![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Nov 7, 2019, 6:15 AM IST
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ವಿಶ್ವವಿದ್ಯಾಲಯಗಳ ಧನ ಸಹಾಯ ಆಯೋಗ (ಯುಜಿಸಿ) ವತಿಯಿಂದ ನಡೆಸಲಾಗುವ ಎನ್ಇಟಿ ಪರೀಕ್ಷೆ ಕುರಿತಾಗಿ, ತಾನು ಹೊರಡಿಸಿದ್ದ ಸುತ್ತೋಲೆಗೆ ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ (ಎನ್ಟಿಎ) ತಿದ್ದುಪಡಿ ತಂದಿದೆ.
ಪ್ರಸಕ್ತ ವರ್ಷದ ನೆಟ್ ಪರೀಕ್ಷೆಗಳಿಗಾಗಿ ಹೊರಡಿಸಲಾಗಿದ್ದ ಸುತ್ತೋಲೆಯಲ್ಲಿ, 2002ರ ಜೂನ್ ಡಿಸೆಂಬರ್ಗಿಂತಲೂ ಮುನ್ನ ಸೆಟ್ (ರಾಜ್ಯಮಟ್ಟದಲ್ಲಿ ನಡೆಯುವ ಉಪನ್ಯಾ ಸಕರ ಅರ್ಹತಾ ಪರೀಕ್ಷೆ) ಪರೀಕ್ಷೆ ತೇರ್ಗಡೆ ಯಾದವರಿಗೆ ನೆಟ್ ಪರೀಕ್ಷೆ ಯಿಂದ ವಿನಾಯ್ತಿ ನೀಡಲಾಗಿತ್ತು. ಅವರು ಭಾರತದ ಯಾವುದೇ ರಾಜ್ಯದಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಜಿ ಹಾಕಬಹುದಾಗಿದೆ ಎಂದು ಸೂಚಿಸಿತ್ತು. ಅದನ್ನು ತಿದ್ದುಪಡಿಗೊಳಿಸಿರುವ ಎನ್ಟಿಎ, ಮೇಲಿನ ನಿಯಮ ಗಳನ್ನು 2002ರ ಜೂ. 1ಕ್ಕೂ ಮೊದಲು ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯಿಸುತ್ತವೆ. 2002ರ ಜೂ.1 ಅನಂತರ ಸೆಟ್ ಪರೀಕ್ಷೆ ಪಾಸಾದವರು ತಮ್ಮ ರಾಜ್ಯದಲ್ಲಿ ಮಾತ್ರ ಉಪನ್ಯಾಸಕರ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ ಎಂದು ಹೇಳಿದೆ. ಅಂದರೆ, ಈಗ 2002ರ ಜೂ. 1ಕ್ಕೂ ಮೊದಲು ಸೆಟ್ ತೇರ್ಗಡೆಯಾದವರು ಮಾತ್ರ ದೇಶಾದ್ಯಂತ ಉಪನ್ಯಾಸಕ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರು.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.