![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Mar 15, 2021, 1:14 PM IST
ಗುವಾಹಟಿ : ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೋಮವಾರ (ಮಾರ್ಚ್ 15) ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಚುನಾವಣಾ ಅಭಿಯಾನದ ಅಂಗವಾಗಿ ಭಗವಾನ್ ಬಿರ್ಸಾ ಮುಂಡಾ ಸಿಡೋ-ಕನ್ಹು ಸಮ್ಮಾನ್ ಯಾತ್ರೆಯನ್ನು ಪ್ರಾರಂಭಿಸಲು ಸಜ್ಜಾಗಿದ್ದಾರೆ.
ಮಹಾನ್ ಸ್ವಾತಂತ್ರ್ಯ ಹೋರಾಟಗಾರರು ದೇಶಕ್ಕೆ ನೀಡಿದ ಕೊಡುಗೆಯನ್ನು ತಿಳಿಸುವುದು ಈ ಯಾತ್ರೆಯ ಪ್ರಮುಖ ಉದ್ದೇಶವೆಂದು ಪಕ್ಷ ಈ ಹಿಂದ ಬಹಿರಂಗಗೊಳಿಸಿತ್ತು.
ಓದಿ : ಕೋವಿಡ್: 24 ಗಂಟೆಯಲ್ಲಿ 26 ಸಾವಿರ ಸೋಂಕಿತರು, ಮಹಾರಾಷ್ಟ್ರದಲ್ಲಿ ಮುಂದುವರಿದ ಆತಂಕ
ಯಾತ್ರೆಯು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಂದ ಜಾರ್ಗ್ರಾಮ್ ನಲ್ಲಿ ನಡೆಯಲಿರುವ ಬೃಹತ್ ಸಾರ್ವಜನಿಕ ಸಭೆಯಲ್ಲಿ ಚಾಲನೆಗೊಳ್ಳಲಿದೆ ಎಂದು ಪಕ್ಷದ ನಾಯಕರು ತಿಳಿಸಿದ್ದಾರೆ.
ಏತನ್ಮಧ್ಯೆ, ಪಶ್ಚಿಮ ಬಂಗಾಳದಲ್ಲಿ ವಿಧಾನ ಸಭಾ ಚುನಾವಣೆಯ ಕಾವು ಏರಿದ್ದು, ಬಿಜೆಪಿ ಹಾಗೂ ತೃಣಮೂಲ ಕಾಂಗ್ರೆಸ್ ಪಕ್ಷಗಳು ನಿರಂತರವಾಗಿ ಚುನಾವಣಾ ಮತ ಪ್ರಚಾರವನ್ನು ನಡೆಸುತ್ತಿವೆ.
ಇನ್ನು, ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ಎಂಟು ಹಂತಗಳಲ್ಲಿ ನಡೆಯಲಿದೆ. 30 ಕ್ಷೇತ್ರಗಳಿಗೆ 1 ನೇ ಹಂತದ ಮತದಾನ ಮಾರ್ಚ್ 27 ರಂದು ನಡೆಯಲಿದ್ದು, 30 ಕ್ಷೇತ್ರಗಳಿಗೆ 2 ನೇ ಹಂತದ ಮತದಾನ ಏಪ್ರಿಲ್ 1 ರಂದು ನಡೆಯಲಿದೆ.
31 ಸ್ಥಾನಗಳಿಗೆ 3 ನೇ ಹಂತದ ಮತದಾನ ಏಪ್ರಿಲ್ 6 ರಂದು, 44 ಕ್ಷೇತ್ರಗಳಿಗೆ 4 ನೇ ಹಂತದ ಮತದಾನ, ಏಪ್ರಿಲ್ 17 ರಂದು 45 ಕ್ಷೇತ್ರಗಳಿಗೆ 5 ನೇ ಹಂತದ ಚುನಾವಣೆ, ಏಪ್ರಿಲ್ 22 ರಂದು 43 ಕ್ಷೇತ್ರಗಳಿಗೆ 6 ನೇ ಹಂತದ ಮತದಾನ, 7 ನೇ ಹಂತಕ್ಕೆ 36 ಕ್ಷೇತ್ರಗಳ ಮತದಾನ ನಡೆಯಲಿದೆ. ಏಪ್ರಿಲ್ 26 ರಂದು ಮತ್ತು ಏಪ್ರಿಲ್ 29 ರಂದು 35 ಕ್ಷೇತ್ರಗಳಿಗೆ 8 ನೇ ಹಂತದಲ್ಲಿ ನಡೆಯಲಿದೆ.
ಓದಿ : ಟೋಲ್ ಸಮಸ್ಯೆ: ಪಡುಬಿದ್ರಿ- ಹೆಜಮಾಡಿಯ ಸರ್ವಿಸ್ ಬಸ್ ಗಳ ಅನಿರ್ಧಿಷ್ಟಾವಧಿ ಮುಷ್ಕರ
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.