Digital arrest; ದಂಧೆ ನಡೆಸುತ್ತಿದ್ದ ತೈವಾನ್ ನ ನಾಲ್ವರು ಸೇರಿ 17 ಮಂದಿ ಬಂಧನ

ದೇಶಾದ್ಯಂತ ಸಾವಿರಾರು ಮಂದಿಗೆ ವಂಚನೆ... ಗುಜರಾತ್ ಸೈಬರ್ ಕ್ರೈಂ ಬ್ರಾಂಚ್ ಕಾರ್ಯಾಚರಣೆ

Team Udayavani, Oct 14, 2024, 6:49 PM IST

cyber crime

ಅಹಮದಾಬಾದ್ : ರಾಷ್ಟ್ರವ್ಯಾಪಿ “ಡಿಜಿಟಲ್ ಬಂಧನ” ದಂಧೆ ನಡೆಸುತ್ತಿದ್ದ ತೈವಾನ್ ಮೂಲದ ನಾಲ್ವರು ಸೇರಿದಂತೆ 17 ಮಂದಿ ಆರೋಪಿಗಳನ್ನು ಅಹಮದಾಬಾದ್ ಸೈಬರ್ ಕ್ರೈಂ ಬ್ರಾಂಚ್ ಬಂಧಿಸಿದೆ ಎಂದು ಗುಜರಾತ್ ಅಪರಾಧ ವಿಭಾಗದ ಜಂಟಿ ಆಯುಕ್ತ ಶರದ್ ಸಿಂಘಾಲ್ ಸೋಮವಾರ ತಿಳಿಸಿದ್ದಾರೆ.

ಬಂಧಿತ ತೈವಾನ್ ಪ್ರಜೆಗಳನ್ನು ಮು ಚಿ ಸಂಗ್ (42), ಚಾಂಗ್ ಹು ಯುನ್ (33), ವಾಂಗ್ ಚುನ್ ವೀ (26) ಮತ್ತು ಶೆನ್ ವೀ (35) ಎಂದು ಗುರುತಿಸಲಾಗಿದ್ದು, ಉಳಿದ 13 ಮಂದಿ ಗುಜರಾತ್, ಮಹಾರಾಷ್ಟ್ರ, ಜಾರ್ಖಂಡ್, ಒಡಿಶಾ ಮತ್ತು ರಾಜಸ್ಥಾನದವರಾಗಿದ್ದಾರೆ.

ತೈವಾನ್‌ನ ನಾಲ್ವರು ಆರೋಪಿಗಳು ಕಳೆದ ಒಂದು ವರ್ಷದಿಂದ ಭಾರತಕ್ಕೆ ನಿರಂತರ ಭೇಟಿ ನೀಡುತ್ತಿದ್ದರು ಮತ್ತು ಗ್ಯಾಂಗ್‌ನ ಸದಸ್ಯರಿಗೆ ಒಂದು ಖಾತೆಯಿಂದ ಇನ್ನೊಂದು ಖಾತೆಗೆ ಹಣವನ್ನು ವರ್ಗಾಯಿಸಲು ಮೊಬೈಲ್ ಫೋನ್ ಅಪ್ಲಿಕೇಶನ್‌ಗಳು ಮತ್ತು ಇತರ ತಾಂತ್ರಿಕ ಬೆಂಬಲವನ್ನು ನೀಡಿದ್ದರು.

ಮೋಸ ಹೋದ ಹಿರಿಯ ನಾಗರಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕಳೆದ ತಿಂಗಳು ದೂರನ್ನು ಸ್ವೀಕರಿಸಿದ ನಂತರ, ಪೊಲೀಸರ ತಂಡಗಳು ಗುಜರಾತ್, ದೆಹಲಿ, ರಾಜಸ್ಥಾನ, ಕರ್ನಾಟಕ, ಒಡಿಶಾ ಮತ್ತು ಮಹಾರಾಷ್ಟ್ರದ ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸಿವೆ. ರಾಷ್ಟ್ರವ್ಯಾಪಿ ದಂಧೆ ನಡೆಸುತ್ತಿದ್ದ ನಾಲ್ವರು ತೈವಾನ್ ಪ್ರಜೆಗಳು ಸೇರಿದಂತೆ 17 ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿವೆ. ವಂಚಕರು ಇಲ್ಲಿಯವರೆಗೆ ಸುಮಾರು 1,000 ಜನರನ್ನು ಗುರಿಯಾಗಿಸಿಕೊಂಡಿರಬಹುದು ಎಂದು ಸಿಂಘಾಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

