Hurun India Rich List 2024: ಏಷ್ಯಾದ ಶತಕೋಟ್ಯಧೀಶರ ರಾಜಧಾನಿ ಮುಂಬಯಿ !
"ಹುರುನ್' ಶ್ರೀಮಂತರ ಪಟ್ಟಿ: ಮುಂಬಯಿ ಅಗ್ರಸ್ಥಾನಿ
Team Udayavani, Aug 30, 2024, 7:10 AM IST
ಹೊಸದಿಲ್ಲಿ: ಏಷ್ಯಾದಲ್ಲಿ ಅತೀ ಹೆಚ್ಚು ಶತಕೋಟ್ಯಧಿಪತಿಗಳಿರುವ ರಾಜಧಾನಿ ಎಂಬ ಖ್ಯಾತಿಗೆ ಮುಂಬಯಿ ಪಾತ್ರವಾಗಿದೆ. ಚೀನದ ರಾಜಧಾನಿ ಬೀಜಿಂಗನ್ನು ಹಿಮ್ಮೆಟ್ಟಿಸಿ ಮುಂಬಯಿ ಅಗ್ರಸ್ಥಾನಕ್ಕೇರಿದೆ ಎಂದು ಹುರುನ್ ಇಂಡಿಯಾ ಬಿಡುಗಡೆಗೊಳಿಸಿದ 2024ರ ಶ್ರೀಮಂತರ ಪಟ್ಟಿಯಲ್ಲಿ ತಿಳಿಸಲಾಗಿದೆ.
ದೇಶದಲ್ಲಿ ಗರಿಷ್ಠ ಬಿಲಿಯನೇರ್ಗಳನ್ನು ಹೊಂದಿರುವ ನಗರಗಳ ಪಟ್ಟಿಯಲ್ಲಿ ಬೆಂಗಳೂರು 4ನೇ ಸ್ಥಾನಕ್ಕೆ ಜಾರಿದೆ.
ಮುಂಬಯಿಯಲ್ಲಿ ಈ ಬಾರಿ 58 ಶತ ಕೋಟ್ಯಧಿಪತಿಗಳ ಸಂಖ್ಯೆ ಹೆಚ್ಚಳವಾಗಿದ್ದು, ಒಟ್ಟು 92 ಶತಕೋಟ್ಯಧೀಶರನ್ನು ಹೊಂದಿದೆ. ಬೀಜಿಂಗ್ 91 ಶತಕೋಟ್ಯಧೀಶರನ್ನು ಒಳಗೊಳ್ಳುವ ಮೂಲಕಅಗ್ರಸ್ಥಾನದಿಂದ ಕೆಳಗಿಳಿದಿದೆ. ಇನ್ನು ಮುಂಬಯಿ ಯಲ್ಲಿ 386 ಮಂದಿ ಶ್ರೀಮಂತರಿದ್ದಾರೆ. ಈ ಮೂಲಕ ದೇಶದಲ್ಲಿರುವ ಶ್ರೀಮಂತರ ಪೈಕಿ ಶೇ. 25 ಮಂದಿ ಮುಂಬಯಿಯಲ್ಲೇ ವಾಸವಿದ್ದಾರೆ ಎನ್ನಲಾಗಿದೆ. ಶ್ರೀಮಂತರು ವಾಸಕ್ಕೆ ಆದ್ಯತೆ ನೀಡುವ ದೇಶದ ನಗರಗಳ ಸಾಲಿನಲ್ಲೂ ಮುಂಬಯಿ ಅಗ್ರಸ್ಥಾನ ಪಡೆದುಕೊಂಡಿದೆ.
