![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Jun 25, 2021, 7:50 AM IST
ಹೊಸದಿಲ್ಲಿ: ರಾಷ್ಟ್ರೀಯ ಹೆದ್ದಾರಿ ಗಳು ಮತ್ತು ಅವುಗಳಲ್ಲಿ ಸೇತುವೆಗಳಂತಹ ರಚನೆ ಗಳನ್ನು ನಿರ್ಮಿಸುವಾಗ ಗುಣಮಟ್ಟದ ಜತೆಗೆ ರಾಜಿಯಾಗಿ ರುವುದು ಕಂಡು ಬಂದರೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ)ದ ಅಧಿಕಾರಿಗಳು ಮತ್ತು ಎಂಜಿನಿಯರ್ಗಳು, ರಸ್ತೆ ಸಾರಿಗೆ ಸಚಿವಾಲಯ ಮತ್ತಿತರ ಏಜೆನ್ಸಿ ಗಳನ್ನು ಉತ್ತರದಾಯಿಗಳನ್ನಾಗಿಸುವ ವ್ಯವಸ್ಥೆ ಸದ್ಯವೇ ಜಾರಿಗೆ ಬರಲಿದೆ.
ನಿರ್ಮಾಣ ಸಂದರ್ಭ ಗುಣ ಮಟ್ಟವನ್ನು ಅನುಸರಿಸು ವಲ್ಲಿ ವೈಫಲ್ಯ ಕಂಡು ಬಂದರೆ ಅಧಿಕಾರಿ ಗಳಿಗೆ ಪ್ರಕರಣದ ಗುರುತ್ವಕ್ಕೆ ಅನುಸಾರ ದಂಡ ವಿಧಿಸಲಾಗುತ್ತದೆ. ಈ ಸಂಬಂಧ ಸುತ್ತೋಲೆ ಹೊರಡಿಸಲಾಗಿದ್ದು, ನಿರ್ಮಾಣ ಕಾರ್ಯ ನಡೆಯುತ್ತಿರುವ ಸ್ಥಳದ ಇನ್ಚಾರ್ಜ್ ಅಧಿಕಾರಿಗಳು ಪ್ರಮಾಣೀಕೃತ ವಿಧಾನವೇ ಅನುಸರಣೆ ಆಗುತ್ತಿದೆ ಎಂಬುದರ ತಪಾಸಣೆ ನಡೆಸುವ ಸಂಬಂಧ ಹೊಣೆಗಾರಿಕೆಗಳನ್ನು ವಿಧಿಸಿದೆ. ಗುಣಮಟ್ಟ ನಿಯಂತ್ರಣಕ್ಕಾಗಿ ಸಂಬಂಧಿತ ಅಧಿಕಾರಿಗಳು ಪ್ರತೀ ತಿಂಗಳು ನಿರ್ಮಾಣ ಕಾರ್ಯದ ತಪಾಸಣೆ ನಡೆಸಬೇಕಿದೆ. 300 ಕೋ.ರೂ.ಗಳಿಗಿಂತ ಹೆಚ್ಚು ಮೊತ್ತದ ಯೋಜನೆ ಮತ್ತು 60 ಮೀ.ಗಳಿಗಿಂತ ಹೆಚ್ಚು ಉದ್ದದ ಸೇತುವೆ ಒಳಗೊಂಡಿರುವ ಯೋಜನೆಯಾದರೆ ತಿಂಗಳಿಗೆ 2 ಬಾರಿ ಪರೀಕ್ಷೆ ನಡೆಸಬೇಕಿದೆ.
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.