![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Apr 27, 2017, 1:37 PM IST
ಮುಂಬಯಿ/ಹೈದರಾಬಾದ್: ಕ್ರಿಕೆಟಿಗ ಹರ್ಭಜನ್ ಸಿಂಗ್ ಮತ್ತು ಬಾಹುಬಲಿ-2 ಸಿನಿಮಾ ನಿರ್ಮಾಪಕ ಶೋಬು ಯರ್ಲಗಡ್ಡ ತಾವು ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಜನಾಂಗೀಯ ನಿಂದನೆ ಆಗಿದೆ ಎಂದು ಆರೋಪಿಸಿದ್ದಾರೆ. ಚಂಡೀಗಢದಿಂದ ಮುಂಬಯಿಗೆ ತೆರಳುತ್ತಿದ್ದ ಜೆಟ್ ಏರ್ವೇಸ್ಗೆ ಸೇರಿದ ವಿಮಾನದಲ್ಲಿ ವಿದೇಶಿ ಪೈಲಟ್ ವಿಕಲ ಚೇತನ ಮಹಿಳೆಗೆ ಜನಾಂಗೀಯ ನಿಂದನೆ ನಡೆಸಿದ್ದಲ್ಲದೆ, ಅವರ ಮೇಲೆ ಹಲ್ಲೆ ನಡೆಸಿದ್ದಾರೆಂದು ಕ್ರಿಕೆಟಿಗ ಹರ್ಭಜನ್ ಸಿಂಗ್ ಟ್ವೀಟ್ ಮಾಡಿದ್ದಾರೆ. ಆ ಪೈಲಟ್ ದೇಶ ಬಿಟ್ಟು ತೆರಳಲೇಬೇಕೆಂದು ಒತ್ತಾಯಿಸಿದ್ದಾರೆ. ಈ ಬಗ್ಗೆ ಜೆಟ್ ಏರ್ವೇಸ್ ವಿಷಾದ ವ್ಯಕ್ತಪಡಿಸಿ, ಪೈಲಟ್ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದಿದೆ.
ಈ ನಡುವೆ ‘ಬಾಹುಬಲಿ-2’ ನಿರ್ಮಾಪಕ ಶೋಬು ಯರ್ಲಗಡ್ಡ ಕೂಡ ತಮ್ಮ ತಂಡಕ್ಕೂ ಎಮಿರೇಟ್ ಏರ್ಲೈನ್ಸ್ ಸಿಬಂದಿ ನಿಂದನೆ ನಡೆಸಿದ್ದಾರೆಂದು ದೂರಿದ್ದಾರೆ. ದುಬೈನಲ್ಲಿ ಪ್ರಚಾರ ಮುಗಿಸಿ ವಾಪಸು ಬರುವ ವೇಳೆ ನಿಲ್ದಾಣದಲ್ಲಿ ನಮ್ಮ ಇಡೀ ತಂಡದ ಜತೆ ಎಮಿರೇಟ್ಸ್ ಏರ್ಲೈನ್ ಸಿಬಂದಿ ಒರಟಾಗಿ ನಡೆದುಕೊಂಡಿತು ಎಂದು ದೂರಿದ್ದಾರೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.