![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Sep 21, 2019, 5:00 AM IST
ಮುಂಬಯಿ: ಭಾರತೀಯ ರಿಸರ್ವ್ ಬ್ಯಾಂಕ್ ಸ್ವಾಯತ್ತತೆಗಿಂತ ಹೆಚ್ಚಿನ ಸ್ಥಾನದಲ್ಲಿದೆ ಎಂದು ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ. ಸರಕಾರದೊಂದಿಗೆ ಆರ್ಬಿಐ ಮುಕ್ತ ಮತ್ತು ಪಾರದರ್ಶಕ ಚರ್ಚೆ ನಡೆಸುತ್ತದೆ. ನಿರ್ಧಾರ ತೆಗೆದುಕೊಳ್ಳುವ ವಿಚಾರದಲ್ಲಿ ಸರಕಾರ ಮಧ್ಯಪ್ರವೇಶಿಸುವುದಿಲ್ಲ ಎಂದಿದ್ದಾರೆ.
ದೃಷ್ಟಿಕೋನವು ವಿಭಿನ್ನವಾಗಿರುವುದರಿಂದ ಎಲ್ಲ ದೇಶ ಗಳಲ್ಲೂ ಸರಕಾರ ಮತ್ತು ನಿಯಂತ್ರಕ ಪ್ರಾಧಿಕಾರದ ಮಧ್ಯೆ ಅಭಿಪ್ರಾಯ ಭೇದ ಕಾಣಿಸಿಕೊಳ್ಳುತ್ತಲೇ ಇರುತ್ತದೆ. ಆದರೆ ಇಂತಹ ಭಿನ್ನಾಬಿಪ್ರಾಯಗಳನ್ನು ಚರ್ಚೆ ನಡೆಸಿ ಪರಿಹರಿಸಿ ಕೊಳ್ಳುವುದು ಅಗತ್ಯ ಎಂದಿದ್ದಾರೆ. ಆದರೆ, ಆರ್ಬಿಐ ಯಾರಿಗೂ ಚಿಯರ್ಲೀಡರ್ ಅಲ್ಲ. ಕೇಂದ್ರೀಯ ಬ್ಯಾಂಕ್ಗಳು ಸರ್ಕಾ ರದ ಚಿಯರ್ ಲೀಡರ್ ಆಗಿರಬಾರದು ಎಂದು ಜನರು ಹೇಳುತ್ತಾರೆ. ಹಾಗಾದರೆ, ಆರ್ಥಿಕತೆಯ ಬಗ್ಗೆ ಸರಕಾರಕ್ಕೆ ಉಪನ್ಯಾಸ ನೀಡುವುದು ಹಾಗೂ ವಾಗ್ಧಾಳಿ ನಡೆಸುವ ಕೆಲಸವನ್ನು ಸೆಂಟ್ರಲ್ ಬ್ಯಾಂಕ್ ಮಾಡಬೇಕೇ ಎಂದು ಅವರು ಪ್ರಶ್ನಿಸಿದ್ದಾರೆ. ಸರಕಾರ ಮತ್ತು ಆರ್ಬಿಐ ಮಧ್ಯೆ ತುಂಬಾ ಸಂವಹನಗಳು ನಡೆದಿವೆ. ಆದರೆ, ನಿರ್ಧಾರ ತೆಗೆದುಕೊ ಳ್ಳುವ ವಿಚಾರದಲ್ಲಿ ಅಥವಾ ಅಂತಿಮ ನಿರ್ಧಾರ ತೆಗೆದುಕೊಳ್ಳುವ ವಿಚಾರ ದಲ್ಲಿ ಆರ್ಬಿಐ ಸ್ವತಂತ್ರವಾಗಿಯೇ ಕಾರ್ಯನಿರ್ವಹಿಸಿದೆ. ನಿರ್ಧಾರ ತೆಗೆದುಕೊಳ್ಳುವಲ್ಲಿ ಆರ್ಬಿಐ ಶೇ. 100ಕ್ಕಿಂತ ಹೆಚ್ಚು ಸ್ವಾಯತ್ತವಾಗಿದೆ. ನನ್ನ ನಿರ್ಧಾರದಲ್ಲಿ ಯಾರೂ ಹಸ್ತಕ್ಷೇಪ ಮಾಡುವುದಿಲ್ಲ ಎಂದಿದ್ದಾರೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.