ಗುಜರಾತ್ ನ ಈ ಶಿಕ್ಷಕಿ 8 ವರ್ಷದಿಂದ ಅಮೆರಿಕದಲ್ಲಿದ್ದರೂ ಇಂದಿಗೂ ವೇತನ ಬರುತ್ತಿದೆಯಂತೆ


Team Udayavani, Aug 9, 2024, 2:02 PM IST

ಗುಜರಾತ್ ನ ಈ ಶಿಕ್ಷಕಿ 8 ವರ್ಷದಿಂದ ಅಮೆರಿಕದಲ್ಲಿದ್ದರೂ ಇಂದಿಗೂ ವೇತನ ಬರುತ್ತಿದೆಯಂತೆ

ಗುಜರಾತ್‌: ಗುಜರಾತ್‌ನ ಬನಸ್ಕಾಂತ ಜಿಲ್ಲೆಯಿಂದ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಹಿಂದೆ ಪಂಚ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿದ್ದ ಮಹಿಳೆಯೊಬ್ಬರು ಕಳೆದ ಎಂಟು ವರ್ಷಗಳಿಂದ ಅಮೆರಿಕದ ಚಿಕಾಗೋದಲ್ಲಿ ನೆಲೆಸಿದ್ದರೂ ಇಂದಿಗೂ ಶಿಕ್ಷಣ ಇಲಾಖೆಯಿಂದ ಈ ಶಿಕ್ಷಕಿಗೆ ಪ್ರತಿ ತಿಂಗಳು ಸಂಬಳ ಬರುತ್ತಿದೆಯಂತೆ.

ಹೌದು ಎನ್ನುತ್ತಾರೆ ಇದೇ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇತರ ಶಿಕ್ಷಕರು ಅಲ್ಲದೆ ಶಾಲೆಯ ದಾಖಲೆಗಳಲ್ಲೂ ಈ ಶಿಕ್ಷಕಿ ಇಂದಿಗೂ ಕರ್ತವ್ಯದಲ್ಲಿ ಇರುವುದಾಗಿ ಹೇಳುತ್ತಿದೆಯಂತೆ. ಕಳೆದ 8 ವರ್ಷದಿಂದ ಅಮೆರಿಕದಲ್ಲಿದ್ದರೂ ಈ ಶಿಕ್ಷಕಿಯ ಖಾತೆಗೆ ಮಾತ್ರ ಪ್ರತಿ ತಿಂಗಳು ಶಾಲೆಯ ವೇತನ ಜಮೆಯಾಗುತ್ತಿದೆಯಂತೆ ಅಲ್ಲದೆ ಶಿಕ್ಷಕಿ ಕೂಡ ಜಮೆಯಾದ ಹಣವನ್ನು ಡ್ರಾ ಮಾಡುತ್ತಿದ್ದಾರೆ ಎಂದು ಶಾಲಾ ಶಿಕ್ಷಕರು ಆರೋಪಿಸುತ್ತಿದ್ದಾರೆ.

ಏನಿದು ಪ್ರಕರಣ:
ಗುಜರಾತ್ ಜಿಲ್ಲೆಯ ಬನಸ್ಕಾಂತದ ಅಂಬಾಜಿಯಲ್ಲಿರುವ ಪಂಚ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಭಾವನಾಬೆನ್ ಪಟೇಲ್ ಅವರು ಎಂಟು ವರ್ಷದ ಮೊದಲು ಇಲ್ಲಿನ ಶಾಲೆಯಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು ಎನ್ನಲಾಗಿದೆ ಇದಾದ ಬಳಿಕ ಕರ್ತವ್ಯದಲ್ಲಿರುವಾಗಲೇ ಕುಟುಂಬ ಸಮೇತ ಅಮೆರಿಕದ ಚಿಕಾಗೋ ಗೆ ತೆರಳಿ ಅಲ್ಲಿ ನೆಲೆನಿಂತಿದ್ದಾರೆ ಆ ಬಳಿಕ ಶಾಲೆಯ ಕಡೆ ತಲೆ ಹಾಕಿಲ್ಲ ಅಲ್ಲದೆ ವರ್ಷಕ್ಕೆ ಒಮ್ಮೆ ಗುಜರಾತ್ ಗೆ ಬರುತ್ತಿದ್ದ ಪಟೇಲ್ ತನ್ನ ಊರಿಗೆ ಬಂದು ಎರಡು ತಿಂಗಳು ಊರಿನಲ್ಲಿ ನೆಲೆಸಿ ಮತ್ತೆ ಅಮೆರಿಕಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ ಕೆಲವೊಮ್ಮೆ ಊರಿಗೆ ಬಂದ ಸಂದರ್ಭ ಶಾಲೆಗೆ ಭೇಟಿ ನೀಡಿ ಬರುತ್ತಿದ್ದರು ಎನ್ನಲಾಗಿದೆ ಆದರೆ ಈ ಶಿಕ್ಷಕಿ ಅಮೆರಿಕಕ್ಕೆ ತೆರಳಿ ಎಂಟು ವರ್ಷಗಳಾದರೂ ಶಿಕ್ಷಣ ಇಲಾಖೆಯಿಂದ ಸಂಬಳ ಮಾತ್ರ ಬರುತ್ತಲೇ ಇದೆಯಂತೆ, ಈ ಕುರಿತು ಅದೇ ಶಾಲೆಯ ಶಿಕ್ಷಕರು ಆರೋಪ ಕೂಡ ಮಾಡಿದ್ದಾರೆ.

