![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Dec 10, 2022, 7:30 AM IST
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶ ಪ್ರವಾಸದಿಂದ ಜಗತ್ತಿನ ಇತರ ರಾಷ್ಟ್ರಗಳ ಜತೆಗಿನ ಬಾಂಧವ್ಯ ವೃದ್ಧಿಯಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿದೆ.
ಜಗತ್ತನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ನಿಟ್ಟಿನಲ್ಲಿ ದೇಶದ ಅಭಿಪ್ರಾಯಕ್ಕೆ ಈಗ ಮನ್ನಣೆ ಸಿಗುತ್ತಿದೆ ಎಂದು ರಾಜ್ಯಸಭೆಯಲ್ಲಿ ಕೇಂದ್ರ ವಿದೇಶಾಂಗ ಖಾತೆ ಸಹಾಯಕ ಸಚಿವ ವಿ.ಮುರಳೀಧರನ್ ಮಾಹಿತಿ ನೀಡಿದ್ದಾರೆ.
ಇಂಡೋನೇಷ್ಯಾದಲ್ಲಿ ನಡೆದಿದ್ದ ಜಿ20 ರಾಷ್ಟ್ರಗಳ ಸಮ್ಮೇಳನಕ್ಕೆ ತೆರಳಲು 32,09,760 ಲಕ್ಷ ರೂ., ಸೆಪ್ಟೆಂಬರ್ನಲ್ಲಿ ಜಪಾನ್ ಪ್ರವಾಸಕ್ಕಾಗಿ 23,86,536 ರೂ., ಐರೋಪ್ಯ ಒಕ್ಕೂಟದ ಪ್ರವಾಸಕ್ಕಾಗಿ 2,15,61,304 ಕೋಟಿ ರೂ., ಈ ವರ್ಷದ ಸೆಪ್ಟೆಂಬರ್ನಲ್ಲಿ ಅಮೆರಿಕ ಪ್ರವಾಸಕ್ಕಾಗಿ 23,27,09,000 ಕೋಟಿ ರೂ. ಅನ್ನು ಕೇಂದ್ರ ಸರ್ಕಾರದ ಬೊಕ್ಕಸದಿಂದ ವಿನಿಯೋಗ ಮಾಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
2021ರ ಮಾರ್ಚ್ನಲ್ಲಿ ಬಾಂಗ್ಲಾದೇಶ, ಆ ವರ್ಷದ ಅಮೆರಿಕ, ಇಟೆಲಿ, ಯು.ಕೆ. ಪ್ರವಾಸಕ್ಕಾಗಿವ ವೆಚ್ಚವನ್ನು ಕೇಂದ್ರ ಗೃಹ ಖಾತೆಯ ವತಿಯಿಂದಲೇ ಭರಿಸಲಾಗಿದೆ ಎಂದರು.
50 ನಗರಗಳಲ್ಲಿ:
14 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 50 ನಗರ ಮತ್ತು ಪಟ್ಟಣಗಳಲ್ಲಿ ಸದ್ಯ 5ಜಿ ಸೇವೆ ಲಭ್ಯವಿದೆ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಗೆ ತಿಳಿಸಿದೆ. ಅ.1ರಿಂದ ದೇಶದಲ್ಲಿ 5 ಜಿ ಸೇವೆ ಶುರುವಾಗಿದೆ. ನ.26ರ ವರೆಗೆ ದೇಶದ 50 ನಗರಗಳಲ್ಲಿ ಈ ಸೌಲಭ್ಯ ಕಲ್ಪಿಸಲಾಗಿದೆ ಎಂದು ಸರ್ಕಾರ ಹೇಳಿದೆ.
ಯೋಚನೆ ಇಲ್ಲ:
ಅಖಿಲ ಭಾರತ ನ್ಯಾಯಾಂಗ ಸೇವೆ (ಎಐಜೆಎಸ್)ಯನ್ನು ಜಾರಿಗೊಳಿಸುವ ಇರಾದೆ ಸದ್ಯಕ್ಕೆ ಇಲ್ಲವೆಂದು ಕೇಂದ್ರ ಸರ್ಕಾರ ಲೋಕಸಭೆಗೆ ತಿಳಿಸಿದೆ.
