GST; ಜೀವ, ಆರೋಗ್ಯ ವಿಮೆಗೆ ಜಿಎಸ್ಟಿ ವಿನಾಯಿತಿ?
ಜಿಎಸ್ಟಿ ದರ ಪರಾಮರ್ಶೆ ಸಚಿವರ ಸಮಿತಿಯಿಂದ ಮಂಡಳಿಗೆ ಪ್ರಸ್ತಾವನೆ
Team Udayavani, Oct 20, 2024, 7:50 AM IST
ಹೊಸದಿಲ್ಲಿ: ಜೀವ ವಿಮೆ, ಹಿರಿಯ ನಾಗರಿಕರ ಆರೋಗ್ಯ ವಿಮೆ ಗಳನ್ನು ಜಿಎಸ್ಟಿ ವ್ಯಾಪ್ತಿಯಿಂದ ಹೊರಗಿಡಬೇಕು ಎಂಬ ಆಗ್ರಹಕ್ಕೆ ಜಿಎಸ್ಟಿ ದರ ಪರಾಮರ್ಶೆಗೆ ಸಂಬಂಧಿಸಿದ ಸಚಿವರ ಸಮಿತಿ ಮಣಿದಿದ್ದು, ಈ ಕುರಿತ ಪ್ರಸ್ತಾವವನ್ನು ಜಿಎಸ್ಟಿ ಮಂಡಳಿಯ ಮುಂದಿಡಲು ನಿರ್ಧರಿಸಿದೆ.
ಶನಿವಾರ ಸಚಿವರ ಸಮಿತಿಯ ಸಭೆ ನಡೆದಿದ್ದು, ಜೀವ ವಿಮೆ ಹಾಗೂ ಹಿರಿಯ ನಾಗರಿಕರ ಆರೋಗ್ಯ ವಿಮೆಗಳನ್ನು ಜಿಎಸ್ಟಿಯಿಂದ ಹೊರಗಿಡುವ ಬಗ್ಗೆ ಚರ್ಚೆ ನಡೆಸಲಾಗಿದೆ. ಇಷ್ಟಾಗಿಯೂ 5 ಲಕ್ಷ ರೂ.ಗಳಿಗಿಂತ ಹೆಚ್ಚಿರುವ ಆರೋಗ್ಯ ವಿಮೆಯ ಕಂತಿನ ಮೇಲೆ ವಿಧಿಸಲಾಗುವ ಶೇ. 18 ಜಿಎಸ್ಟಿಯನ್ನು ಮುಂದುವರಿಸುವ ಸಾಧ್ಯತೆ ಇದೆ.
ಜಿಎಸ್ಟಿ ಪರಿಷ್ಕರಣೆಯಿಂದ ಸುಮಾರು 22,000 ಕೋ.ರೂ. ಆದಾಯವನ್ನು ನಿರೀಕ್ಷಿಸಲಾಗಿದ್ದು, ಜೀವ ವಿಮೆಗಳ ಮೇಲಿನ ಜಿಎಸ್ಟಿ ಇಳಿಕೆಯಿಂದ ರಾಜ್ಯಗಳಿಗೆ ಉಂಟಾಗುವ ನಷ್ಟವನ್ನು ಇದು ಸರಿದೂಗಿಸಲಿದೆ ಎನ್ನಲಾಗಿದೆ. ಮುಂದಿನ ತಿಂಗಳು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ನಡೆಯಲಿರುವ ಜಿಎಸ್ಟಿ ಮಂಡಳಿಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ.
ಯಾವುದು ಅಗ್ಗ?