ಶಿಕ್ಷಕಿಯ ಬಗ್ಗೆ ದೂರು:
ಭಾವನಾ ಬೆನ್ ಪಟೇಲ್ ಅವರ ಬಗ್ಗೆ ಅದೇ ಶಾಲೆಯ ಶಿಕ್ಷಕರು ಶಿಕ್ಷಣ ಇಲಾಖೆಗೆ ದೂರು ನೀಡಿದ್ದರೂ ಶಿಕ್ಷಣ ಇಲಾಖೆ ಯಾವುದೇ ಪ್ರತಿಕ್ರಿಯೆ ಅಥವಾ ಕ್ರಮ ಕೈಗೊಳ್ಳಲು ಮುಂದಾಗಿಲ್ಲ ಎನ್ನುತ್ತಾರೆ ಶಿಕ್ಷಕರು, ಅಲ್ಲದೆ ಈ ಶಿಕ್ಷಕಿಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳ ಜೊತೆ ಸಂಪರ್ಕ ಹೊಂದಿದ್ದಾರೆ ಹಾಗಾಗಿ ಇಲೆಕ್ ಕೂಡ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ ಎನ್ನುತ್ತಾರೆ.

ಎರಡು ವರ್ಷಗಳಿಂದ ಶಾಲೆಗೆ ಬಂದಿಲ್ಲ
ಇದೆ ಶಾಲೆಯಲ್ಲಿ ಕರ್ತವ್ಯದಲ್ಲಿರುವ ಶಿಕ್ಷಕಿ ಪಾರುಲ್ ಬೆನ್ ಪ್ರಕಾರ, ಮೂರನೇ ತರಗತಿಯ ಮಕ್ಕಳಿಗೆ ಶಿಕ್ಷಕಿಯಾಗಿದ್ದ ಭಾವನಾ ಬೆನ್ ಪಟೇಲ್ ಅವರನ್ನು ಮೂರನೇ ತರಗತಿಯಲ್ಲಿ ನೋಡಿದ್ದ ಮಕ್ಕಳು ಈಗ ಐದನೇ ತರಗತಿ ತಲುಪಿದ್ದಾರೆ. ಅವರು ಬಹಳ ಸಮಯದಿಂದ ಗೈರುಹಾಜರಾಗಿದ್ದಾರೆ. ಸದ್ಯ ತನಗೆ ಐದನೇ ತರಗತಿಯ ಜವಾಬ್ದಾರಿ ಇದೆ ಎಂದು ಪಾರುಲ್ ಬೆನ್ ಹೇಳಿದ್ದಾರೆ.

