![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
Team Udayavani, Nov 16, 2022, 6:30 AM IST
ನವದೆಹಲಿ: ಹೆಚ್ಚು ವರ್ಗೀಕರಣ ಇರುವ ಪ್ರವಾಸಿ ವಾಹನಗಳು, ಕಡಿಮೆ ಪ್ರಯಾಣಿಕರ ಸಾಗಿಸುವ ವಾಹನಗಳಿಗೆ ಪರವಾನಗಿ ಶುಲ್ಕ ಇಳಿಕೆ ಸೇರಿದಂತೆ ಹಲವಾರು ಸುಧಾರಣಾವಾದಿ ಕರಡು ನಿಯಮಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.
ದೇಶದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡುವ ನಿಟ್ಟಿನಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಕರಡು ನಿಯಮಗಳನ್ನು ಪ್ರಕಟಿಸಿದೆ.
ಹೊಸ ನಿಯಮಗಳಿಗೆ ಅಂಗೀಕಾರ ದೊರಕಿದಲ್ಲಿ ಅಖಿಲ ಭಾರತ ಪ್ರವಾಸಿ ವಾಹನ (ಪರವಾನಗಿ )ನಿಯಮಗಳು 2021ರ ಬದಲಾಗಿ ಜಾರಿಯಾಗಲಿದೆ ಎಂದು ಸಾರಿಗೆ ಸಚಿವಾಲಯ ತಿಳಿಸಿದೆ.
ಪ್ರವಾಸಿ ಕ್ಷೇತ್ರದ ಉದ್ದಿಮೆದಾರರು ಮತ್ತು ಇತರರು ಕೇಂದ್ರ ಸರ್ಕಾರದ ಹೊಸ ಪ್ರಸ್ತಾಪಕ್ಕೆ ಆಕ್ಷೇಪಗಳು ಅಥವಾ ಸಲಹೆಗಳನ್ನು ಆಹ್ವಾನಿಸಲಾಗಿದೆ. ಅದನ್ನು Joint Secretary (MVL), Ministry of Road Transport and Highways, Transport Bhawan, Parliament Street, New Delhi- 110001 ಅಂಚೆ ಮೂಲಕ, ಇ-ಮೇಲ್ [email protected].ಗೆ ಕಳುಹಿಸಬೇಕು ಎಂದೂ ತಿಳಿಸಿದೆ.
ಉದ್ದೇಶಿತ ಬದಲಾವಣೆಗಳು ಹೀಗಿವೆ:
– ಪ್ರವಾಸಿ ವಾಹನಗಳಿಗೆ ಅಖಿಲ ಭಾರತ ವ್ಯಾಪ್ತಿಯಲ್ಲಿ ಪರವಾನಗಿ ನೀಡುವ ವಿಧಾನದಲ್ಲಿ ಸರಳತೆ ಅನುಸರಿಸಲು ಒತ್ತು. ದೇಶಕ್ಕೆ ಅನ್ವಯವಾಗುವಂತೆ ಪ್ರವಾಸಿ ವಾಹನಗಳಿಗೆ ಪರವಾನಗಿ ನೀಡುವ ನೀಡುವ ಅಂಶ ಸ್ವತಂತ್ರವಾಗಿ ಇರಿಸಲಾಗಿದೆ.
– ಹತ್ತಕ್ಕಿಂತ ಕಡಿಮೆ ಮಂದಿ ಪ್ರಯಾಣಿಸುವ ವಾಹನಗಳಿಗೆ ಪರವಾನಗಿ ನೀಡುವಾಗ ಪರವಾನಗಿ ಶುಲ್ಕ ಇಳಿಕೆ ಮಾಡುವ ಪ್ರಸ್ತಾಪ. ಇದರಿಂದಾಗಿ ಸಣ್ಣ ಪ್ರಮಾಣದ ಪ್ರವಾಸಿ ವಾಹನಗಳನ್ನು ನಿರ್ವಹಿಸುವವರಿಗೆ ಆರ್ಥಿಕವಾಗಿ ನೆಮ್ಮದಿ ಸಿಗಲಿದೆ.
– ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಚಾಲಿತ ವಾಹನಗಳ ಬಳಕೆಗೆ ಉತ್ತೇಜನ. ಇದರಿಂದ ಪ್ರವಾಸಿ ವಾಹನಗಳನ್ನು ನಿರ್ವಹಿಸುವವರಿಗೆ ಹೆಚ್ಚಿನ ವೆಚ್ಚ ಇಲ್ಲದೆ ನಿರ್ವಹಣೆಗೆ ಅನುಕೂಲ.
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
You seem to have an Ad Blocker on.
To continue reading, please turn it off or whitelist Udayavani.