ಮಹಾಮಳೆಗೆ ಮುಂಬೈ ತತ್ತರ
Team Udayavani, Jul 2, 2019, 5:00 AM IST
ಮುಂಬೈ: ಮುಂಗಾರು ಮಳೆಯ ಅಬ್ಬರಕ್ಕೆ ವಾಣಿಜ್ಯ ನಗರಿ ಮುಂಬೈ ತತ್ತರಿಸಿದೆ. ಭಾನುವಾರ ಸ್ವಲ್ಪಮಟ್ಟಿಗೆ ವಿರಮಿಸಿದ್ದ ವರುಣ ಸೋಮವಾರ ಮತ್ತೆ ಬಲಪ್ರದರ್ಶನ ಮಾಡಿದ್ದಾನೆ.
ಸೋಮವಾರ ಬೆಳಗ್ಗಿನಿಂದಲೇ ಮುಂಬೈನಾದ್ಯಂತ ಭಾರೀ ಮಳೆಯಾಗಿದ್ದು, ಜನರು ಮನೆಯಿಂದ ಹೊರಬರಲೂ ಹೆದರುವಂಥ ಪರಿಸ್ಥಿತಿ ನಿರ್ಮಾಣವಾಗಿತ್ತು. ರಸ್ತೆಗಳೆಲ್ಲ ಜಲಾವೃತವಾಗಿದ್ದು, ರೈಲು ಹಳಿಗಳಲ್ಲೂ ನೀರು ತುಂಬಿದ ಕಾರಣ ಎಲ್ಲ ಮಾರ್ಗಗಳಲ್ಲೂ ರೈಲುಗಳ ಸಂಚಾರ ವಿಳಂಬವಾಯಿತು. ಚೆಂಬೂರ್ನ ಕೆಲವು ಪ್ರದೇಶಗಳಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿದ್ದು, ಜನರು ಬೃಹನ್ಮುಂಬೈ ಪಾಲಿಕೆಗೆ ಹಿಡಿಶಾಪ ಹಾಕಿದರು. ನಗರದ 12 ಪ್ರದೇಶಗಳಲ್ಲಿ ಗೋಡೆ ಕುಸಿತದ ಪ್ರಕರಣಗಳು ವರದಿಯಾದವು. ಕೇವಲ 2 ದಿನಗಳಲ್ಲಿ ನಗರವು 540 ಮಿ.ಮೀ. ಮಳೆಯನ್ನು ಕಂಡಂತಾಗಿದೆ ಎಂದು ಪಾಲಿಕೆ ಆಯುಕ್ತ ಪ್ರವೀಣ್ ಪರ್ದೇಶಿ ತಿಳಿಸಿದ್ದಾರೆ.
ಇದೇ ವೇಳೆ, ಜು.2, 4 ಮತ್ತು 5ರಂದು ಥಾಣೆ ಹಾಗೂ ಪಾಲ್ಗರ್ನಲ್ಲಿ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಒಡಿಶಾದಲ್ಲಿ ಭಾರೀ ಮಳೆ: ಈ ನಡುವೆ, ಬಂಗಾಳಕೊಲ್ಲಿಯ ವಾಯವ್ಯ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಇದರ ಪರಿಣಾಮವಾಗಿ ಮಂಗಳವಾರ ಒಡಿಶಾದ 8 ಜಿಲ್ಲೆಗಳಲ್ಲಿ ತೀವ್ರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಜೂನ್ನಲ್ಲಿ ವಿಪರೀತ ಮಾನ್ಸೂನ್ ಕೊರತೆ
ನವದೆಹಲಿ: ಜೂನ್ನಲ್ಲಿ ಈ ವರ್ಷ ಸುರಿದ ಮಳೆಯು 2015ರಲ್ಲಿ ಸುರಿದ ಮಳೆಗಿಂತ ಕಡಿಮೆಯಾಗಿದ್ದು, ದೇಶದ ಹಲವು ಭಾಗಗಳಲ್ಲಿ ಬರ ಪರಿಸ್ಥಿತಿ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಶೇ.33ರಷ್ಟು ಮಳೆ ಕೊರತೆ ಜೂನ್ನಲ್ಲಿ ಉಂಟಾಗಿದೆ. ದೇಶದ ಪ್ರಮುಖ 91 ಜಲಾಶಯಗಳ ಪೈಕಿ ಶೇ.80ರಷ್ಟು ಜಲಾಶಯಗಳು ಸಾಮಾನ್ಯಕ್ಕಿಂತ ಕಡಿಮೆ ಪ್ರಮಾಣದಲ್ಲಿವೆ. ಈ ವರ್ಷ ಮಾನ್ಸೂನ್ ಕರಾವಳಿಗೆ ಅಪ್ಪಳಿಸುವಲ್ಲಿ ಭಾರಿ ವಿಳಂಬವಾಗಿತ್ತು. ಸಾಮಾನ್ಯವಾಗಿ ಜೂನ್ 1 ಕ್ಕೆ ಮಳೆ ಆಗಮಿಸುತ್ತಿತ್ತಾದರೂ, ಈ ಬಾರಿ ಜೂನ್ 8ರಂದು ಬಂದಿತ್ತು. ಅಷ್ಟೇ ಅಲ್ಲ, ಮಾನ್ಸೂನ್ ಕರಾವಳಿಗೆ ಅಪ್ಪಳಿಸಿದ ನಂತರವೂ ಅದರ ಗತಿ ಅತ್ಯಂತ ಕಡಿಮೆ ಇದ್ದುದರಿಂದ, ದೇಶದ ಬಹುತೇಕ ಭಾಗಗಳಲ್ಲಿ ಮಳೆಯಾಗಲು ವಿಳಂಬವಾಗಿದೆ. ಶೇ. 90ಕ್ಕಿಂತ ಕಡಿಮೆ ಮಳೆಯಾದರೆ ಅದನ್ನು ಸಾಮಾನ್ಯಕ್ಕಿಂತ ಕಡಿಮೆ ಎಂದು ಪರಿಗಣಿಸಲಾಗುತ್ತದೆ. ಈ ಬಾರಿ ಜೂನ್ನಲ್ಲಿ ಶೇ. 67ರಷ್ಟು ಮಳೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Laddoo Row: ಲಡ್ಡು ತಯಾರಿಸಲು ತಿರುಪತಿಗೆ ನಾವು ತುಪ್ಪ ಪೂರೈಕೆ ಮಾಡಿಲ್ಲ: ಅಮೂಲ್ ಸ್ಪಷ್ಟನೆ
Kuki: ಮಣಿಪುರಕ್ಕೆ ಅಕ್ರಮ ಪ್ರವೇಶಿಸಿದ 900 ಕುಕಿ ಉಗ್ರರು: ಭದ್ರತಾ ಸಂಸ್ಥೆ ಮಾಹಿತಿ
Atishi: ದೆಹಲಿ ನೂತನ ಸಿಎಂ ಆಗಿ ಆತಿಶಿ ಇಂದು ಅಧಿಕಾರ ಸ್ವೀಕಾರ
PM Modi U.S. visit: ಇಂದಿನಿಂದ 3 ದಿನಗಳ ಕಾಲ ಮೋದಿ ಅಮೆರಿಕ ಪ್ರವಾಸ
Tirupati: ಲಡ್ಡಿಗೆ ಪ್ರಾಣಿ ಕೊಬ್ಬು: ಟಿಟಿಡಿ ಹೇಳಿದ್ದೇನು? ತನಿಖೆಗೆ ನಿರ್ಧಾರ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.