

Team Udayavani, Jan 30, 2025, 9:44 AM IST
ಹೊಸದಿಲ್ಲಿ: ಆಪ್-ಬಿಜೆಪಿ “ಜಲಯುದ್ಧ’ ತೀವ್ರಗೊಂಡಿರುವಂತೆಯೇ, ಹರಿಯಾಣ ಸಿಎಂ ನಯಾಬ್ ಸಿಂಗ್ ಸೈನಿ ಅವರು ಬುಧವಾರ ಯಮುನಾ ನದಿ ತೀರಕ್ಕೆ ತೆರಳಿ ಬೊಗಸೆಯಲ್ಲಿ ನೀರು ಹಿಡಿದು ಕುಡಿದಿದ್ದಾರೆ. ಈ ಮೂಲಕ ಯಮುನಾ ನದಿಗೆ ಹರಿಯಾಣ ಸರಕಾರ ವಿಷ ಬೆರೆಸಿದೆ ಎಂಬ ಆಪ್ ಮುಖ್ಯಸ್ಥ ಕೇಜ್ರಿವಾಲ್ ಆರೋಪಕ್ಕೆ ಅವರು ತಿರುಗೇಟು ನೀಡಿದ್ದಾರೆ.
ನಾನು ಕುಡಿಯುವ ನೀರಿಗೆ ನಮ್ಮದೇ ಸರಕಾರ ವಿಷ ಬೆರೆಸುವುದೇ?: ಪಿಎಂ
ಯಮುನಾ ನದಿಗೆ ಹರಿಯಾಣದ ಬಿಜೆಪಿ ಸರ್ಕಾರ ವಿಷ ಬೆರೆಸಿದೆ ಎಂದು ಆರೋಪಿಸಿದ್ದ ಆಪ್ ಮುಖ್ಯಸ್ಥ ಕೇಜ್ರಿವಾಲ್ ವಿರುದ್ಧ ಪ್ರಧಾನಿ ಮೋದಿ ಹರಿಹಾಯ್ದಿ ದ್ದಾರೆ. ದಿಲ್ಲಿಯಲ್ಲಿ ಮಾತನಾಡಿ, “ಸೋಲಿನ ಭೀತಿಯಿಂದ ಆಪ್ ಹತಾಶಗೊಂಡಿದೆ. ಹರಿಯಾಣ ದವರು ದಿಲ್ಲಿಯಲ್ಲಿ ವಾಸಿಸುತ್ತಿ ಲ್ಲವೇ? ನಾನು ಕುಡಿಯೋದು ಈ ನೀರನ್ನೇ ಅಲ್ಲವೇ?. ಬಿಜೆಪಿ ನೇತೃತ್ವದ ಹರಿಯಾಣ ಸರಕಾರ ಪ್ರಧಾನಿ ಕುಡಿ ಯುವ ನೀರಿಗೆ ವಿಷ ಬೆರೆಸುತ್ತದೆಯೇ? ಸುಳ್ಳು ಹೇಳಿದ ಆಪ್ ಅನ್ನು ದಿಲ್ಲಿ ಕ್ಷಮಿಸುವುದಿಲ್ಲ’ ಎಂದಿದ್ದಾರೆ.
ಆಪ್ ನಾಯಕರನ್ನು ಚಾರ್ಲ್ಸ್ ಶೋಭ್ರಾಜ್ಗೆ ಹೋಲಿಕೆ
ಆಪ್ ನಾಯಕರನ್ನು ಪ್ರಧಾನಿ ಮೋದಿ ಸರಣಿ ಹಂತಕ ಚಾರ್ಲ್ಸ್ ಶೋಭ್ರಾಜ್ಗೆ ಹೋಲಿಕೆ ಮಾಡಿದ್ದಾರೆ. ಚಾರ್ಲ್ಸ್ ಶೋಭ್ರಾಜ್ ಎಂಬ ಸರಣಿ ಹಂತಕ “ಬಿಕಿನಿ ಕಿಲ್ಲರ್’ ಎಂದೇ ಕುಖ್ಯಾತನಾಗಿದ್ದ. ಏಷ್ಯಾದ ಹಲವು ದೇಶಗಳಿಗೆ ಬರುವ ಪಾಶ್ಚಾತ್ಯ ಪ್ರವಾಸಿಗರನ್ನು ಮೋಸದಿಂದ ದರೋಡೆ ಮಾಡಿ ಕೊನೆಗೆ ಕೊಲೆ ಮಾಡುತ್ತಿದ್ದ. ಈ ಹಂತಕನಂತೆ ಆಪ್ ನಾಯಕರು ಅಮಾಯಕ ಜನರನ್ನು ವಂಚಿಸುತ್ತಿದ್ದಾರೆ ಎಂದು ಪ್ರಧಾನಿ ಟೀಕಿಸಿದ್ದಾರೆ.
Bhubaneswar: ನೇಪಾಲಿ ವಿದ್ಯಾರ್ಥಿನಿ ಆತ್ಮಹ*ತ್ಯೆ, ಭಾರೀ ಪ್ರತಿಭಟನೆ
Kumbh stampede: ಸರ್ಕಾರದ ವಿರುದ್ಧ “ಅಸ್ಥಿ ಕುಡಿಕೆ’ ಪ್ರತಿಭಟನೆ
Augusta scam: 6 ವರ್ಷಗಳ ಕಸ್ಟಡಿ ಬಳಿಕ ಅಗಸ್ಟಾ ಹಗರಣ ದಲ್ಲಾಳಿ ಮೈಕೆಲ್ಗೆ ಜಾಮೀನು
TTD: ತಿರುಪತಿ ದೇಗುಲದ ಉಚಿತ ಅನ್ನಪ್ರಸಾದ ಟ್ರಸ್ಟ್ಗೆ ಮುಂಬೈ ವ್ಯಕ್ತಿ 11ಕೋಟಿ ರೂ.ದೇಣಿಗೆ!
ಮಹಾಕುಂಭ ‘ಮೃತ್ಯುಕುಂಭ’ ವಾಗಿ ಮಾರ್ಪಟ್ಟಿದೆ… ಯೋಗಿ ಸರ್ಕಾರದ ವಿರುದ್ಧ ಮಮತಾ ವಾಗ್ದಾಳಿ
Udupi: ಗೀತಾರ್ಥ ಚಿಂತನೆ-191: “ಡಿಸಿಶನ್ ಮೇಕರ್ ನೀನಲ್ಲ’ ಎಂಬ ಶ್ರೀಕೃಷ್ಣ
Udupi: ಗ್ಯಾರಂಟಿಯಿಂದ ಜನರ ಆರ್ಥಿಕ ಸ್ಥಿತಿ ವೃದ್ಧಿ: ಎಚ್.ಎಂ. ರೇವಣ್ಣ
Mangaluru: ಪಿಡಬ್ಲ್ಯುಡಿ ಆಸ್ತಿ ಮೂಲಕ ಆದಾಯ ಗಳಿಕೆ: ಸಚಿವ ಸತೀಶ್ ಜಾರಕಿಹೊಳಿ
Mangaluru: ವಿದ್ಯುತ್ ದರ ಏರಿಕೆಗೆ ಪ್ರಸ್ತಾವ; ಗ್ರಾಹಕರಿಂದ ಆಕ್ಷೇಪ
Bhubaneswar: ನೇಪಾಲಿ ವಿದ್ಯಾರ್ಥಿನಿ ಆತ್ಮಹ*ತ್ಯೆ, ಭಾರೀ ಪ್ರತಿಭಟನೆ
You seem to have an Ad Blocker on.
To continue reading, please turn it off or whitelist Udayavani.