20 ಲೀ. ಮತ್ತು ಅದಕ್ಕೂ ಹೆಚ್ಚಿನ ಪ್ಯಾಕೇಜ್x ಕುಡಿಯುವ ನೀರನ್ನು ಶೇ. 18ರ ಬದಲಿಗೆ ಶೇ. 5ರ ಜಿಎಸ್ಟಿ ಸೇರಿಸುವ ಪ್ರಸ್ತಾವವಿದೆ. ಹಾಗೆಯೇ 10 ಸಾವಿರ ರೂ.ಗಳಿಗಿಂತ ಕಡಿಮೆ ಬೆಲೆಯ ಬೈಸಿಕಲ್ ಹಾಗೂ ನೋಟ್ಬುಕ್ಗಳನ್ನು ಕೂಡ ಶೇ. 12ರಿಂದ ಶೇ. 5 ಜಿಎಸ್ಟಿ ವರ್ಗಕ್ಕೆ ಸೇರಿಸುವ ಪ್ರಸ್ತಾವವಿದೆ.
ಯಾವುದು ತುಟ್ಟಿ?
15 ಸಾವಿರ ರೂ. ಹಾಗೂ ಅದಕ್ಕಿಂತ ಮೇಲ್ಪಟ್ಟ ಜೋಡಿ ಶೂ, 25 ಸಾವಿರ ರೂ. ಹಾಗೂ ಅದಕ್ಕಿಂತ ಮೇಲ್ಪಟ್ಟ ಕೈಗಡಿಯಾರಗಳನ್ನು ಶೇ. 18ರಿಂದ ಶೇ. 28 ಜಿಎಸ್ಟಿಗೆ ವರ್ಗಕ್ಕೆ ಸೇರಿಸುವ ಪ್ರಸ್ತಾವವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
New Delhi: ಸಿಆರ್ಪಿಎಫ್ ಶಾಲೆ ಬಳಿ ಭಾರೀ ಸ್ಪೋಟ; ಸ್ಥಳಕ್ಕೆ ಪೊಲೀಸರ ದೌಡು
Odisha: ಪ್ರಧಾನಿಗೆ 100 ರೂ ನೀಡಿದ ಬುಡಕಟ್ಟು ಮಹಿಳೆ; ನಾರಿಶಕ್ತಿಯ ಆಶೀರ್ವಾದ ಎಂದ ಮೋದಿ
Online Nikah: ಪಾಕ್ ಯುವತಿಯನ್ನು ಆನ್ಲೈನ್ನಲ್ಲಿ ವಿವಾಹವಾದ ಬಿಜೆಪಿ ಮುಖಂಡನ ಪುತ್ರ!
Mumbai: ಸಿದ್ಧಿಕಿಗೆ ದಾವೂದ್ ಸಂಪರ್ಕ ಇದ್ದಿದ್ದಕ್ಕೆ ಹ*ತ್ಯೆ: ಬಿಷ್ಣೋಯ್ ಗ್ಯಾಂಗ್ ಸದಸ್ಯ
Bomb Threat: ಒಂದೇ ದಿನ 30ಕ್ಕೂ ಹೆಚ್ಚು ವಿಮಾನಗಳಿಗೆ ಹುಸಿ ಬಾಂಬ್ ಕರೆ!
MUST WATCH
ಹೊಸ ಸೇರ್ಪಡೆ
Davanagere: ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಅ.23ರಂದು ಪ್ರತಿಭಟನೆ: ರವಿನಾರಾಯಣ್
Kanakapura: ವಿವಾಹಕ್ಕೆ ಹೋಗುತ್ತಿದ್ದವರ ಬಸ್ ಪಲ್ಟಿ; 20ಕ್ಕೂ ಹೆಚ್ಚು ಮಂದಿಗೆ ಗಾಯ
Director Guruprasad: ʼಮಠʼ ನಿರ್ದೇಶಕ ಗುರುಪ್ರಸಾದ್ ವಿರುದ್ಧ ದೂರು; ಆಗಿದ್ದೇನು?
Dandeli: ಅಪರಿಚಿತ ವಾಹನ ದ್ವಿಚಕ್ರ ವಾಹನಕ್ಕೆ ಡಿಕ್ಕಿ; ಸವಾರ ಗಂಭೀರ
By election; ಶೀಘ್ರ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಅಂತಿಮ: ಎಚ್ ಕೆ ಪಾಟೀಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.