![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
Team Udayavani, Sep 9, 2022, 4:09 PM IST
ಹೈದರಾಬಾದ್: ಅತ್ಯಂತ ಜನಪ್ರಿಯ ಹೈದರಾಬಾದ್ನ ಬಾಲಾಪುರ ಗಣಪತಿಯ, 21 ಕೆಜಿಯ ಲಡ್ಡು ಪ್ರಸಾದ ಈ ಬಾರಿ ಬರೋಬ್ಬರಿ 24. 60 ಲಕ್ಷ ರೂ. ಗೆ ಹರಾಜಾಗಿದೆ. ಸುಮಾರು 21 ಕೆಜಿಯ ಈ ಲಡ್ಡು ಪ್ರಸಾದವನ್ನು ಬಾಲಾಪುರ ಗಣೇಶ ಉತ್ಸವದ ಸಮಿತಿ ಸದಸ್ಯ ಲಕ್ಷ್ಮ ರೆಡ್ಡಿ ಎನ್ನುವವರು ಖರೀದಿಸಿ ದಾಖಲೆ ಬರೆದಿದ್ದಾರೆ.
ಇದನ್ನೂ ಓದಿ:ರಣಬೀರ್ ‘ಬ್ರಹ್ಮಾಸ್ತ್ರ’ ರಿವೀವ್: ವಿಎಫ್ ಎಕ್ಸ್ ಹೆಸರಲ್ಲಿ ‘ಲೇಸರ್ ಶೋ’ ಎಂದ ಜನ
ಸುಮಾರು 10 ಮಂದಿ ಈ ಲಡ್ಡು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದು, 1,116 ರೂ ಬೆಲೆಯಿಂದ ಈ ಹರಾಜು ಪ್ರಕ್ರಿಯೆ ಆರಂಭವಾಗಿ 24.60 ಲಕ್ಷ ರೂ. ಹರಾಜು ಪ್ರಕ್ರಿಯೆ ಕೊನೆಗೊಂಡಿದೆ.
ಬಾಲಾಪುರ ಗಣೇಶನ ಲಡ್ಡು ಪ್ರಸಾದ ಹರಾಜು ಪ್ರಕ್ರಿಯೆ 1994ರಲ್ಲಿ ಪ್ರಾರಂಭವಾಗಿದ್ದು, ಪ್ರತಿ ವರ್ಷ 9 ದಿನಗಳ ಕಾಲ ಗಣೇಶೋತ್ಸವವನ್ನು ಅದ್ದೂರಿಯಿಂದ ಆಚರಿಸಿ, 9 ನೇ ದಿನ ಲಡ್ಡು ಹರಾಜು ನಡೆಯುತ್ತದೆ. ಕಳೆದ ವರ್ಷ (2021) 21 ಕೆಜಿಯ ಲಡ್ಡು, 18.90 ಲಕ್ಷ ರೂ. ಮಾರಾಟವಾಗಿತ್ತು.
You seem to have an Ad Blocker on.
To continue reading, please turn it off or whitelist Udayavani.