![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Oct 10, 2023, 11:43 PM IST
ಟೊರಂಟೊ: ಇಸ್ರೇಲ್ ಮೇಲೆ ಹಮಾಸ್ ಉಗ್ರರು ದಾಳಿ ನಡೆಸಿದಂತೆಯೇ, ಭಾರತದ ಮೇಲೆ ನಾವು ದಾಳಿ ನಡೆಸುವುದಾಗಿ ಖಾಲಿಸ್ಥಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನೂನ್ ಬೆದರಿಕೆ ಹಾಕಿದ್ದಾನೆ.
ಅಮೆರಿಕ ಮೂಲದ ನಿಷೇಧಿತ ಖಾಲಿಸ್ಥಾನಿ ಉಗ್ರ ಸಂಘಟನೆ ಸಿಕ್ಖ್ ಫಾರ್ ಜಸ್ಟಿಸ್ನ ಮುಖ್ಯಸ್ಥನಾಗಿರುವ ಪನ್ನುನ್ ಮಂಗಳವಾರ ವೀಡಿಯೋವೊಂದನ್ನು ಹರಿ ಬಿಟ್ಟಿದ್ದು, ಅದರಲ್ಲಿ ” ಭಾರತ ಪಂಜಾಬ್ ಅನ್ನು ಅತಿಕ್ರಮಿ ಸುತ್ತಿದೆ. ಅದು ಮುಂದುವರಿದರೆ ಈಗ ಹಮಾಸ್ ನೀಡಿದ ಉತ್ತರವನ್ನೇ ನಾವು ನೀಡಬೇಕಾಗುತ್ತದೆ. ಆದರೆ ಅದಕ್ಕೆ ಭಾರತ ಮತ್ತು ಪ್ರಧಾನಿ ಮೋದಿ ಹೊಣೆ ಯಾಗಬೇಕಾಗುತ್ತದೆ’ ಎಂದಿದ್ದಾನೆ.
ಜೋರ್ಡಾನ್ನೊಂದಿಗೆ ಟ್ರಾಡೊ ಮಾತುಕತೆ: ಯುಎಇ ಅಧ್ಯಕ್ಷ ಮೊಹಮ್ಮದ್ ಬಿನ್ ಜಾಯೇದ್ರೊಂದಿಗೆ ಭಾರತದ ವಿಚಾರ ಪ್ರಸ್ತಾವಿಸುವ ಮೂಲಕ ಭಾರತದ ಕೆಂಗಣ್ಣಿಗೆ ಗುರಿಯಾಗಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರಾಡೊ ಈಗ ಜೋರ್ಡಾನ್ ದೊರೆಯೊಂದಿಗಿನ ಮಾತುಕತೆ ವೇಳೆಯೂ ಇದೇ ಚಾಳಿ ಮುಂದುವರಿಸಿದ್ದಾರೆ. “ಜೋರ್ಡಾನ್ ರಾಜ ಎರಡನೇ ಅಬ್ದುಲ್ಲಾ ಬಿನ್ ಅಲ್-ಹುಸೇನ್ ಅವರೊಂದಿಗೆ ಜಸ್ಟಿನ್ ಟ್ರಾಡೊ ಮಾತುಕತೆ ನಡೆಸಿದಾಗ, ಭಾರತ-ಕೆನಡಾ ನಡುವಿನ ಸಂಬಂಧದ ಸದ್ಯದ ಸ್ಥಿತಿ-ಗತಿ ಕುರಿತು ಮಾಹಿತಿ ನೀಡಿದ್ದಲ್ಲದೇ, ಕಾನೂನು ಮತ್ತು ರಾಜತಾಂತ್ರಿಕ ಸಂಬಂಧಗಳ ವಿಯೆನ್ನಾ ಒಪ್ಪಂದವನ್ನು ಗೌರವಿಸುವ ಪ್ರಾಮುಖ್ಯವನ್ನು ಒತ್ತಿ ಹೇಳಿದ್ದಾರೆ’ ಎಂದು ಕೆನಡಾ ವಿದೇಶಾಂಗ ಸಚಿವಾಲಯ ತಿಳಿಸಿದೆ.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.