![pune](https://www.udayavani.com/wp-content/uploads/2024/07/pune-415x229.jpg)
Constitution ನಲ್ಲಿ ಎಷ್ಟು ಪುಟಗಳಿವೆ?: ವಿಪಕ್ಷಗಳಿಗೆ ಅನುರಾಗ್ ಠಾಕೂರ್ ಪ್ರಶ್ನೆ ವೈರಲ್
Team Udayavani, Jul 3, 2024, 9:42 AM IST
![1-anurag](https://www.udayavani.com/wp-content/uploads/2024/07/1-anurag-620x368.jpg)
ಹೊಸದಿಲ್ಲಿ: ಲೋಕಸಭಾ ಕಲಾಪದಲ್ಲಿ ಆಡಳಿತಾರೂಢ ಬಿಜೆಪಿ ವಿರುದ್ಧ ವಿಪಕ್ಷ ನಾಯಕ ರಾಹುಲ್ ಗಾಂಧಿ ಸೇರಿ ಇಂಡಿಯಾ ಮೈತ್ರಿಕೂಟದ ಸಂಸದರು ಮುಗಿಬಿದ್ದು ವಾಗ್ದಾಳಿ ನಡೆಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಸೇರಿ ಬಿಜೆಪಿ ಸಂಸದರು ದಿಟ್ಟ ತಿರುಗೇಟು ನೀಡುತ್ತಿದ್ದಾರೆ. ಮಂಗಳವಾರ ನಡೆದ ಕಲಾಪದಲ್ಲಿ ಬಿಜೆಪಿ ಸಂಸದ ಅನುರಾಗ್ ಠಾಕೂರ್ ಅವರು ‘ಸಂವಿಧಾನದಲ್ಲಿ ಎಷ್ಟು ಪುಟಗಳಿವೆ? ಎಷ್ಟು?’ ಎಂದು ವಿಪಕ್ಷಗಳನ್ನು ಪ್ರಶ್ನಿಸಿರುವ ವಿಡಿಯೋ ವೈರಲ್ ಆಗುತ್ತಿದೆ.
ಪ್ರತಿಪಕ್ಷಗಳನ್ನು ಗುರಿಯಾಗಿಸಿಕೊಂಡು ಕಿಡಿ ಕಾರಿದ ಠಾಕೂರ್ ‘ಸಂವಿಧಾನದಲ್ಲಿ ಎಷ್ಟು ಪುಟಗಳಿವೆ? ಸಂವಿಧಾನ ಎಷ್ಟು ದಪ್ಪವಾಗಿದೆ ಎಂದು ಹೇಳಬೇಡಿ ಆದರೆ ಪುಟಗಳನ್ನು ತಿಳಿಸಿ. ನೀವು ಅದನ್ನು ಪ್ರತಿದಿನ ಹಿಡಿದುಕೊಂಡು ಬರುತ್ತೀರಿ, ನೀವು ಅದನ್ನು ಕೆಲವೊಮ್ಮೆ ತೆರೆದು ಓದಿದರೆ ಅಡ್ಡಿಲ್ಲ. ನೀವು ಅದನ್ನು ಅಧ್ಯಯನ ಮಾಡುವುದಿಲ್ಲ, ಹಿಡಿದುಕೊಂಡು ಅಲೆದಾಡುತ್ತೀರಿ.ಒಮ್ಮೆ ಜೇಬಿನಿಂದ ತೆಗೆದು ನೋಡಿ’ ಎಂದು ಸವಾಲೆಸೆದರು.
‘ಮೊದಲು ಸಂವಿಧಾನ ರಚಿಸಿದ ವ್ಯಕ್ತಿಯನ್ನು ಅವಮಾನಿಸಿದ್ದರು ಈಗ ಸಂವಿಧಾನ ತೋರಿಸಿದರೂ ಓದುವುದಿಲ್ಲ.ರಾಹುಲ್ ಗಾಂಧಿ ವಿರೋಧ ಪಕ್ಷದ ನಾಯಕರಾಗಿರುವುದು ಒಳ್ಳೆಯದು. ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಕಳೆದ 20 ವರ್ಷಗಳಿಂದ ಜವಾಬ್ದಾರಿಯಿಲ್ಲದೆಯಿದ್ದ ಅವರು ಈಗ ಜವಾಬ್ದಾರಿಯನ್ನೂ ಹೊರಬೇಕಾಗುತ್ತದೆ. ರಾಹುಲ್ ಗಾಂಧಿಗೆ ಇದೊಂದು ಪರೀಕ್ಷೆ. ಅವರು ಪ್ರತಿಪಕ್ಷಗಳನ್ನು ಒಗ್ಗೂಡಿಸಬಲ್ಲರೇ? ಕಳೆದ ಅಧಿವೇಶನದಲ್ಲಿ ಅವರ ಹಾಜರಾತಿ ಶೇಕಡ 50ಕ್ಕಿಂತ ಕಡಿಮೆ ಇತ್ತು ಎಂದರು.