ಭಾವನಾ ಪಟೇಲ್ ಅಮೆರಿಕದ ಗ್ರೀನ್ ಕಾರ್ಡ್ ಹೊಂದಿದ್ದಾರೆ ಎನ್ನಲಾಗಿದೆ, ಆದರೂ ಆಕೆಯ ಹೆಸರನ್ನು ಭಾರತದ ಈ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ನೋಂದಾಯಿಸಲಾಗಿದೆ. ಶಾಲೆಯ ಬೋರ್ಡ್‌ನಲ್ಲಿ ಹೆಸರನ್ನು ನಮೂದಿಸಲಾಗಿದೆ. ಈ ಬಗ್ಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ. ಈ ಪ್ರಭಾರಿ ಶಿಕ್ಷಕಿ ವರ್ಷಕ್ಕೊಮ್ಮೆ ದೀಪಾವಳಿ ಸಂದರ್ಭದಲ್ಲಿ ಬರುತ್ತಾರೆ ಎನ್ನುತ್ತಾರೆ ಶಾಲೆಯ ಪ್ರಭಾರಿ ಶಿಕ್ಷಕರು.

8 ವರ್ಷಗಳಿಂದ ಸಂಬಳ ಪಡೆಯುತ್ತಿದ್ದಾರೆ:
ಶಿಕ್ಷಕಿ ಭಾವನಾಬೆನ್ ಅವರು ಅಮೆರಿಕದ ಗ್ರೀನ್ ಕಾರ್ಡ್ ಹೊಂದಿದ್ದಾರೆ ಎನ್ನಲಾಗಿದೆ. ಭಾವನಾಬೆನ್ ಪಟೇಲ್ ಕಳೆದ 8 ವರ್ಷಗಳಿಂದ ಅಮೆರಿಕದ ಚಿಕಾಗೋಗೆ ಶಿಫ್ಟ್ ಆಗಿದ್ದಾರೆ. ಹೀಗಿದ್ದರೂ ಅಂಬಾಜಿ ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿ ಭಾವನಾಬೆನ್ ಪಟೇಲ್ ಹೆಸರು ಚಾಲ್ತಿಯಲ್ಲಿದೆ.

ಜನವರಿ 2023 ಕೊನೆಯ ಬಾರಿಗೆ ಶಾಲೆಗೆ ಭೇಟಿ:
ಭಾವನಾಬೆನ್ ಕೊನೆಯ ಬಾರಿಗೆ 25 ಜನವರಿ 2023 ರಂದು ಶಾಲೆಗೆ ಹಾಜರಾಗಿದ್ದರು ಎಂದು ಶಿಕ್ಷಣಾಧಿಕಾರಿ ಮಾಹಿತಿ ನೀಡಿದ್ದಾರೆ. ಇದರ ಬಳಿಕ ಜನವರಿ 1, 2024 ರಿಂದ ವೇತನ ರಹಿತ ಷರತ್ತಿನೊಂದಿಗೆ ರಜೆಯಲ್ಲಿ ತೆರಳಿರುವುದಾಗಿ ಹೇಳಿಕೊಂಡಿದ್ದು ಇದರ ಬಗ್ಗೆ ಶಿಕ್ಷಕಿಗೆ ನೋಟಿಸ್ ಕೂಡ ನೀಡಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Kalaburagi; ಜ.29 ರಿಂದ 9 ದಿನಗಳ ಕಾಲ 7ನೇ ಭಾರತೀಯ ಸಂಸ್ಕೃತಿ ಉತ್ಸವ

 

ಟಾಪ್ ನ್ಯೂಸ್

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-kashmir-msulim-IAS

Kashmir; ಮೊದಲ ಮುಸ್ಲಿಂ ಐಎಎಸ್‌ ಅಧಿಕಾರಿ ನಿಧನ

PM Modi: ವಿದೇಶದಲ್ಲಿ ನಮ್ಮ ದೇವತೆಗಳಿಗೆ ರಾಹುಲ್‌ ಅವಮಾನ

PM Modi: ವಿದೇಶದಲ್ಲಿ ನಮ್ಮ ದೇವತೆಗಳಿಗೆ ರಾಹುಲ್‌ ಅವಮಾನ

1-JSSS

TMC ರಾಜ್ಯಸಭಾ ಸದಸ್ಯತ್ವಕ್ಕೆ ಜವಾಹರ್‌ ಸರ್ಕಾರ್‌ ರಾಜೀನಾಮೆ

1-eeeeee

Train ಹಳಿಯ ಮೇಲೆ ರಾಡ್‌: ಹಳಿ ತಪ್ಪಿಸಲು ಮತ್ತೆ ಯತ್ನ, ತಪ್ಪಿದ ಅನಾಹುತ

firee

Bihar;ಜಮೀನು ವಿವಾದ: 21 ದಲಿತರ ಮನೆಗಳಿಗೆ ಬೆಂಕಿ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.