ಬೆಂಗಳೂರನ್ನು
ಹಿಮ್ಮೆಟ್ಟಿಸಿದ ಹೈದರಾಬಾದ್
ದೇಶದಲ್ಲಿ ಅತೀ ಹೆಚ್ಚು ಶ್ರೀಮಂತರನ್ನು ಹೊಂದಿರುವ ನಗರಗಳ ಪೈಕಿ ಅಗ್ರ 3ನೇ ಸ್ಥಾನದಲ್ಲಿದ್ದ ಬೆಂಗಳೂರನ್ನು ಹೈದರಾಬಾದ್ ಈ ಬಾರಿ ಹಿಮ್ಮೆಟ್ಟಿಸಿದೆ. 18 ಮಂದಿ ಶತಕೋಟ್ಯಧಿಪತಿಗಳ ಹೊಸ ಸೇರ್ಪಡೆಯೊಂದಿಗೆ ಹೈದರಾಬಾದ್ನಲ್ಲಿರುವ ಶ್ರೀಮಂತರ ಸಂಖ್ಯೆ 104ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ 27 ಶತಕೋಟ್ಯಧಿಪತಿಗಳ ಸಂಖ್ಯೆ ಹೆಚ್ಚಾದರೂ ಒಟ್ಟು ಶ್ರೀಮಂತರ ಸಂಖ್ಯೆ 100ನ್ನಷ್ಟೇ ತಲುಪಿದೆ.
ಕರ್ನಾಟಕಕ್ಕೆ 6ನೇ ಸ್ಥಾನ
ಶ್ರೀಮಂತರು ವಾಸವಿರುವ ಭಾರತದ ಅಗ್ರ 10 ರಾಜ್ಯಗಳ ಪೈಕಿ ಕರ್ನಾಟಕಕ್ಕೆ 6ನೇ ಸ್ಥಾನ ದೊರೆತಿದೆ. ಮಹಾರಾಷ್ಟ್ರದಲ್ಲಿ 470 ಮಂದಿ, ದಿಲ್ಲಿ 213, ಗುಜರಾತ್ 129, ತಮಿಳುನಾಡು 119, ತೆಲಂಗಾಣ 109, ಕರ್ನಾಟಕ 108 ಮಂದಿ ಶ್ರೀಮಂತರಿಗೆ ಆಶ್ರಯ ನೀಡಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
One Nation, One Election ಅಸಂಭವ: ಕೇಂದ್ರ ಸಂಪುಟ ನಿರ್ಧಾರಕ್ಕೆ ಖರ್ಗೆ ವಿರೋಧ
Rahul Gandhi ವಿರುದ್ಧ ಕೇಂದ್ರ ಸಚಿವ, ಬಿಜೆಪಿಗರ ಹೇಳಿಕೆ;ದೇಶದ ವಿವಿಧೆಡೆ ಕೈ ಪ್ರತಿಭಟನೆ
One Nation One Election; ಏಕಕಾಲದಲ್ಲಿ ಚುನಾವಣೆ: ಕೇಂದ್ರ ಸಚಿವ ಸಂಪುಟ ಒಪ್ಪಿಗೆ
School Bus: ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಬಸ್ಸಿನಲ್ಲಿ ಬ್ಯಾಟರಿ ಸ್ಫೋಟ…
Haryana ಭರ್ಜರಿ ಗ್ಯಾರಂಟಿಗಳನ್ನು ಘೋಷಿಸಿದ ಕಾಂಗ್ರೆಸ್: ಏನೇನಿದೆ?
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
UV Fusion: ಪ್ರಕೃತಿಯನ್ನು ಮರೆತ ನಮ್ಮ ಉಳಿವು ಅಸಾಧ್ಯ
Rummy Aata Movie: ಸೆ.20ರಿಂದ ರಮ್ಮಿ ಆಟ ಶುರು
Viral Video: ಮೆದುಳಿನ ಸರ್ಜರಿ ನಡೆಸುವ ವೇಳೆ ಜೂ.ಎನ್ ಟಿಆರ್ ಸಿನಿಮಾ ವೀಕ್ಷಿಸಿದ ರೋಗಿ.!
Video: ಕೇವಲ ಒಂದೇ ಚಕ್ರದಲ್ಲಿ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಿದ ಪೈಲೆಟ್
Pavagada: ಆಂಬ್ಯುಲೆನ್ಸ್ ಸಿಗದೆ ವೃದ್ದ ಮೃತದೇಹವನ್ನು ಬೈಕ್ ನಲ್ಲಿಯೇ ಕೊಂಡೊಯ್ದ ಮಕ್ಕಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.