![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Apr 8, 2022, 11:53 AM IST
ಲಕ್ನೋ: ಇತ್ತೀಚೆಗೆ ಉತ್ತರ ಪ್ರದೇಶದ ಗೋರಖನಾಥ್ ದೇವಸ್ಥಾನದ ಮೇಲೆ ದಾಳಿ ನಡೆಸಿದ ಆರೋಪಿಯನ್ನು ಹನಿ ಟ್ರ್ಯಾಪ್ ಮೂಲಕ ಬಲೆಗೆ ಬೀಳಿಸಲಾಗಿತ್ತು ಎಂಬ ಸ್ಫೋಟಕ ಮಾಹಿತಿಯನ್ನು ಉತ್ತರ ಪ್ರದೇಶ ಪೊಲೀಸರು ಬಹಿರಂಗ ಪಡಿಸಿದ್ದಾರೆ.
ಗೋರಖನಾಥ್ ದೇವಾಲಯ ದಾಳಿಯ ಆರೋಪಿ ಅಹಮದ್ ಮುರ್ತಜಾ ಅಬ್ಬಾಸಿಯನ್ನು ಇಸ್ಲಾಮಿಕ್ ಸ್ಟೇಟ್ಸ್ ನಿಂದ ಹನಿ ಟ್ರ್ಯಾಪ್ ಮಾಡಿಸಲಾಗಿತ್ತು. ಆ ಮೂಲಕವೇ ದಾಳಿ ನಡೆಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಅಹಮದ್ ಅಬ್ಬಾಸಿಗೆ ಮೊದಲು ಇಸ್ಲಾಮಿಕ್ ಸ್ಟೇಟ್ಸ್ ನ ಮಹಿಳೆಯಿಂದ ಇ ಮೇಲ್ ಬಂದಿತ್ತು. ತಾನು ಇಸ್ಲಾಮಿಕ್ ಸ್ಟೇಟ್ಸ್ ಉಗ್ರ ಕ್ಯಾಂಪ್ ನಲ್ಲಿ ಸಿಲುಕಿಕೊಂಡಿದ್ದೇನೆ ಎಂದು ಹೇಳಿಕೊಂಡಿದ್ದಳು. ತನ್ನ ಫೋಟೊವನ್ನು ಕಳುಹಿಸಿಕೊಂಡಿದ್ದಳು. ಹೀಗಾಗಿ ಅಬ್ಬಾಸಿ 40 ಸಾವಿರ ರೂ ಕಳುಹಿಸಿದ್ದ. ತಾನು ಭಾರತಕ್ಕೆ ಬಂದಾಗ ಭೇಟಿಯಾಗುತ್ತೇನೆ ಎಂದು ಮಹಿಳೆ ಅಬ್ಬಾಸಿಗೆ ಹೇಳಿದ್ದಳು.
ನಂತರ ಸತತ ಮೇಲ್ ಸಂದೇಶಗಳ ರವಾನೆಯ ಬಳಿಕ ಅಬ್ಬಾಸಿ ಉಗ್ರ ಸಂಘಟನೆ ಸೇರಲು ತಯಾರಿ ನಡೆಸಿದ್ದ. ಮಹಿಳೆಗೆ ಮೂರು ಬಾರಿ ಹಣವನ್ನು ಅಬ್ಬಾಸಿ ಕಳುಹಿಸಿದ್ದ.
ಇದನ್ನೂ ಓದಿ:ರೆಪೋ, ರಿವರ್ಸ್ ರೆಪೋ ದರ ಯಥಾಸ್ಥಿತಿ ಮುಂದುವರಿಕೆ; ಶೇ.7.2 ಜಿಡಿಪಿ ನಿರೀಕ್ಷೆ: ಆರ್ ಬಿಐ
ಐಐಟಿ ಪದವೀಧರನಾಗಿರುವ ಅಹಮದ್ ಅಬ್ಬಾಸಿ ಏಪ್ರಿಲ್ 3ರಂದು ಗೋರಖಪುರದಲ್ಲಿರುವ ಗೋರಖನಾಥ ದೇವಸ್ಥಾನದಲ್ಲಿ ದಾಳಿ ನಡೆಸಿದ್ದ. ಈ ವೇಳೆ ಇಬ್ಬರು ಕಾನ್ಸ್ಟೇಬಲ್ ಗಳು ಗಾಯಗೊಂಡಿದ್ದರು. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಈ ಗೋರಖನಾಥ ದೇವಾಲಯದ ಮುಖ್ಯ ಅರ್ಚಕರಾಗಿದ್ದಾರೆ.
ಉತ್ತರ ಪ್ರದೇಶ ಪೊಲೀಸರ ಪ್ರಕಾರ, ಅಬ್ಬಾಸಿ ತನ್ನ ತಪ್ಪೊಪ್ಪಿಗೆಯಲ್ಲಿ, ಮುಸ್ಲಿಮರ ವಿರುದ್ಧ ನಡೆದ ಆಪಾದಿತ ದೌರ್ಜನ್ಯದಿಂದ ತನ್ನ ದ್ವೇಷವು ಹುಟ್ಟಿಕೊಂಡಿದೆ ಎಂದು ಹೇಳಿದ್ದಾನೆ. ಪೌರತ್ವ (ತಿದ್ದುಪಡಿ) ಕಾಯ್ದೆಯೂ ತಪ್ಪು ಎಂದು ಹೇಳಿಕೊಂಡಿದ್ದಾನೆ.
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
You seem to have an Ad Blocker on.
To continue reading, please turn it off or whitelist Udayavani.