ಪ್ರಧಾನಿ ಸ್ಥಾನಕ್ಕೆ ನಾನು ಸಿದ್ಧ: ರಾಹುಲ್ ಗಾಂಧಿ
Team Udayavani, Sep 13, 2017, 6:00 AM IST
ಬರ್ಕ್ಲೀ (ಕ್ಯಾಲಿಫೋರ್ನಿಯಾ): “ನಾನು ಪ್ರಧಾನಿ ಹುದ್ದೆಗೆ ಸಿದ್ಧನಿದ್ದೇನೆ, ಅವಕಾಶ ಬಂದರೆ ಒಪ್ಪಿಕೊಳ್ಳುತ್ತೇನೆ. ಆದರೆ ಕಾಂಗ್ರೆಸ್ನಲ್ಲಿ ಸಂಘಟನಾ ವ್ಯವಸ್ಥೆ ಇದ್ದು, ಆರಿಸಿ ಬರಬೇಕಾಗುತ್ತದೆ’ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
2 ವಾರಗಳ ಅಮೆರಿಕ ಪ್ರವಾಸ ಆರಂಭಿಸಿ ರುವ ಅವರು, ಕ್ಯಾಲಿಫೋರ್ನಿಯಾದ ಬರ್ಕ್ಲೀಯಲ್ಲಿನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾ ನಿಲಯದಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದು 70 ವರ್ಷವಾದ ನೆನಪಿನಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಂಶಾಡಳಿತ ರಾಜಕಾರಣದ ಬಗ್ಗೆ ಸಂವಾದ ದಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಭಾರತದಲ್ಲಿ ಇದು ಮಾಮೂಲು. ನಾನಷ್ಟೇ ಅಲ್ಲ, ಅಖೀಲೇಶ್ ಯಾದವ್, ಪ್ರೇಮ್ಕುಮಾರ್ ಧುಮಾಲ್ ಪುತ್ರ, ಎಂ.ಕೆ. ಸ್ಟಾಲಿನ್ ಹೆಸರುಗಳನ್ನು ಪ್ರಸ್ತಾವಿಸಿದ್ದಾರೆ. ರಾಜಕಾರಣದಲ್ಲಷ್ಟೇ ಅಲ್ಲ, ಅಂಬಾನಿ ಮಕ್ಕಳು, ಅಭಿಷೇಕ್ ಬಚ್ಚನ್ ಕೂಡ ವಂಶಪಾರಂಪರ್ಯದ ಕೂಸುಗಳೇ ಎಂದು ಹೇಳಿದ್ದಾರೆ. ಹಾಗಂತ ವಂಶಾಡಳಿತ ರಾಜಕಾರಣವನ್ನು ನಾನು ಒಪ್ಪಿಕೊಳ್ಳುತ್ತೇನೆ ಎಂದಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಬೇಡ ಎನ್ನುವುದು ಕಷ್ಟ. ಬೇರೆ ಪಕ್ಷಗಳಿಗೆ ಹೋಲಿಕೆ ಮಾಡಿದರೆ ಕಾಂಗ್ರೆಸ್ನಲ್ಲೇ ಕಡಿಮೆ ಎಂದಿದ್ದಾರೆ.
ಈ ಸಂದರ್ಭದಲ್ಲಿ ಪ್ರಧಾನಿ ಹುದ್ದೆಗೂ ತಾವು ಸಿದ್ಧವಿರುವುದಾಗಿ ಹೇಳಿದ ಅವರು, ಕಾಂಗ್ರೆಸ್ನಲ್ಲಿ ಸಂಘಟನಾ ಚುನಾವಣಾ ವ್ಯವಸ್ಥೆ ಇದೆ. ಈ ಮೂಲಕವೇ ಅದು ನಿರ್ಧಾರವಾಗಬೇಕು. ಪಕ್ಷ ಒಪ್ಪಿದಲ್ಲಿ, ಇದಕ್ಕಾಗಿ ಆರಿಸಿ ಕಳುಹಿಸಿದಲ್ಲಿ ಈ ಹೊಣೆ ಹೊರಲು ಸಿದ್ಧವಿರುವುದಾಗಿ ಹೇಳಿದ್ದಾರೆ.
ರಾಹುಲ್ ಭಾಷಣದ ಪ್ರಮುಖಾಂಶಗಳು
– ಭಾರತ ಅಹಿಂಸಾ ದಾರಿಯಲ್ಲಿ ಬೆಳೆದು ಬಂದದ್ದು. ಆದರೆ ಜಗತ್ತಿನ ತುಂಬಾ ಮಂದಿಗೆ ಭಾರತದ ಬಗ್ಗೆ ಅರ್ಥವೇ ಆಗಿಲ್ಲ. ಅಹಿಂಸಾ ತತ್ವವನ್ನು ಪಸರಿಸಿದ್ದು ಮಹಾತ್ಮಾ ಗಾಂಧೀಜಿ. ಆದರೆ ಇದನ್ನು ಪಾಲಿಸುವುದು ತುಂಬಾ ಕಷ್ಟದ ಕೆಲಸ. ಇದನ್ನೇ ಭಾರತ ಪಾಲಿಸಿಕೊಂಡು ಹೋಗುತ್ತದೆ.