‘ಡಿಜಿಟಲ್ ಅರೆಸ್ಟ್’ ಸದ್ಯ ವ್ಯಾಪಕವಾಗಿ ನಡೆಯುತ್ತಿರುವ ಒಂದು ರೀತಿಯ ಸೈಬರ್ ಅಪರಾಧವಾಗಿದ್ದು, ಇದರಲ್ಲಿ ಜನರನ್ನು ಹಣ ವರ್ಗಾವಣೆ, ಮಾದಕವಸ್ತು ಕಳ್ಳಸಾಗಣೆ ಇತ್ಯಾದಿಗಳಿಗಾಗಿ ಟ್ರಾಯ್, ಸಿಬಿಐ ಮತ್ತು ಸೈಬರ್ ಕ್ರೈಂ ಬ್ರಾಂಚ್‌ನ ಅಧಿಕಾರಿಗಳಿಂದ ತನಿಖೆ ನಡೆಸಲಾಗುತ್ತಿದೆ ಎಂದು ನಂಬುವಂತೆ ಮಾಡಲಾಗುತ್ತದೆ. ವಿಡಿಯೋ ಕರೆ ಮೂಲಕ, ಆನ್‌ಲೈನ್ ಪರಿಕರಗಳ ಮೂಲಕ ಸಂಪರ್ಕ ಸಾಧಿಸಿ ವಂಚನೆ ಎಸಗಲಾಗುತ್ತದೆ. ಹೆದರಿದವರನ್ನು ತನಿಖೆಯಿಂದ ಬಿಟ್ಟುಬಿಡಬೇಕಾದರೆ ದೊಡ್ಡ ಮೊತ್ತದ ಹಣವನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲು ಒತ್ತಾಯಿಸಲಾಗುತ್ತದೆ. ಈ ರೀತಿಯ ವಂಚನೆಗೆ ‘ಡಿಜಿಟಲ್ ಅರೆಸ್ಟ್’ ಎಂಬ ಪದವನ್ನು ಬಳಕೆ ಮಾಡಲಾಗುತ್ತಿದೆ.

ಟಾಪ್ ನ್ಯೂಸ್

1-eq-weq

Darshan ಅಭಿಮಾನಿಗಳಿಂದಾಗಿ ಶ್ರವಣ ಶಕ್ತಿ ಕಳೆದುಕೊಂಡೆ: ಡಾ. ಗೊ.ರು.ಚನ್ನಬಸಪ್ಪ

rain

Rain Alert: ರಾಜ್ಯದ 18 ಜಿಲ್ಲೆಗಳಲ್ಲಿ ಅ.17ರವರೆಗೆ ಭಾರೀ ಮಳೆ ಸಾಧ್ಯತೆ

1-goutham-gambhir

Gambhir; ಕೊಹ್ಲಿಗೆ ರನ್ ಗಳಿಸುವ ಹಸಿವಿದೆ, ಪ್ರತಿ ಪಂದ್ಯದ ಬಳಿಕ ತೀರ್ಪು ಅಗತ್ಯವಿಲ್ಲ

Sweet Recipes: ನಾಲಿಗೆ ಚಪ್ಪರಿಸುವ ರಸಭರಿತ ಗರಿಗರಿ ಜಿಲೇಬಿ… ಇಲ್ಲಿದೆ ಸುಲಭ ವಿಧಾನ

Sweet Recipes: ನಾಲಿಗೆ ಚಪ್ಪರಿಸುವ ರಸಭರಿತ ಗರಿಗರಿ ಜಿಲೇಬಿ… ಇಲ್ಲಿದೆ ಸುಲಭ ವಿಧಾನ

Basangouda Patil Yatnal: ಫಸ್ಟ್‌ ಲೈನ್‌ ನಾಯಕರ ಆಸ್ತಿ ಬಗ್ಗೆ ತನಿಖೆ ಆಗಲಿ

Basangouda Patil Yatnal: ಫಸ್ಟ್‌ ಲೈನ್‌ ನಾಯಕರ ಆಸ್ತಿ ಬಗ್ಗೆ ತನಿಖೆ ಆಗಲಿ

By election: Liquor sale banned in Udupi district for two days

By election: ಉಡುಪಿ ಜಿಲ್ಲೆಯಲ್ಲಿ ಎರಡು ದಿನ ಮದ್ಯ ಮಾರಾಟ ನಿಷೇಧ

cyber crime

Digital arrest; ದಂಧೆ ನಡೆಸುತ್ತಿದ್ದ ತೈವಾನ್ ನ ನಾಲ್ವರು ಸೇರಿ 17 ಮಂದಿ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-shahsi

