Bageshwar; ಉತ್ತರಾಖಂಡದ ಪರ್ವತದಲ್ಲಿ ಅಕ್ರಮ ದೇಗುಲ ನಿರ್ಮಾಣ!
ಭಗವತಿ ಆದೇಶ ಹಿನ್ನೆಲೆಯಲ್ಲಿ ಈ ತೀರ್ಮಾನ: ಬಾಬಾ ಚೈತನ್ಯ
Team Udayavani, Jul 17, 2024, 6:06 AM IST
ಡೆಹ್ರಾಡೂನ್: ಪರ್ವತ ಪ್ರದೇಶದ 16500 ಅಡಿ ಎತ್ತರದಲ್ಲಿ ಸ್ವಯಂ ಘೋಷಿತ ದೇವಮಾನವನೊಬ್ಬ ಸ್ಥಳೀಯ ಆಡಳಿತದ ಗಮನಕ್ಕೂ ಬರದಂತೆ ಅಕ್ರಮವಾಗಿ ದೇಗುಲ ನಿರ್ಮಿಸಿರುವ ಘಟನೆ ಉತ್ತರಾಖಂಡದ ಬಾಗೇಶ್ವರ್ ಜಿಲ್ಲೆಯಲ್ಲಿ ನಡೆದಿದೆ.
ಸುಂದರದುಂಗ ಪರ್ವತ ಪ್ರದೇಶದಲ್ಲಿರುವ “ದೇವಿ ಕುಂಡ’ದ ಬಳಿ ಬಾಬಾ ಯೋಗಿ ಚೈತನ್ಯ ಆಕಾಶ್ ದೇಗುಲ ನಿರ್ಮಿಸಿದ್ದಾರೆ. ತನ್ನ ಕನಸಿನಲ್ಲಿ ದೇವಿ ಭಗವತಿ ಪ್ರತ್ಯಕ್ಷಳಾಗಿ ಕುಂಡದ ಬಳಿ ದೇಗುಲ ನಿರ್ಮಾಣಕ್ಕೆ ಆದೇಶಿಸಿದ್ದಾಳೆಂದು ಪರ್ವತ ಪ್ರದೇಶದಲ್ಲಿರುವ ಗ್ರಾಮಸ್ಥರಿಗೆ ಯೋಗಿ ಹೇಳಿದ್ದಾರೆ.
ಬಳಿಕ ಗ್ರಾಮಸ್ಥರ ನೆರವನ್ನೇ ಪಡೆದು ಸೂಕ್ಷ್ಮ ಪ್ರದೇಶದಲ್ಲಿ ದೇಗುಲ ನಿರ್ಮಿಸಿದ್ದಾರೆ. ಪ್ರತಿ 12 ವರ್ಷಕ್ಕೊಮ್ಮೆ ದೇವಿ ಕುಂಡದಲ್ಲಿ ನಂದರಾಜ ಯಾತ್ರೆ ನಡೆಯುತ್ತದೆ. ಆ ಸಂದರ್ಭದಲ್ಲಿ ಗ್ರಾಮಸ್ಥರು ಅಲ್ಲಿನ ಪುಣ್ಯ ನದಿಗೆ ಪೂಜೆ ಸಲ್ಲಿಸುತ್ತಿದ್ದರು. ಆದರೆ, ಸ್ವಯಂ ಘೋಷಿತ ದೇವಮಾನವ ಅದನ್ನು ಸ್ವಿಮ್ಮಿಂಗ್ ಪೂಲ್ ಮಾಡಿಕೊಂಡು ಅಪವಿತ್ರಗೊಳಿಸಿದ್ದಾನೆಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಬಳಿಕ ವಿಚಾರ ಜಿಲ್ಲಾಡಳಿತದ ಗಮನಕ್ಕೆ ಬಂದಿದೆ. ಬಳಿಕ ಈ ಕುರಿತು ತನಿಖೆ ಆರಂಭಿಸಿದೆ. ಅಕ್ರಮ ಕಟ್ಟಡವನ್ನು ತೆರವುಗೊಳಿಸಿ, ಬಾಬಾ ಚೈತನ್ಯ ವಿರುದ್ದ ಕ್ರಮ ಕೈಗೊಳ್ಳುವುದಾಗಿ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bangladesh ಕ್ಯಾತೆ: ದುರ್ಗಾ ಪೂಜೆಗೆ ಹಿಲ್ಸಾ ಮೀನಿಲ್ಲ!
Missile;ದಿನದಲ್ಲಿ 2 ಸೀಮಿತ ವ್ಯಾಪ್ತಿ ಪ್ರಯೋಗ ಯಶಸ್ವಿ:ಏನಿದು ಸೀಮಿತ ವ್ಯಾಪ್ತಿಯ ಕ್ಷಿಪಣಿ?
Adani Group 2,610 ಕೋ.ರೂ. ವಶ; ತನಿಖೆ ಸುಪ್ರೀಂ ವಹಿಸಲಿ: ಕಾಂಗ್ರೆಸ್
PM Modi ಹುಟ್ಟುಹಬ್ಬಕ್ಕೆ ದರ್ಗಾದಲ್ಲಿ 4,000 ಕೆ.ಜಿ. ಖಾದ್ಯ
PM Modi ಯಿಂದ ಪಶ್ಚಿಮ ಬಂಗಾಲಕ್ಕೆ ಸ್ವಾತಂತ್ರ್ಯ ಘೋಷಿಸಿ: ಬಾಂಗ್ಲಾ ಉಗ್ರ
MUST WATCH
ಹೊಸ ಸೇರ್ಪಡೆ
Udupi: ಕರ್ತವ್ಯಲೋಪ: 80 ಪೊಲೀಸ್ ಸಿಬಂದಿ ಅಮಾನತು; ಎಸ್ಪಿ ಕಟ್ಟುನಿಟ್ಟಿನ ಕ್ರಮ
Mangaluru: ಶ್ರೀಮತಿ ಶೆಟ್ಟಿ ಕೊ* ಪ್ರಕರಣ: ಮೂವರ ಅಪರಾಧ ಸಾಬೀತು
Nagamangala Case ಬಂಧನದ ಭೀತಿ: ಊರು ಬಿಟ್ಟ ಯುವಕರು
Officers Meeting: ವಸತಿ ಯೋಜನೆ ಫಲಾನುಭವಿಗಳಿಗೆ ಶೀಘ್ರ ಅನುದಾನ: ಸಂಸದ ಕೋಟ ಸೂಚನೆ
Daily Horoscope: ಭವಿಷ್ಯದ ಕುರಿತು ವಿನಾಕಾರಣ ಚಿಂತೆ ಬಿಡಿ,ಉದ್ಯಮದಲ್ಲಿ ಪ್ರಗತಿ ತೃಪ್ತಿಕರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.