– ನೋಟು ಅಮಾನ್ಯ ಮತ್ತು ಜಿಎಸ್ಟಿ ಈಗಿನ ಸರಕಾರ ಮಾಡಿದ ಎರಡು ಮಹಾ ತಪ್ಪುಗಳು. ಆರ್ಥಿಕ ಸಲಹೆಗಾರ ಮತ್ತು ಸಂಸತ್ಗೆ ಗೊತ್ತಿಲ್ಲದಂತೆ ಇದನ್ನು ಘೋಷಿಸಿ ಇಡೀ ದೇಶವೇ ಕಷ್ಟದಲ್ಲಿ ಬೀಳುವಂತೆ ಮಾಡಿದರು.
– ಕಾಂಗ್ರೆಸ್ ಪಕ್ಷ ಸಂವಾದ ಮತ್ತು ಚರ್ಚೆಗೆ ಆದ್ಯತೆ ನೀಡುತ್ತದೆ. ಆದರೆ 2012ರಲ್ಲಿ ನಾವು ಈ ಚರ್ಚೆ ಮತ್ತು ಸಂವಾದವನ್ನು ಸಂಪೂರ್ಣವಾಗಿ ಮರೆತೆವು. ಹೀಗಾಗಿಯೇ 2014ರಲ್ಲಿ ಕಾಂಗ್ರೆಸ್ ಸೋಲಲು ಕಾರಣವಾಯಿತು. ಪ್ರತಿ ನಿರ್ಧಾರವನ್ನೂ ಸಂವಾದದ ಮೂಲಕವೇ ನಾನು ತೆಗೆದುಕೊಳ್ಳುತ್ತೇನೆ.
– ಯುಪಿಎ ಸರಕಾರವಿದ್ದಾಗ 9ವರ್ಷ ಕಾಶ್ಮೀರ ಸಮಸ್ಯೆ ಬಗೆಹರಿಸಿದ್ದೆವು. ಈಗಿನ ಸರಕಾರದ ತಪ್ಪು ನಿರ್ಧಾರದಿಂದಾಗಿ ಕಾಶ್ಮೀರದಲ್ಲಿ ಮತ್ತೆ ಹಿಂಸೆ ಶುರುವಾಗಿದೆ.
– ನರೇಂದ್ರ ಮೋದಿ ಅವರು ನನಗೂ ಪ್ರಧಾನಿಯೇ. ಅವರು ಅತ್ಯುತ್ತಮ ಸಂವಹನಕಾರರು. ಅವರು ಯಾವುದೇ ವಿಚಾರವನ್ನು ಜನರಿಗೆ ಅರ್ಥವಾಗುವಂತೆ ಹೇಳುತ್ತಾರೆ. ಆದರೆ ಅವರು ಜನರ ಮಾತು ಕೇಳುವಲ್ಲಿ ವಿಫಲರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PM: ಕಾಂಗ್ರೆಸ್ ಡ್ರಗ್ಸ್ ದಂಧೆ ಹಣ ಚುನಾವಣೆ ಗೆಲ್ಲಲು ಬಳಸಿಕೊಳ್ಳುತ್ತಿದೆ: ಪ್ರಧಾನಿ ಮೋದಿ
IFFI: ನವೆಂಬರ್ 20ರಿಂದ ಗೋವಾದಲ್ಲಿ 55ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವ
West Bengal: ಬಾಲಕಿಯನ್ನು ಅಪಹರಿಸಿ ಕೊ*ಲೆ: ಭುಗಿಲೆದ್ದ ಆಕ್ರೋಶ, ಪ್ರತಿಭಟನೆ
Pune: ಉತ್ತರಕನ್ನಡ ಮೂಲದ ಮಾಜಿ ಕ್ರಿಕೆಟಿಗ, ನಟ ಸಲೀಲ್ ತಾಯಿ ಶವ ಪತ್ತೆ, ಗಂಟಲು ಸೀಳಿ ಕೊಲೆ?
ಈ ಬಾರಿಯ ದುರ್ಗಾ ಪೂಜೆಗೆ ಬಂಗಾಳದ ಕೈದಿಗಳಿಗೆ ಮಟನ್, ಚಿಕನ್ ಬಿರಿಯಾನಿ ಜೊತೆಗೆ ವಿಶೇಷ ಖಾದ್ಯ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
IFFI: ಗೋವಾದಲ್ಲಿ 55ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನ.20ರಿಂದ ಆರಂಭ
PM: ಕಾಂಗ್ರೆಸ್ ಡ್ರಗ್ಸ್ ದಂಧೆ ಹಣ ಚುನಾವಣೆ ಗೆಲ್ಲಲು ಬಳಸಿಕೊಳ್ಳುತ್ತಿದೆ: ಪ್ರಧಾನಿ ಮೋದಿ
Heavy Rain: ದಾಂಡೇಲಿಯಲ್ಲಿ ವ್ಯಾಪಕ ಮಳೆ… ಅಂಗಡಿ, ಮನೆಗಳಿಗೆ ನುಗ್ಗಿದ ಕೊಳಚೆ ನೀರು
IFFI: ನವೆಂಬರ್ 20ರಿಂದ ಗೋವಾದಲ್ಲಿ 55ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವ
Women’s T20 World Cup: ಮೊದಲ ಪಂದ್ಯದಲ್ಲೇ ಸೋತ ಭಾರತದ ಸೆಮಿ ಫೈನಲ್ ಹಾದಿ ಹೀಗಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.