ದಿಲ್ಲಿಯ ಕೆಂಪು ಕೋಟೆಯೊಳಗೆ ಗ್ರೆನೇಡ್ ಪತ್ತೆ, NSGಗೆ ಬುಲಾವ್
Team Udayavani, May 5, 2017, 12:00 PM IST
ಹೊಸದಿಲ್ಲಿ : ರಾಷ್ಟ್ರ ರಾಜಧಾನಿಯಲ್ಲಿನ ಐತಿಹಾಸಿಕ ಕೆಂಪು ಕೋಟೆ ಆವರಣದೊಳಗೆ ನಿಷ್ಕ್ರಿಯಗೊಳಿಸಲ್ಪಟ್ಟ ಗ್ರೆನೇಡ್ ಪತ್ತೆಯಾಗಿದ್ದು ಇದರಿಂದ ಸ್ಥಳೀಯ ನಿವಾಸಿಗಳು ಆತಂಕಿತರಾದರು ಎಂದು ಶುಕ್ರವಾರ ಪ್ರಕಟಗೊಂಡ ವರದಿಗಳು ತಿಳಿಸಿವೆ.
ಎಎನ್ಐ ವರದಿಯ ಪ್ರಕಾರ ಗುರುವಾರ ಸಂಜೆ ಕೆಂಪು ಕೋಟೆ ಆವರಣದ ಒಳಗಿನ ಬಾವಿಯೊಳಗೆ ಗ್ರೆನೇಡ್ ಪತ್ತೆಯಾಗಿತ್ತು. ಇದನ್ನು ಅನುಸರಿಸಿ ಕೂಡಲೇ ಕಟ್ಟೆಚ್ಚರವನ್ನು ಘೋಷಿಸಲಾಯಿತು.
ಸುದ್ದಿ ತಿಳಿದೊಡನೆಯೇ ರಾಷ್ಟ್ರೀಯ ಸೆಕ್ಯುರಿಟಿ ಗಾರ್ಡ್ (ಎನ್ಎಸ್ಜಿ) ಮತ್ತು ಜಿಲ್ಲಾ ಪೊಲೀಸ್ ಕಮಿಷನರ್ ಸ್ಥಳಕ್ಕೆ ಧಾವಿಸಿ ಬಂದರು. ಗ್ರೆನೇಡ್ ಪತ್ತೆಯಾದ ಪರಿಸರದಲ್ಲಿ ವ್ಯಾಪಕ ಶೋಧ ಕಾರ್ಯಾಚರಣೆ ಕೈಗೊಳ್ಳಲಾಯಿತು.
ಪತ್ತೆಯಾದ ಗ್ರೆನೇಡನ್ನು ಅಧಿಕಾರಿಗಳು ಹೆಚ್ಚಿನ ಪರೀಕ್ಷೆಗಾಗಿ ಒಯ್ದರು.
ಈ ವರ್ಷ ಫೆಬ್ರವರಿಯಲ್ಲಿ ಕೆಂಪು ಕೋಟೆಯ ಬಾವಿಯನ್ನು ನಿರ್ಮಲಗೊಳಿಸುವ ವೇಳೆ ಮದ್ದುಗುಂಡುಗಳು ಹಾಗೂ ಸ್ಫೋಟಕಗಳಿದ್ದ ಪೆಟ್ಟಿಗೆಯೊಂದು ಪತ್ತೆಯಾಗಿದ್ದವು.
ಗುರುವಾರ ಸಂಜೆ ಬಾವಿಯೊಳಗೆ ಗ್ರೆನೇಡ್ ಪತ್ತೆಯಾದೊಡನೆಯೇ ಪೊಲೀಸರು ಇಡಿಯ ಪರಿಸರವನ್ನು ಸುತ್ತು ವರಿದು ಎನ್ಎಸ್ಜಿಗೆ ಮಾಹಿತಿ ನೀಡಿದರು ಎಂದು ಎಎನ್ಐ ವರದಿ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Police dog; ರೈತನ ಮನೆಯಿಂದ ಕಳವಾಗಿದ್ದ 1.07 ಕೋಟಿ ರೂ.ಹಣ ಪತ್ತೆಗೆ ನೆರವಾದ ಶ್ವಾನ
ED ಯಿಂದ ಬಂಧನಕ್ಕೊಳಗಾಗಿದ್ದ ಆಪ್ ನಾಯಕ ಸತ್ಯೇಂದ್ರ ಜೈನ್ ಗೆ ಜಾಮೀನು
Maharashtra; ಕೈ ನಾಯಕರಿಗೆ ಸಾಮರ್ಥ್ಯವಿಲ್ಲ..: ಸೀಟು ಹಂಚಿಕೆ ಕುರಿತು ರಾವತ್ ಅಸಮಾಧಾನ
UP: ಟೊಮ್ಯಾಟೊ ಸಾಗಿಸುತ್ತಿದ್ದ ಟ್ರಕ್ ಪಲ್ಟಿ… ರಾತ್ರಿಯಿಡೀ ಟೊಮ್ಯಾಟೊ ಕಾದು ಕೂತ ಪೊಲೀಸರು
Video: ನಿಮಗೆ ಮತ ಹಾಕಿದ್ದೇನೆ, ನನಗೊಂದು ಮದುವೆ ಮಾಡಿಸಿ.. ಶಾಸಕರ ಬಳಿ ಮನವಿ ಮಾಡಿದ ವ್ಯಕ್ತಿ
MUST WATCH
ಹೊಸ ಸೇರ್ಪಡೆ
Reservation: ಪಂಚಮಸಾಲಿ ಮೀಸಲು ವಿಚಾರ ತಜ್ಞರು, ಸಂಪುಟದಲ್ಲಿ ಚರ್ಚಿಸಿ ಕ್ರಮ: ಸಿಎಂ
K. S. Eshwarappa: ಬ್ರಿಗೇಡ್ ನಿಂದ ಸರ್ಕಾರಗಳನ್ನು ಜಾಗೃತಗೊಳಿಸೋಣ
Israel ಗಾಜಾದಲ್ಲಿ ಕಾರ್ಯಾಚರಣೆ ನಿಲ್ಲಿಸದೆ ಒತ್ತೆಯಾಳುಗಳ ಬಿಡುಗಡೆ ಇಲ್ಲ: ಹಮಾಸ್!
ED ತನಿಖೆಗೆ ಮುಡಾ ಎಲ್ಲಾ ದಾಖಲೆ ನೀಡಲಿದೆ: ಸಚಿವ ಬೈರತಿ ಸುರೇಶ್ ಹೇಳಿಕೆ
La Tomatina: ಏನಿದು ಲಾ ಟೊಮಾಟಿನಾ ಹಬ್ಬ…ಈ ಹಬ್ಬದ ವಿಶೇಷತೆ ಏನು ಗೊತ್ತಾ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.