Modi ಮಾನನಷ್ಟ ಕೇಸ್‌: ತರೂರ್‌ ವಿಚಾರಣೆಗೆ ತಡೆಯಾಜ್ಞೆ 4 ವಾರ ವಿಸ್ತರಿಸಿದ ಸುಪ್ರೀಂ

Uddhav Thackeray: ಮಾಜಿ ಸಿಎಂ, ಶಿವಸೇನಾ ನಾಯಕ ಉದ್ಧವ್ ಠಾಕ್ರೆ ಆಸ್ಪತ್ರೆಗೆ ದಾಖಲು

Uddhav Thackeray: ಮಾಜಿ ಸಿಎಂ, ಶಿವಸೇನಾ ನಾಯಕ ಉದ್ಧವ್ ಠಾಕ್ರೆ ಆಸ್ಪತ್ರೆಗೆ ದಾಖಲು

1-munna-bg

Lawrence Bishnoi; ಗ್ಯಾಂಗ್ ನ ಹಿಟ್ ಲಿಸ್ಟ್ ನಲ್ಲಿ ಖ್ಯಾತ ಕಾಮಿಡಿಯನ್

Rain Alert: ತಮಿಳುನಾಡಿನ ನಾಲ್ಕು ಜಿಲ್ಲೆಗಳ ಶಾಲಾ ಕಾಲೇಜುಗಳಿಗೆ ಅ.15ರಂದು ರಜೆ

Rain Alert: ತಮಿಳುನಾಡಿನ ನಾಲ್ಕು ಜಿಲ್ಲೆಯ ಶಾಲಾ ಕಾಲೇಜುಗಳಿಗೆ ಅ.15ರಂದು ರಜೆ… ಸಿಎಂ ಸಭೆ

UP: ದುರ್ಗಾ ವಿಸರ್ಜನೆ ವೇಳೆ ಕೋಮು ಘರ್ಷಣೆ: ಗುಂಡಿನ ದಾಳಿ… ಯುವಕ ಬಲಿ, 30 ಮಂದಿ ಬಂಧನ

UP: ದುರ್ಗಾ ವಿಸರ್ಜನೆ ವೇಳೆ ಕೋಮು ಘರ್ಷಣೆ: ಗುಂಡಿನ ದಾಳಿ… ಯುವಕ ಬಲಿ, 30 ಮಂದಿ ಬಂಧನ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Devadurga

Udupi: ಬಾಂಗ್ಲಾದೇಶದ ಅಕ್ರಮ ವಲಸಿಗರು ಪೊಲೀಸ್‌ ಕಸ್ಟಡಿಗೆ

WhatsApp Image 2024-10-14 at 19.16.40

MLA Channabasappa: ಸೈಟ್‌ ವಾಪಸ್‌ ಕೊಟ್ಟರೆ ಖರ್ಗೆ ಕುಟುಂಬ ಶಿಕ್ಷೆಯಿಂದ ಪಾರಾಗಲ್ಲ

1-bhat-bg

Bhatkal; ಯತಿ ನರಸಿಂಹಾನಂದ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬೃಹತ್ ಪ್ರತಿಭಟನೆ

WhatsApp Image 2024-10-14 at 19.23.50

Kudalasangama Shree: ಹುಲಿಯಂತೆ ಘರ್ಜಿಸುತ್ತೇನೆ ಎಂದಿದ್ದ ಲಕ್ಷ್ಮೀ ಈಗ ತಣ್ಣಗಾಗಿದ್ದಾರೆ

1-eq-weq

Darshan ಅಭಿಮಾನಿಗಳಿಂದಾಗಿ ಶ್ರವಣ ಶಕ್ತಿ ಕಳೆದುಕೊಂಡೆ: ಡಾ. ಗೊ.ರು.ಚನ್ನಬಸಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.