Pronunciation; ಮಂತ್ರಗಳ ಉಚ್ಛಾರಣೆ ಕುರಿತು ಟೀಕೆ: ತಿರುಗೇಟು ನೀಡಿದ ಮಮತಾ ಬ್ಯಾನರ್ಜಿ
ನಾನು ನನ್ನದೇ ಆದ ‘ಘರಾನಾ’ವನ್ನು ಅನುಸರಿಸುತ್ತೇನೆ...
Team Udayavani, Oct 4, 2024, 8:37 PM IST
ಕೋಲ್ಕತಾ: ಮಂತ್ರಗಳ ಉಚ್ಛಾರಣೆಯಲ್ಲಿ ತಪ್ಪು ಕಂಡು ಟೀಕಿಸಿದವರ ಮೇಲೆ ವಾಗ್ದಾಳಿ ಮಾಡಿದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ”ಪ್ರಾಜ್ಞರು ಒಪ್ಪಿಕೊಂಡಿರುವ ತಮ್ಮದೇ ಆದ ಘರಾನಾವನ್ನು ನಾನು ಅನುಸರಿಸುತ್ತಿದ್ದೇನೆ” ಎಂದು ಶುಕ್ರವಾರ(ಅ4) ಪ್ರತಿಪಾದಿಸಿದ್ದಾರೆ.
ದಕ್ಷಿಣ ಕೋಲ್ಕತಾದಲ್ಲಿ ಎಕ್ದಾಲಿಯಾ ಎವರ್ಗ್ರೀನ್ ದುರ್ಗಾ ಪೂಜೆಯನ್ನು ಉದ್ಘಾಟಿಸಿ, ಸ್ತೋತ್ರವನ್ನು ಪಠಿಸುವ ಮೊದಲು ಬ್ಯಾನರ್ಜಿ “ನಾನು ಮಂತ್ರಗಳನ್ನು ಪಠಿಸುವಾಗ, ಕೆಲವರು ನನ್ನ ಉಚ್ಚಾರಣೆಯಲ್ಲಿ ದೋಷವನ್ನು ಕಂಡುಕೊಳ್ಳುತ್ತಾರೆ, ಅದು ಧರ್ಮಗ್ರಂಥಗಳನ್ನು ಉಲ್ಲಂಘಿಸುತ್ತದೆ ಎಂದು ಹೇಳುತ್ತಾರೆ” ಎಂದರು.
“ಪ್ರತಿಯೊಂದು ಗ್ರಂಥದಲ್ಲಿಯೂ ಮಂತ್ರಗಳ ಉಚ್ಚಾರಣೆಯು ಒಂದೇ ರೀತಿ ಇರುವುದಿಲ್ಲ ಎಂಬುದು ವಿಮರ್ಶಕರಿಗೆ ತಿಳಿದಿಲ್ಲ. ಪ್ರತಿ ಪಂಚಾಂಗವು ಒಂದೇ ಆಗಿದೆಯೇ? ನಾನು ನನ್ನದೇ ಆದ ‘ಘರಾನಾ’ವನ್ನು ಅನುಸರಿಸುತ್ತೇನೆ ಅದನ್ನು ಪ್ರಾಜ್ಞರು ಕೂಡ ಒಪ್ಪಿಕೊಂಡಿದ್ದಾರೆ. ನನ್ನ ಅಭಿವ್ಯಕ್ತಿಯ ವಿಧಾನವು ಯಾರಿಗೋ ಇಷ್ಟವಾಗದಿದ್ದರೆ, ನಾನೇನು ಮಾಡಲು ಸಾಧ್ಯವಿಲ್ಲ ”ಎಂದರು.
ನನ್ನ ಸ್ತೋತ್ರಗಳ ಉಚ್ಚಾರಣೆ ಬೇಲೂರು ಮಠದ ರಾಮಕೃಷ್ಣ ಮಿಷನ್ನ ಹಿರಿಯ ಸನ್ಯಾಸಿ ಮತ್ತು ಅವರ ಧರ್ಮನಿಷ್ಠ ಬ್ರಾಹ್ಮಣ ತಂದೆ ಪ್ರಮಾಣೀಕರಿಸಿದ್ದಾರೆ ಎಂದು ಮಮತಾ ಹೇಳಿದರು. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಮೂಲಕ ಕೆಲವು ವಿಡಿಯೋ ರೀಲ್ಸ್ ಗಳಲ್ಲಿ ನನ್ನ ಧ್ವನಿ ಮತ್ತು ಮಾತುಗಳನ್ನು ಕ್ಲೋನ್ ಮಾಡಲಾಗುತ್ತಿದೆ ಮತ್ತು ನಕಲಿ ಮಾಡಲಾಗುತ್ತಿದೆ ಎಂದು ಅಸಮಾಧಾನ ಹೊರ ಹಾಕಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Isha Foundation; ಸನ್ಯಾಸ ತೆಗೆದುಕೊಳ್ಳಲು ನಾವು ಯಾರನ್ನೂ ಒತ್ತಾಯಿಸುವುದಿಲ್ಲ…
Israel ಯುದ್ಧಕ್ಕೆ ಭಾರತೀಯರನ್ನು ನೇಮಿಸಿಕೊಳ್ಳಲು ಮೋದಿ ಸರಕಾರ ನೆರವು: ಖರ್ಗೆ ಆರೋಪ
Pune; ಘಾಟ್ ಪ್ರದೇಶದಲ್ಲಿ ಯುವತಿಯ ಮೇಲೆ ಗ್ಯಾಂಗ್ ರೇ*ಪ್:ಸ್ನೇಹಿತನಿಗೆ ಹಲ್ಲೆ
Manipur ಹಿಂಸಾಚಾರ: ಪೊಲೀಸ್ ಠಾಣೆಗೆ ನುಗ್ಗಿ ಶಸ್ತ್ರಾಸ್ತ್ರ ಲೂಟಿಗೈದ ಗುಂಪು
Tirupati laddu; ತನಿಖೆಗೆ ಸ್ವತಂತ್ರ ಎಸ್ಐಟಿ: ಸುಪ್ರೀಂ ನಿರ್ಧಾರಕ್ಕೆ ಟಿಡಿಪಿ ಸ್ವಾಗತ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Women’s T20 World Cup: ವಿಂಡೀಸನ್ನು ಹೊಸಕಿ ಹಾಕಿದ ದಕ್ಷಿಣ ಆಫ್ರಿಕಾ
Davanagere: ಹಳೇ ಜಾತಿಗಣತಿ ಒಪ್ಪಲ್ಲ… ಬೇಕಾದರೆ ಹೊಸದಾಗಿ ಮಾಡಲಿ… :ಶಾಸಕ ಶಾಮನೂರು
Vijayapura; ಮಹಿಳೆಯ ಕೊ*ಲೆಗೈದ ಅಪರಾಧಿಗೆ ಜೀವಾವಧಿ ಶಿಕ್ಷೆ
BBK11: ವಂಚನೆ ಪ್ರಕರಣ ನೆನೆದು ಬಿಗ್ ಬಾಸ್ ಮನೆಯಲ್ಲಿ ಕಣ್ಣೀರಿಟ್ಟ ಚೈತ್ರಾ!
Iran ಸರ್ವೋಚ್ಚ ನಾಯಕನ ಕೈಯಲ್ಲಿ ರೈಫಲ್!; ಇಸ್ರೇಲ್ ದೀರ್ಘಕಾಲ ಉಳಿಯುವುದಿಲ್ಲ..
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.