ಈ ಬಗ್ಗೆ ವಿವಿಧ ರೀತಿಯ ಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿರುವುದರಿಂದ ಸದ್ಯಕ್ಕೆ ಎಐಜೆಎಸ್ ಜಾರಿ ಮಾಡುವ ಸಾಧ್ಯತೆ ಇಲ್ಲ ಎಂದು ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.
ಪೌರತ್ವ ತ್ಯಜಿಸಿದ 16 ಲಕ್ಷ ಮಂದಿ:
2011ರಿಂದ ಈಚೆಗೆ 16 ಲಕ್ಷ ಮಂದಿ ದೇಶದ ಪೌರತ್ವ ತ್ಯಜಿಸಿದ್ದಾರೆ. ಈ ಪೈಕಿ ಪ್ರಸಕ್ತ ವರ್ಷವೇ 1,83,741 ಮಂದಿ ಇತರ ದೇಶಗಳ ಪೌರತ್ವ ಸ್ವೀಕರಿಸಿದ್ದಾರೆ ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ತಿಳಿಸಿದೆ.
ಐಎಎಫ್ ನಲ್ಲಿ ಗರಿಷ್ಠವೆಂದರೆ ಶೇ.13.69 ಮಹಿಳಾ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲು ಸಾಧ್ಯವಿದೆ ಎಂದು ಕೇಂದ್ರ ರಕ್ಷಣಾ ಖಾತೆ ಸಹಾಯಕ ಸಚಿವ ಅಜಯ ಭಟ್ ಲೋಕಸಭೆಗೆ ತಿಳಿಸಿದ್ದಾರೆ. ಭೂಸೇನೆಯಲ್ಲಿ 10 ವಿಭಾಗಗಳಿಗೆ ಮಹಿಳೆಯರನ್ನು ನೇಮಿಸಲು ಅವಕಾಶ ಕಲ್ಪಿಸಲಾಗಿದೆ. ಸೇನೆಯ ವೈದ್ಯ ಮತ್ತು ದಂತ ವೈದ್ಯ ವಿಭಾಗದಲ್ಲಿ ಶೇ.21.25ರಷ್ಟು ಮಹಿಳೆಯರಿದ್ದಾರೆ ಎಂದಿದ್ದಾರೆ.
50 ಖಾಸಗಿ ವಿಧೇಯಕ:
ಲೋಕಸಭೆಯೊಂದರಲ್ಲಿಯೇ 50 ಖಾಸಗಿ ವಿಧೇಯಕಗಳನ್ನು ಸಂಸದರು ಮಂಡಿಸಿದ್ದಾರೆ. ಇವಿಎಂಗಳನ್ನು ರದ್ದು ಮಾಡಿ, ಹಳೆಯ ವ್ಯವಸ್ಥೆಯಾಗಿರುವ ಮತಪತ್ರಗಳನ್ನೇ ಜಾರಿಗೆ ತರುವ ಬಗ್ಗೆ ಬಿಎಸ್ಪಿಯ ಕುನ್ವರ್ ಡ್ಯಾನಿಷ್ ಅಲಿ ವಿಧೇಯಕ ಮಂಡಿಸಿದ್ದಾರೆ. ಇಂಟರ್ನೆಟ್ ಸಂಪರ್ಕ ಕುಸಿತ, ಸಾಲಮನ್ನಾ ಮತ್ತು ಥಳಿಸಿ ಹತ್ಯೆ ತಡೆಯುವ ವಿಧೇಯಕಗಳನ್ನು ಮಂಡಿಸಲಾಗಿದೆ.
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
Stampede: ಕುಂಭಕ್ಕೆ ಹೊರಟವರು ಕಾಲ್ತುಳಿತಕ್ಕೆ ಬಲಿ! ದೆಹಲಿ ರೈಲುನಿಲ್ದಾಣದಲ್ಲಿ ಆಗಿದ್ದೇನು?
You seem to have an Ad Blocker on.
To continue reading, please turn it off or whitelist Udayavani.