Anurag thakur grilled Rahul Gandhi🤭 …who just hold book of constitution but never read it🤣🤣🤣
Carry Minati❌ Anurag Thakur ✅#RahulGandhiHatesHindus #RahulGandhi #Loksabha #HinduphobicRahul #फिरोज_खान_का_पोता pic.twitter.com/dbBqZLjbG6
— The Intellectual (@SonuGup90911518) July 2, 2024
‘ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 2014ರಲ್ಲಿ ಸಂಸತ್ತಿಗೆ ಬಂದು ಸಂಸತ್ತಿನ ಮೆಟ್ಟಿಲು ಹಾಗೂ ಬಾಬಾ ಸಾಹೇಬ್ ಭೀಮ್ ರಾವ್ ಅಂಬೇಡ್ಕರ್ ಅವರ ಸಂವಿಧಾನಕ್ಕೆ ತಲೆಬಾಗಿದ್ದರು. ಕಾಂಗ್ರೆಸ್ ಬಾಯಿಯಿಂದ ಸಂವಿಧಾನ ಉಳಿಸುವ ಮಾತು ಬರುತ್ತಿದೆ. 100 ಇಲಿಗಳನ್ನು ತಿಂದು ಬೆಕ್ಕು ಹಜ್ಗೆ ಹೊರಟಂತೆ ಧ್ವನಿಸುತ್ತದೆ’ ಎಂದರು.
ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳ ನಾಯಕರು ಸಂವಿಧಾನ ಪ್ರತಿಗಳನ್ನು ಹಿಡಿದು ಸಂಸತ್ ಕಲಾಪದಲ್ಲಿ ಭಾಗಿಯಾಗಿದ್ದರು ಮಾತ್ರವಲ್ಲದೆ ಸಂವಿಧಾನ ಉಳಿಸಿ ಎಂಬ ಘೋಷಣೆಗಳ ಮೂಲಕ ಬಿಜೆಪಿ ವಿರುದ್ಧ ನಿರಂತರ ಪ್ರಹಾರ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
![pune](https://www.udayavani.com/wp-content/uploads/2024/07/pune-415x229.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![pune](https://www.udayavani.com/wp-content/uploads/2024/07/pune-150x83.jpg)
Pune Porsche crash; 300 ಪದಗಳ ಪ್ರಬಂಧ ಬರೆದು ಸಲ್ಲಿಸಿದ ಬಾಲಾಪರಾಧಿ
![ತನಗೆ ಕಚ್ಚಿದ ಹಾವಿಗೆ ಎರಡು ಬಾರಿ ಕಚ್ಚಿದ ವ್ಯಕ್ತಿ… ಹಾವು ಸತ್ತಿತು, ವ್ಯಕ್ತಿ ಬದುಕಿದ](https://www.udayavani.com/wp-content/uploads/2024/07/snake-1-150x91.jpg)
ಹಾವು ಕಚ್ಚಿತೆಂದು ಹಾವಿಗೆ ಎರಡು ಬಾರಿ ಕಚ್ಚಿದ ವ್ಯಕ್ತಿ… ವ್ಯಕ್ತಿ ಬದುಕಿದ, ಹಾವು ಸತ್ತಿತು
![Panaji: ಮಹದಾಯಿ ಪ್ರವಾಹ ಪ್ರಾಧಿಕಾರದ ನಿಯೋಗದಿಂದ ಕಳಸಾ ಬಂಡೂರಿ ಕಾಮಗಾರಿ ಪರಿಶೀಲನೆ](https://www.udayavani.com/wp-content/uploads/2024/07/pramod-sawanth-150x90.jpg)
Panaji: ಮಹದಾಯಿ ಪ್ರವಾಹ ಪ್ರಾಧಿಕಾರದ ನಿಯೋಗದಿಂದ ಕಳಸಾ ಬಂಡೂರಿ ಕಾಮಗಾರಿ ಪರಿಶೀಲನೆ
![New NEET Exam: ಮುಂದೂಡಿಕೆಯಾದ 2 ವಾರದ ಬಳಿಕ ನೀಟ್ ಪಿಜಿ ಪರೀಕ್ಷೆ ದಿನಾಂಕ ಘೋಷಣೆ](https://www.udayavani.com/wp-content/uploads/2024/07/Exam-2-150x85.jpg)
New NEET Exam: ಮುಂದೂಡಿಕೆಯಾದ 2 ವಾರದ ಬಳಿಕ ನೀಟ್ ಪಿಜಿ ಪರೀಕ್ಷೆ ದಿನಾಂಕ ಘೋಷಣೆ
![Arvind Kejriwal ಜಾಮೀನು ಅರ್ಜಿ ಕುರಿತು ಸಿಬಿಐ ಪ್ರತಿಕ್ರಿಯೆ ಕೇಳಿದ ಹೈಕೋರ್ಟ್…](https://www.udayavani.com/wp-content/uploads/2024/07/kejriwal-2-150x84.jpg)
Arvind Kejriwal ಜಾಮೀನು ಅರ್ಜಿ ಕುರಿತು ಸಿಬಿಐಗೆ ನೋಟಿಸ್ ಜಾರಿ ಮಾಡಿದ ಹೈಕೋರ್ಟ್…
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.