Haryana: ವಿವಿಧ ನೇಮಕಾತಿಯಲ್ಲಿ ಅಗ್ನಿವೀರರಿಗೆ 10% ಮೀಸಲು: ಹರಿಯಾಣ ಘೋಷಣೆ
Team Udayavani, Jul 18, 2024, 8:00 AM IST
ಚಂಡೀಗಢ: “ಅಗ್ನಿಪಥ ಯೋಜನೆ’ಯ ಕುರಿತು ಸಾಕಷ್ಟು ಅಸಮಾಧಾನ ವ್ಯಕ್ತವಾಗುತ್ತಿರುವ ಹೊತ್ತಿನಲ್ಲೇ ಹರಿಯಾಣ ರಾಜ್ಯ ಸರಕಾರವು, ಕಾನ್ಸ್ಟೆಬಲ್, ಅರಣ್ಯ ಸಂರಕ್ಷಕರು, ಜೈಲ್ ವಾರ್ಡನ್ಗಳ ನೇಮಕಾತಿಯಲ್ಲಿ ಶೇ.10 ಮೀಸಲಾತಿಯನ್ನು ಅಗ್ನಿವೀರ ರಿಗೆ ನೀಡಲು ಮುಂದಾಗಿದೆ. ಈ ವರ್ಷದ ಅಕ್ಟೋಬರ್- ನವೆಂಬರ್ನಲ್ಲಿ ಹರಿಯಾಣ ವಿಧಾನಸಭೆ ಚುನಾವಣೆ ನಡೆಯಲಿದ್ದು, ಆ ಕಾರಣಕ್ಕಾಗಿಯೇ ಈ ಮೀಸಲಾತಿಯನ್ನು ಪ್ರಕಟಿಸಿದೆ ಎಂದು ವಿಶ್ಲೇಷಿಸ ಲಾಗುತ್ತಿದೆ.
ಈ ಕುರಿತು ಮಾಹಿತಿ ನೀಡಿದ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಅವರು, “ಒಂದು ವೇಳೆ ಅಗ್ನಿವೀರರು ತಮ್ಮ ಸ್ವಂತ ಉದ್ಯೋಗ ಆರಂಭಿಸಲು ಮುಂದಾದರೆ ಅವರಿಗೆ ಬಡ್ಡಿರಹಿತವಾಗಿ 5 ಲಕ್ಷ ರೂ. ಸಾಲವನ್ನು ಸರಕಾರ ಒದಗಿಸಲಿದೆ” ಎಂದು ಹೇಳಿದರು.
ಕಾನ್ಸ್ಟೆಬಲ್, ಮೈನಿಂಗ್ ಗಾರ್ಡ್, ಅರಣ್ಯ ಸಂರಕ್ಷಕರು, ಜೈಲ್ ವಾರ್ಡನ್ ಮತ್ತು ವಿಶೇಷ ಪೊಲೀಸ್ ಅಧಿಕಾರಿಗಳ ನೇರ ನೇಮಕಾತಿ ವೇಳೆ ಅಗ್ನಿವೀರರಿಗೆ ಶೇ.10 ಮೀಸಲಾತಿಯನ್ನು ನೀಡಲಾಗುವುದು. ಹಾಗೆಯೇ, ಗ್ರೂಪ್ ಸಿ ಮತ್ತು ಡಿ ನೇಮಕಾತಿ ಸಂಬಂಧ ವಯೋಮಾನ ಸಡಿಲಿಕೆಯನ್ನು ನೀಡಲಾಗುವುದು. ಹಾಗಿದ್ದೂ ಅಗ್ನಿವೀರರ ಮೊದಲ ಬ್ಯಾಚಿನ ವಯೋಮಾನ ಸಡಿಲಿಕೆ 5 ವರ್ಷಗಳವರೆಗೆ ಇರಲಿದೆ. ಜತೆಗೆ ಶೇ.5ರಷ್ಟು ಮೀಸಲಾತಿಯೂ ಸಿಗಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
ಅಗ್ನಿವೀರರನ್ನು ನೇಮಕ ಮಾಡುವ ಕೈಗಾರಿಕೆಗೆ ಸಬ್ಸಿಡಿ
ಯಾವ ಕೈಗಾರಿಕೆಯು ಅಗ್ನಿವೀರರನ್ನು ತಿಂಗಳಿಗೆ 30 ಸಾವಿರ ಸಂಬಳಕ್ಕೆ ನೇಮಕ ಮಾಡಿಕೊಳ್ಳುತ್ತದೆಯೋ ಅಂಥ ಕೈಗಾರಿಕೆಗೆ ವಾರ್ಷಿಕ 60 ಸಾವಿರ ಸಬ್ಸಿಡಿ ನೀಡಲಾಗು ವುದು. ಜತೆಗೆ ಅಗ್ನಿವೀರರಿಗೆ ಆದ್ಯತೆ ಮೇರೆಗೆ ಶಸ್ತ್ರಾಸ್ತ್ರ ಹೊಂದಲು ಅನುಮತಿ ಕೊಡ ಲಾಗುವುದು ಎಂದು ಸೈನಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jammu and Kashmir ಉಗ್ರವಾದ ಕೊನೆಯುಸಿರೆಳೆಯುತ್ತಿದೆ : ಪ್ರಧಾನಿ ಮೋದಿ
Hindi ಮತ್ತು ಇತರ ಭಾಷೆಗಳ ನಡುವೆ ಎಂದಿಗೂ ಸ್ಪರ್ಧೆ ಇರಬಾರದು: ಅಮಿತ್ ಶಾ
Doctors Protest: ಇದು ನನ್ನ ಕಡೇ ಪ್ರಯತ್ನ, ನಿಮ್ಮ ಅಕ್ಕನಾಗಿ ಬಂದಿರುವೆ ಎಂದ ಸಿಎಂ ಮಮತಾ
Gyanvapi ಮಸೀದಿ ಎಂದು ಉಲ್ಲೇಖಿಸುವುದು ದುರದೃಷ್ಟಕರ : ಯೋಗಿ ಆದಿತ್ಯನಾಥ್
‘Nafrat Ki Dukaan..; ಅಮೆರಿಕ ಘಟನೆ ಕುರಿತು ರಾಹುಲ್ ವಿರುದ್ಧ ಮೋದಿ ಆಕ್ರೋಶ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.