. ಸದ್ಯ ಆಡು ತನಿಖೆಯ ಭಾಗವಾಗಿದ್ದು, ಅದಕ್ಕೆ ಹಾನಿ ಮಾಡಬಾರದು ಎಂದು ಮುಚ್ಚಳಿಕೆ ಬರೆಯಿಸಿಕೊಳ್ಳಲಾಗಿದೆ.
ಇದನ್ನೂ ಓದಿ: ಅಧಿಕಾರಿಗಳ ಕಾಲಹರಣ: ಹಂಪಿ ಮಾಸ್ಟರ್ಪ್ಲಾನ್ ವಿಳಂಬ, ಫಾರ್ಮ್ ಸ್ಟೇ ಪರವಾನಿಗೆಗೂ ತಡೆ
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
Stampede: ಕುಂಭಕ್ಕೆ ಹೊರಟವರು ಕಾಲ್ತುಳಿತಕ್ಕೆ ಬಲಿ! ದೆಹಲಿ ರೈಲುನಿಲ್ದಾಣದಲ್ಲಿ ಆಗಿದ್ದೇನು?
You seem to have an Ad Blocker on.
To continue reading, please turn it off or whitelist Udayavani.